೩ ಗಂಟೆಗಳ ಕಾಲ ನಡೆದ ಯಶಸ್ವೀ ಶಸ್ತ್ರಚಿಕಿತ್ಸೆ
ಧರ್ಮ, ಅಧ್ಯಾತ್ಮ, ಸಾಧನೆ, ಉಪಾಸನೆ ಇತ್ಯಾದಿ ಎಲ್ಲವೂ ಸುಳ್ಳು ಎಂದು ಕೂಗಾಡುವ ನಾಸ್ತಿಕರು, ತಥಾಕಥಿತ ವಿಜ್ಞಾನಿಗಳು, ಬುದ್ಧಿಜೀವಿಗಳಿಗೆ ಕಪಾಳಮೋಕ್ಷ !

ನವ ದೆಹಲಿ – ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆಯಲ್ಲಿ (`ಏಮ್ಸ್’ನಲ್ಲಿ) ೨೪ ವರ್ಷದ ಯುವತಿಗೆ ‘ಬ್ರೇನ್ ಟ್ಯೂಮರ್’ನ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗ ಆಕೆಯು ಶ್ರೀ ಹನುಮಾನ ಚಾಲಿಸಾ ಪಠಿಸುತ್ತಿದ್ದ ಬಗ್ಗೆ ಶಸ್ತ್ರಕ್ರಿಯೆ ಮಾಡಿದ ತಂಡದ ಆಧುನಿಕ ವೈದ್ಯ ದೀಪಕ ಗುಪ್ತಾ ಇವರು ಮಾಹಿತಿಯನ್ನು ನೀಡಿದರು. ಆಸ್ಪತ್ರೆಯಲ್ಲಿ ಅನುಭವೀ ಆಧುನಿಕ ವೈದ್ಯರ ತಂಡವು ಆಕೆಯ ಮೇಲೆ `ನ್ಯೂರೋ ಸರ್ಜರಿ’ ಮಾಡಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಯುವತಿಯು ಎಚ್ಚರವಾಗಿದ್ದಳು. ಆಕೆಯ ಮೇಲೆ ನಡೆದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ.
Woman recites ‘Hanuman Chalisa’ while undergoing brain tumor surgery at AIIMS https://t.co/TPrN3vamNs
— Republic (@republic) July 23, 2021
ಡಾ. ದೀಪಕ ಗುಪ್ತಾ ಇವರು ಈ ಬಗ್ಗೆ ಮಾಹಿತಿ ನೀಡುವಾಗ, ಈ ಯುವತಿಯು ದೆಹಲಿಯ ಶಾಹದರಾ ಪರಿಸರದಲ್ಲಿ ವಾಸಿಸುತ್ತಾರೆ. ಆಕೆಯ ತಲೆಯ ಅನೇಕ ಕಡೆಗಳಲ್ಲಿ ‘ಟ್ಯೂಮರ್’ ಇತ್ತು. ಅದಕ್ಕಾಗಿ ಆಕೆಯ ಮೇಲೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಮೊದಲು ಆಕೆಯ ತಲೆಯ ಮೇಲ್ಭಾಗವನ್ನು ನಿಸ್ತೇಜಗೊಳಿಸಲು ‘ಚುಚ್ಚು ಮದ್ದು’ ನೀಡಲಾಯಿತು, ಅದೇ ರೀತಿ ನೋವು ನಿವಾರಣಾ ಔಷಧಿಯನ್ನೂ ನೀಡಲಾಯಿತು. ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿಸಲು ಆಕೆಯ ತಲೆಯಲ್ಲಿದ್ದ ನರಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಕೋಡಿಂಗ್ ಮಾಡಲಾಯಿತು, ಅದನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರಾಕ್ಟ್ಟೊಗ್ರಾಫಿ’ ಎಂದು ಹೇಳುತ್ತಾರೆ. ಈ ರೀತಿಯ ಶಸ್ತ್ರಚಿಕಿತ್ಸೆಯಿಂದ ಮೆದುಳಿಗೆ ಕಡಿಮೆ ಹಾನಿಯಾಗುತ್ತದೆ. ಜೊತೆಗೆ ಮೆದುಳಿನ ಮಹತ್ವವಾದ ಭಾಗ ಹಾಳಾಗಬಾರದೆಂದು ರೋಗಿಯನ್ನು ಎಚ್ಚರದಲ್ಲಿಡಲಾಗುತ್ತದೆ” ಎಂದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹನುಮಾನ ಚಾಲಿಸಾ ಅಥವಾ ಇತರ ಯಾವುದೇ ಧಾರ್ಮಿಕ ಉಪಾಸನೆ ಮಾಡಿದರೆ ಅನೇಕ ಲಾಭಗಳು ಆಗುತ್ತವೆ ಎಂದು ಹೇಳಿದರು.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!