ಭಯೋತ್ಪಾದಕರ ಸಹಾಯದಿಂದ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಆದ್ದರಿಂದ, ಭಾರತವು ಎಷ್ಟು ಡ್ರೋನ್ಗಳನ್ನು ಹೊಡೆದುರುಳಿಸಿದರೂ, ಪಾಕಿಸ್ತಾನವು ಭಾರತದ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ಮಾಡುತ್ತಲೇ ಇರುವುದು. ಆದ್ದರಿಂದ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಏಕೈಕ ಮಾರ್ಗವೆಂದರೆ ಪಾಕಿಸ್ತಾನವನ್ನು ನಾಶಪಡಿಸುವುದು ಎಂದು ಸರಕಾರವು ಈಗಲಾದರೂ ತಿಳಿದುಕೊಳ್ಳಬೇಕು !

ಶ್ರೀನಗರ – ಜಮ್ಮು-ಕಾಶ್ಮೀರ ನಡುವಿನ ಭಾರತೀಯ ಗಡಿಯಿಂದ ೮ ಕಿ.ಮೀ. ಒಳಗೆ ನುಸುಳಿದ ಭಯೋತ್ಪಾದಕರ ಡ್ರೋನ್ಅನ್ನು ಜುಲೈ ೨೩ ರಂದು ಭಾರತೀಯ ಸೇನೆಯು ಹೊಡೆದುರುಳಿಸಿದೆ. ಈ ಡ್ರೋನ್ನಿಂದ ೫ ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅವರು ಅಖನೂರ ಬಳಿ ಡ್ರೋನ್ನಿಂದ ದಾಳಿ ನಡೆಸಲು ಸಂಚು ಮಾಡಿದೆ ಎಂಬ ಮಾಹಿತಿ ಸಿಕ್ಕಿದ ನಂತರ ಸೈನ್ಯವು ವ್ಯೂಹವನ್ನು ರಚಿಸಿತು. ಅದರಂತೆ ಮಧ್ಯರಾತ್ರಿ ೧ ಗಂಟೆಗೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
Jammu and Kashmir Police shoots down drone in Akhnoor, recovers 5 kg IED | @kamaljitsandhu https://t.co/uh53KgDJay
— IndiaToday (@IndiaToday) July 23, 2021
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ಮಾತನಾಡಿ, ‘ಡ್ರೋನ್ ೬ ಅಡಿ ಉದ್ದ ಮತ್ತು ೧೭ ಕೆಜಿ ತೂಕವಿತ್ತು. ಈ ಡ್ರೋನ್ಗಳನ್ನು ಚೀನಾದಲ್ಲಿ ತಯಾರಿಸಲಾಗಿದ್ದು, ಅದರ ಬಿಡಿಭಾಗಗಳನ್ನು ತೈವಾನ್ನಲ್ಲಿ ತಯಾರಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಡ್ರೋನ್ನಿಂದ ೧೬ ಎಕೆ-೪೭ ರೈಫಲ್ಗಳು, ೩ ಎಂ-೪ ರೈಫಲ್ಗಳು, ೩೪ ಬಂದೂಕುಗಳು, ೧೫ ಗ್ರೆನೇಡ್ಗಳು ಮತ್ತು ೧೮ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಡ್ರೋನ್ಗಳಿಂದಲೂ ಹಣವನ್ನು ಸಹ ಕಳುಹಿಸಲಾಗಿದೆ. ಈವರೆಗೆ ಸುಮಾರು ೪ ಲಕ್ಷ ರೂಪಾಯಿಗಳಷ್ಟು ನಗದು ಮೊತ್ತವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯಿಬಾ ಈ ಭಯೋತ್ಪಾದಕ ಸಂಘಟನೆಗಳು ಡ್ರೋನ್ಗಳ ಸಹಾಯದಿಂದ ಕಾಶ್ಮೀರದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿವೆ.” ಎಂದು ಹೇಳಿದರು.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ