ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಈ ಲೇಖನಮಾಲೆಯಲ್ಲಿ ಇಲ್ಲಿಯವರೆಗೆ ನಾವು ವಿವಿಧ ಆಪತ್ತುಗಳು ಮತ್ತು ಅವುಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಈ ವಿಷಯದಲ್ಲಿನ ಅಂಶಗಳನ್ನು ನೋಡಿದೆವು. ಈ ಲೇಖನದಲ್ಲಿ ಈ ಎಲ್ಲ ಆಪತ್ತುಗಳ ಸಂದರ್ಭದಲ್ಲಿ ಕೆಲವು ಸಾಮಾನ್ಯ ಸೂಚನೆಗಳಿವೆ. ಅವುಗಳನ್ನು ಗಮನದಲ್ಲಿಟ್ಟು ಕೊಂಡು ಆಪತ್ತುಗಳು ಬರುವ ಮೊದಲು ಕೆಲವು ಸಿದ್ಧತೆಗಳನ್ನು ಮಾಡಬೇಕು.

೮. ವಿವಿಧ ಆಪತ್ತುಗಳ ಸಂದರ್ಭದಲ್ಲಿ ಸಾಮಾನ್ಯ ಸೂಚನೆಗಳು

ವಿವಿಧ ಆಪತ್ತುಗಳ ಸಮಯದಲ್ಲಿ ಕೆಲವು ಸಾಮಾನ್ಯ ಕೃತಿಗಳಿರುತ್ತವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಿದ್ಧತೆಯನ್ನು ಮಾಡಿದರೆ ತಮ್ಮ ತಮ್ಮ ಕುಟುಂಬದವರ ಮತ್ತು ನೆರೆಹೊರೆಯವರ ರಕ್ಷಣೆಯಾಗಬಹುದು, ಹಾಗೆಯೇ ಅತಿ ಕಡಿಮೆ ಹಾನಿಯಾಗುವುದು ಮತ್ತು ತೊಂದರೆಗಳೂ ಕಡಿಮೆಯಾಗುವವು.

೮ ಅ. ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ? ಎಂಬುದರ ಅಭ್ಯಾಸವನ್ನು (ಪ್ರ್ಯಾಕ್ಟಿಸ್) ಮಾಡಿರಿ !

೧. ತುರ್ತುಪರಿಸ್ಥಿತಿಯಲ್ಲಿ ಮನೆಯಿಂದ ಹೇಗೆ ಹೊರಗೆ ಹೋಗಬೇಕು ಅಥವಾ ಮನೆಯಲ್ಲಿಯೇ ಸುರಕ್ಷಿತ ಸ್ಥಳದಲ್ಲಿ ಸುರಕ್ಷಿತವಾಗಿ ಹೇಗಿರಬೇಕು, ಹಾಗೆಯೇ ಪ್ರಥಮೋಪಚಾರವನ್ನು ಹೇಗೆ ಮಾಡಬೇಕು, ಇವುಗಳ ಬಗ್ಗೆ ಕುಟುಂಬದವರೆಲ್ಲರೂ ತರಬೇತಿಯನ್ನು ಪಡೆಯಬೇಕು ಹಾಗೂ ನಿಯಮಿತವಾಗಿ ಅದರ ಪ್ರತ್ಯಕ್ಷ ಅಭ್ಯಾಸವನ್ನು (ಪ್ರ್ಯಾಕ್ಟೀಸ್) ಮಾಡಬೇಕು.

೨. ಆಪತ್ಕಾಲೀನ ಪರಿಸ್ಥಿತಿಯಲ್ಲಿ ಕುಟುಂಬದೊಂದಿಗೆ ನೆರೆಹೊರೆಯವರೂ ಏನು ಮಾಡಬೇಕು, ಎಂಬುದರ ಬಗ್ಗೆ ಅವರೊಂದಿಗೆ ಚರ್ಚೆಯನ್ನು ಮಾಡಿ ಆಪತ್ಕಾಲದಲ್ಲಿ ಯಾವ ಕೃತಿಗಳನ್ನು ಮಾಡಬೇಕು ಅಥವಾ ಯಾವ ಕೃತಿಗಳನ್ನು ಮಾಡಬಾರದು ಎಂಬುದನ್ನು ನಿರ್ಧರಿಸಿ, ಅದರ ಅಭ್ಯಾಸವನ್ನೂ (ಪ್ರ್ಯಾಕ್ಟೀಸ್) ಮಾಡಬೇಕು.

೮ ಆ. ಗ್ಯಾಸ್ ಸಿಲಿಂಡರ್, ವಿದ್ಯುತ್ ಪ್ರವಾಹ, ನೀರಿನನಲ್ಲಿ ಮುಂತಾದವುಗಳ ಮುಖ್ಯ ಸ್ವಿಚ್ (ಮೇನ್ ಸ್ವಿಚ್) ಬಂದ್ ಮಾಡುವ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು.

೩. ‘ತುರ್ತುಪರಿಸ್ಥಿತಿಯ ಕಿಟ್ (Emergency Kit) : ಆಪತ್ಕಾಲದಲ್ಲಿ ಇದನ್ನು ನಿಮ್ಮ ಜೊತೆಗೆ ತೆಗೆದುಕೊಂಡು ನೀವು ಮನೆಯಿಂದ ಹೊರಗೆ ಬರಬಹುದು. ಕಿಟ್ ಇಡುವ ಒಂದು ಸ್ಥಳವನ್ನು ನಿರ್ಧರಿಸಿಬೇಕು ಮತ್ತು ಅದು ಎಲ್ಲರಿಗೂ ಗೊತ್ತಿರಬೇಕು. ಇದರಲ್ಲಿ

ಅ. ಬ್ಯಾಟರಿಗಳಿಂದ ನಡೆಯುವ ಟಾರ್ಚ್

ಆ. ಹೆಚ್ಚುವರಿ ಬ್ಯಾಟರಿಗಳು (ಬ್ಯಾಟರಿ ಸೆಲ್)

ಇ. ಬ್ಯಾಟರಿಗಳಿಂದ ನಡೆಯವ ರೇಡಿಯೋ

ಈ. ಪ್ರಥಮೋಪಚಾರ ಸಾಹಿತ್ಯದ ಪೆಟ್ಟಿಗೆ ಅಥವಾ ಚೀಲ

ಉ. ಕನಿಷ್ಟ ೩ ದಿನಗಳಿಗೆ ಬೇಕಾಗುವಷ್ಟು ಒಣ ತಿನಿಸು ಹಾಗೂ ಕುಡಿಯುವ ನೀರು

ಊ. ನೀರು ತಾಗಬಾರದಂತಹ ಪೆಟ್ಟಿಗೆಯಲ್ಲಿ ಅಥವಾ ಪ್ಲ್ಯಾಸ್ಟಿಕಿನ ಚೀಲದಲ್ಲಿ ಮೇಣದ ಬತ್ತಿ ಮತ್ತು ಬೆಂಕಿಪೆಟ್ಟಿಗೆ

ಎ. ಚೂರಿ (ಚಾಕು)

ಐ. ಕ್ಲೋರಿನ್‌ನ ಮಾತ್ರೆಗಳು

ಓ. ಮಹತ್ವದ ಕಾಗದಪತ್ರಗಳು (ರೇಶನ್ ಕಾರ್ಡ್, ಆಧಾರ ಕಾರ್ಡ್ ಇತ್ಯಾದಿ)

ಔ. ನಗದು ಹಣ

ಅಂ. ಹಗ್ಗ

ಆಪತ್ತಿನ ಸ್ವರೂಪಕ್ಕನುಸಾರ ಮತ್ತು ತಮ್ಮ ಆವಶ್ಯಕತೆಗಳಿಗನು ಸಾರ ಇದರಲ್ಲಿ ಇತರ ವಸ್ತುಗಳನ್ನಿಡಬೇಕು. ಉದಾಹರಣೆಗೆ ತಮ್ಮ ನಿತ್ಯದ ಔಷಧಗಳು. ಇವೆಲ್ಲ ವಸ್ತುಗಳನ್ನು ಒಂದು ಚೀಲದಲ್ಲಿ (ಬ್ಯಾಗದಲ್ಲಿ) ತುಂಬಿ ಅದನ್ನು ಕುಟುಂಬದ ಪ್ರತಿಯೊಬ್ಬರಿಗೂ ಗೊತ್ತಿರುವ ಸ್ಥಳದಲ್ಲಿ ಇಡಬೇಕು.

೮ ಆ. ಆಪತ್ಕಾಲದಲ್ಲಿ ಯಾರಾದರೂ ಕುಟುಂಬದವರಿಂದ ಬೇರೆಯಾದರೆ ಪುನಃ ಭೇಟಿಯಾಗಲು ಏನು ಮಾಡಬೇಕು ?

ಭೂಕಂಪ, ನೆರೆ ಇತ್ಯಾದಿಗಳಲ್ಲಿ ಚಿಕ್ಕ ಮಕ್ಕಳು ಮನೆಯಲ್ಲಿ ಅಥವಾ ಮನೆಯ ಹೊರಗಿದ್ದರೆ, ಅವರು ಕಾಣೆಯಾಗಬಹುದು. ಇಂತಹ ಸಮಯದಲ್ಲಿ ನಿರ್ದಿಷ್ಟವಾಗಿ ಏನು ಮಾಡಬೇಕು ? ಎಂಬುದನ್ನು ಮಕ್ಕಳಿಗೆ ಮೊದಲೇ ಹೇಳಿಡಬೇಕು. ಅವರು ನಮ್ಮ ಸಂಪರ್ಕದಲ್ಲಿ ಹೇಗಿರಬಹುದು ? ಎಂಬುದರ ನಿಯೋಜನೆಯನ್ನು ಮಾಡಬೇಕು. ಇಂತಹ ಸಮಯದಲ್ಲಿ ಎಲ್ಲಿ ಒಟ್ಟಿಗೆ ಬರಬೇಕು ಎಂಬುದರ ಎರಡು ಸ್ಥಾನಗಳನ್ನು ನಿರ್ಧರಿಸಬೇಕು. ಮೊದಲನೇಯ ಸ್ಥಳ ಮನೆಯ ಸಮೀಪವೇ ಇರಬೇಕು. ಎರಡನೇಯ ಸ್ಥಳ ಮನೆಯಿಂದ ಸ್ವಲ್ಪ ದೂರ ಇರಬೇಕು.

೮ ಇ. ಆಪತ್ಕಾಲೀನ ಪರಿಸ್ಥಿತಿಗಾಗಿ ತಮ್ಮ ವಾಹನವನ್ನು ಸರಿ ಮಾಡಿಟ್ಟುಕೊಳ್ಳಬೇಕು !

ವಾಹನ ದುರುಸ್ತಿ ಮಾಡುವವರಿಂದ (ಮೆಕಾನಿಕ್) ತಮ್ಮ ವಾಹನದ ಈ ಕೆಳಗಿನ ವಿಷಯಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು !

೧. ಬ್ಯಾಟರಿ ಮತ್ತು ಇಗ್ನಿಶನ್ (ವಾಹನವನ್ನು ಸ್ಟಾರ್ಟ್ ಮಾಡುವ) ತಂತ್ರಾಂಶ

೨. ಬ್ರೇಕ್

೩. ಎಕ್ಝಾಸ್ಟ್ ಸಿಸ್ಟಮ್

೪. ಇಂಧನ ಮತ್ತು ಏರ್ ಫಿಲ್ಟರ್

೫. ಹಿಟರ್ ಮತ್ತು ವೈಪರ್

೬. ಹೆಡ್ ಲೈಟ್ಸ್ ಮತ್ತು ಅಪಾಯವನ್ನು ತೋರಿಸುವ ಹೊಳೆಯುವ ದೀಪಗಳು

೭. ತೈಲ (ಆಯಿಲ್)

೮. ಪೆಟ್ರೋಲ್ ಅಥವಾ ಡಿಸಲ್ ಟಾಕಿ ತುಂಬಿಸಿಡಬೇಕು

೯. ಒಳ್ಳೆಯ ಟಯರ್‌ಗಳನ್ನು ಹಾಕಿಸಿಕೊಳ್ಳಬೇಕು !

ಈ. ವಾಹನದಲ್ಲಿ ಪ್ರವಾಸ ಮಾಡುವಾಗ ವಹಿಸಬೇಕಾದ ಜಾಗರೂಕತೆ !

‘ವಾಹನದ ಮೇಲೆ ವಿದ್ಯುತ್ ಹರಿಯುವ ತಂತಿ ಬಿದ್ದರೆ, ‘ಶಾಕ್ ತಗಲುವ ಸಾಧ್ಯತೆ ಇರುತ್ತದೆ. ತರಬೇತಿ ಹೊಂದಿದ ವ್ಯಕ್ತಿಯು ಆ ವಯರ್‌ನ್ನು ತೆಗೆಯುವವರೆಗೆ ವಾಹನದಲ್ಲಿಯೇ ಕುಳಿತಿರಬೇಕು. ಆಪತ್ಕಾಲೀನ ಪರಿಸ್ಥಿತಿಯಲ್ಲಿ ವಾಹನವನ್ನು ನಡೆಸುವಾಗ ಅದನ್ನು ನಿಯಂತ್ರಿಸಲು ಕಠಿಣವಾದರೆ ಸುರಕ್ಷಿತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕಿಡಬೇಕು.

೮ ಉ. ದೂರದರ್ಶನ ಮತ್ತು ರೇಡಿಯೋಗಳ ಮಾಧ್ಯಮದಿಂದ ಭೂಕಂಪ ಅಥವಾ ನೆರೆಯ ಸಂದರ್ಭದಲ್ಲಿನ ಸುಧಾರಿತ ಮಾಹಿತಿಯನ್ನು ನಿರಂತರವಾಗಿ ನೀಡಲಾಗುತ್ತಿರುತ್ತದೆ. ಇವುಗಳ ಮೂಲಕ ನೀಡಲಾಗುವ ವಾರ್ತೆಗಳನ್ನು ಮತ್ತು ಸೂಚನೆಗಳನ್ನು ಕೇಳಬೇಕು.

೮ ಊ. ಸರಕಾರಿ ವಿಭಾಗಗಳ ಸಹಾಯ ಪಡೆಯಿರಿ !

ಆಪತ್ಕಾಲೀನ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನರಿಗೆ ಸಹಾಯ ಮಾಡಲು ಸರಕಾರ, ಸೈನ್ಯದಳ, ಪೊಲೀಸರು, ರಾಜ್ಯ ಮೀಸಲು ದಳ, ರೆಡ್ ಕ್ರಾಸ್, ಅಗ್ನಿಶಮನ ದಳ ಮುಂತಾದವರು ಸಮರೋಪಾದಿಯಲ್ಲಿ ಕಾರ್ಯವನ್ನು ಮಾಡುತ್ತಿರುತ್ತಾರೆ. ತಮ್ಮ ಜಿಲ್ಲೆಯ ಆಪತ್ತು ವ್ಯವಸ್ಥಾಪನ ಕೇಂದ್ರದ ಸಹಾಯ ಪಡೆಯಲು ೧೧೨ ಕ್ರಮಾಂಕವನ್ನು ಸಂಪರ್ಕಿಸಬೇಕು. ಇದರ ಜೊತೆಗೆ ಕೆಲವು ಸ್ಥಳಗಳಲ್ಲಿ ಸ್ವಯಂಸೇವಿ ಸಂಘಟನೆಗಳು ಕೂಡ ಸಕ್ರಿಯವಾಗಿರುತ್ತವೆ. ಆಪತ್ಕಾಲೀನ ಪರಿಸ್ಥಿತಿಯಲ್ಲಿ ಇವರಿಂದ ಸಹಾಯ ಪಡೆಯಿರಿ !ನೈ

೮ ಎ. ಗಾಳಿ ಸುದ್ದಿಗಳ ಮೇಲೆ ವಿಶ್ವಾಸವಿಡಬಾರದು !

ಆಪತ್ಕಾಲೀನ ಪರಿಸ್ಥಿತಿಯಲ್ಲಿ ಶಾಂತವಾಗಿದ್ದು ಕೃತಿಗಳನ್ನು ಮಾಡಿರಿ ಮತ್ತು ಇತರರಿಗೆ ಧೈರ್ಯ ತುಂಬಿ. ಗಾಳಿಸುದ್ದಿಗಳನ್ನು ನಂಬಬೇಡಿ.

೮ ಐ. ತಮ್ಮ ಆಸ್ತಿಯ ವಿಮೆಯನ್ನು ಮಾಡಿಡಬೇಕು !

‘ಯಾರಿಗೆ ಸಾಧ್ಯವಿದೆಯೋ, ಅವರು ತಮ್ಮ ಆಸ್ತಿಯ ಯೋಗ್ಯ ವಿಮೆಯನ್ನು ಮಾಡಿಡಬೇಕು, ಅದರಲ್ಲಿ ನೈಸರ್ಗಿಕ ಆಪತ್ತು ಇತ್ಯಾದಿಗಳೂ ಇರಬೇಕು.

೮ ಓ. ಇತರರಿಗೆ ಸಹಾಯ ಮಾಡುವುದು

೧. ಇತರರಿಗೆ ಸಹಾಯ ಮಾಡುವಾಗ ಎಚ್ಚರಿಕೆಯಿಂದ ಇರುವುದು ಮಹತ್ವದ್ದಾಗಿದೆ : ಜನರ ಸಹಾಯಕ್ಕೆ ಧಾವಿಸುವ ಪ್ರವೃತ್ತಿಯು ಒಳ್ಳೆಯದಾಗಿದ್ದರೂ, ಸಮಯದ ಅರಿವಿಟ್ಟುಕೊಂಡು ಮತ್ತು ನಮ್ಮಲ್ಲಿ ಯಾವುದರ ಕೌಶಲ್ಯವಿದೆ, ಎಂಬುದರ ವಿಚಾರ ಮಾಡಿ ನಂತರವೇ ಸಹಾಯಕ್ಕಾಗಿ ಹೋಗುವುದು ಒಳ್ಳೆಯದಾಗಿದೆ. ತುರ್ತುಪರಿಸ್ಥಿತಿಯಲ್ಲಿ ಅತೀ ಉತ್ಸಾಹವನ್ನು ತೋರಿಸುವ ವೀರರನ್ನು ನಿಯಂತ್ರಿಸಬೇಕಾಗುತ್ತದೆ.

೨. ಪ್ರಥಮೋಪಚಾರ : ಗಾಯಗೊಂಡಿರುವ  ವ್ಯಕ್ತಿಗೆ ಮೊದಲು ಯೋಗ್ಯ ಪ್ರಥಮೋಪಚಾರವನ್ನು ನೀಡಬೇಕು. ವ್ಯಕ್ತಿ ಅಂತ್ಯಾವಸ್ಥೆಯಲ್ಲಿದ್ದರೆ ಮಾತ್ರ ಅವನನ್ನು ಅಲ್ಲಿಂದ ತಕ್ಷಣ ಸರಿಯಾದ ಸ್ಥಳಕ್ಕೆ ಸಾಗಿಸಬೇಕು.

(ಮುಂದುವರಿಯುವುದು)