ಕೇರಳದ ಮಾಕಪ್‍ನ ಯುವ ಶಾಖೆಯ ಕಾರ್ಯಕರ್ತನಿಂದ ೬ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ

ಕಳೆದ ೩ ವರ್ಷಗಳಿಂದ ಲೈಂಗಿಕ ಅತ್ಯಾಚಾರ ಗೈಯುತ್ತಿದ್ದ !

* ಇಂತಹ ಅಮಾನವೀಯ ಕೃತ್ಯವನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲೆ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲಿಗೇರಿಸುವ ಶಿಕ್ಷೆ ಸಿಗುವಂತೆ ಪೊಲೀಸರು ಪ್ರಯತ್ನಿಸಬೇಕು !

* ಕೇರಳದಲ್ಲಿ ಮಾಕಪ್‍ನ ಸರಕಾರ ಇರುವುದರಿಂದ ಈ ಕಾರ್ಯಕರ್ತನನ್ನು ಕಾಪಾಡಲು ಪ್ರಯತ್ನಿಸಬಹುದು, ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಸಂಘಟನೆಯವರು ಜಾಗರೂಕತೆಯಿಂದ ಇರಬೇಕು !

* ಮಾಕಪದ ನೈತಿಕತೆಯು ಎಷ್ಟು ಕೀಳು ಮಟ್ಟಕ್ಕೆ ಹೋಗಿದೆ, ಎಂಬುದು ಈ ಘಟನೆಯಿಂದ ಕಂಡು ಬರುತ್ತದೆ ! ಈ ಬಗ್ಗೆ ತಥಾಕಥಿತ ಪ್ರಗತಿ(ಅಧೋಗತಿ)ಪರರು, ಜಾತ್ಯತೀತರು ಮತ್ತು ಸಮಾಜವಾದಿಗಳು ಏಕೆ ಬಾಯಿ ತೆರೆಯುವುದಿಲ್ಲ ?

ತಿರುವನಂತಪುರಮ್ (ಕೇರಳ) – ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಹುಡುಗಿ ೩ ವರ್ಷವಿರುವಾದಾಗಿನಿಂದಲೇ ಆತ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದ, ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆತ ಹುಡುಗಿಯ ಪೋಷಕರು ಮನೆಯಲ್ಲಿ ಇಲ್ಲದಿರುವಾಗ ಆಕೆಯ ಮನೆಗೆ ಹೋಗುತ್ತಿದ್ದ. ಆಕೆಗೆ ಟಾಫಿ ಅಥವಾ ವಸ್ತುಗಳ ಆಮಿಷವನ್ನೊಡ್ಡುತ್ತಿದ್ದ ಮತ್ತು ಅತ್ಯಾಚಾರ ಮಾಡುತ್ತಿದ್ದ.

ಜೂನ್ ೩೦ ರಂದು ಅತ್ಯಾಚಾರದ ನಂತರ ಹುಡುಗಿಯು ಮೂರ್ಛೆ ಹೋದಾಗ ಅರ್ಜುನನಿಗೆ ಆಕೆ ಸತ್ತಿರಬಹುದು ಎಂಬ ಭಯದಿಂದ ಆಕೆಯನ್ನು ನೇಣಿಗೇರಿಸಿದ. ಆ ಸಮಯದಲ್ಲಿ ಆಕೆ ತೀರಿಕೊಂಡಳು. ಹುಡುಗಿಯ ಶವಪರೀಕ್ಷೆಯ ವರದಿಯಿಂದ ಆಕೆಯ ಮೇಲೆ ಅತ್ಯಾಚಾರ ಆಗಿರುವುದು ಗಮನಕ್ಕೆ ಬಂದಾಗ ಪೊಲೀಸರು ನಡೆಸಿದ ತನಿಖೆಯಲ್ಲಿ ಅರ್ಜುನನ ಹೆಸರು ಸಿಕ್ಕಿತು. ಆತನನ್ನು ವಿಚಾರಣೆಗೆ ಒಳ ಪಡಿಸಿದಾಗ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಾಕಪದ ಇಬ್ಬರು ನಾಯಕರ ಬಂಧನ

ಪಿ.ಪಿ. ಬಾಬುರಾಜ ಮತ್ತು ಟಿ.ಪಿ. ಲಿಜೇಶ

ಕಳೆದ ವಾರದಲ್ಲಷ್ಟೇ ಮಾಕಪದ ನಾಯಕ ಪಿ.ಪಿ. ಬಾಬುರಾಜ ಮತ್ತು ಟಿ.ಪಿ. ಲಿಜೇಶ ಇವರ ಮೇಲೆ ಪಕ್ಷದ ಮಹಿಳಾ ಕಾರ್ಯಕರ್ತೆಯನ್ನು ಲೈಂಗಿಕವಾಗಿ ದೌರ್ಜನ್ಯ ಮತ್ತು ಬ್ಲಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧವನ್ನು ದಾಖಲಿಸಿ ಬಂಧಿಸಲಾಗಿತ್ತು. (‘ಮಾಕಪವು ಕಾಮಾಂಧರ ಕಾರಖಾನೆಯಾಗಿದೆಯೇ ?’ ಎಂದು ಯಾರಾದರು ಪ್ರಶ್ನಿಸಿದರೆ ಅದರಲ್ಲಿ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ ! – ಸಂಪಾದಕರು)