ಪ್ರಸಿದ್ದಿ ಮಾಧ್ಯಮಗಳು ಕೊರೋನಾದ ಬಗ್ಗೆ ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿರುವುದರಿಂದ ಜನರಲ್ಲಿ ಆತಂಕದ ವಾತಾವರಣವಿದೆ !

ತೆಲಂಗಾಣಾ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರ ಆರೋಪ !

ಒಂದು ವೇಳೆ ಪ್ರಸಿದ್ದಿ ಮಾಧ್ಯಮಗಳು ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿವೆ ಎಂದಾದರೆ, ತೆಲಂಗಾಣಾ ಸರಕಾರವು ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ : ಅಥವಾ ರಾವ್ ಅವರು ನಿರಾಧಾರ ಆರೋಪವನ್ನು ಮಾಡುತ್ತಿದ್ದಾರೆಯೇ ?

ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

ವಾರಂಗಳ (ತೆಲಂಗಾಣಾ) – ಪ್ರಸಿದ್ದಿ ಮಾಧ್ಯಮಗಳು ಕೊರೋನಾ ಬಗ್ಗೆ ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿವೆ ಹಾಗಾಗಿ ಜನರಲ್ಲಿ ಆತಂಕದ ವಾತಾವರಣವಿದೆ, ಎಂದು ತೆಲಂಗಾಣಾದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಆರೋಪಿಸಿದ್ದಾರೆ.

ಕೆ. ಚಂದ್ರಶೇಖರ ರಾವ್ ಮಾತನ್ನು ಮುಂದುವರೆಸುತ್ತಾ,

. ಕೊರೋನಾ ಇಲ್ಲದಿರುವಾಗಲೂ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಜಾಗ ಸಿಗುತ್ತಿತ್ತೇ ? ವೈದ್ಯರು ಚಿಕಿತ್ಸೆಯನ್ನು ನೀಡಲು ಎಂದಿಗೂ ನಿರಾಕರಿಸುವುದಿಲ್ಲ. ಏಕೆಂದರೆ ಬಡವರು ಕೇವಲ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು, ಎಂಬುದು ಅದರ ಹಿಂದಿರುವ ಕಾರಣವಾಗಿದೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಆ ರೋಗಿಗಳನ್ನು ಸ್ಥಳ ಇಲ್ಲದಿರುವಾಗ ನೆಲದ ಮೇಲೆ ಕುಳ್ಳಿರಿಸಿ ಚಿಕಿತ್ಸೆ ನೀಡುತ್ತಾರೆ; ಆದರೆ ಪ್ರಸಿದ್ದಿ ಮಾಧ್ಯಮಗಳು ಅದರ ಛಾಯಾಚಿತ್ರವನ್ನು ತೆಗೆಯುತ್ತವೆ ಮತ್ತು ‘ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ನೆಲದ ಮೇಲೆ ಮಲಗಬೇಕಾಗುತ್ತದೆ’, ಎಂದು ಹೇಳುತ್ತವೆ ಎಂದರು.

(ಸೌಜನ್ಯ: India Today )

೨. ನನಗೂ ಕೊರೊನಾ ಸೋಂಕು ತಗಲಿತ್ತು. ಆಗ ‘ಪ್ಯಾರಾಸಿಟಮೊಲ್’ ಮತ್ತು ರೋಗಪ್ರತಿರೋಧಕ ಶಕ್ತಿಯ ಔಷಧಗಳನ್ನು ತೆಗೆದುಕೊಂಡು ಗುಣಮುಖನಾದೆ, ಕಪ್ಪು ಶಿಲೀಂದ್ರ, ಹಳದಿ ಶಿಲೀಂದ್ರ ಇಂತಹ ಅನಾರೋಗ್ಯದ ಬಗ್ಗೆ ತಪ್ಪಾದ ಮಾಹಿತಿಗಳನ್ನು ಹಬ್ಬಿಸುತ್ತವೆ. ಯಾವ ಸುದ್ದಿವಾಹಿನಿ ಅಥವಾ ದೈನಿಕವೆಂದು ಈಗ ನನಗೆ ನೆನಪಿಲ್ಲ. ಈ ಶಿಲೀಂದ್ರ ಜೀವಂತವಾಗಿದೆಯೋ ಅಥವಾ ನಿರ್ಜಿವವೋ (ಇದೂ ಕೂಡಾ ಸರಿ ಗೊತ್ತಿಲ್ಲ); ಆದರೆ ಜನರು ಈ ಸುದ್ದಿಯ ಬಗ್ಗೆ ಕೇಳಿಯೇ ಸಾಯುತ್ತಿದ್ದಾರೆ. ಆದ್ದರಿಂದ ಸುದ್ದಿವಾಹಿನಿಗಳಿಗೆ ಶಾಪ ತಗಲುವುದು ಎಂದು ನಾನು ಹೇಳುತ್ತೇನೆ.