ಬಂಗಾಲವೆಂದರೆ ನಾಡಬಾಂಬುಗಳ ಕಾರ್ಖಾನೆಯಂತೆ ಆಗಿದೆ. ಈ ಬಾಂಬ್ ಅನ್ನು ರಾಜಕೀಯ ಪಕ್ಷಗಳು ಸಾರಾಸಗಟಾಗಿ ಬಳಸುತ್ತವೆ; ಆದರೆ ಯಾವುದೇ ಪಕ್ಷದ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಮತ್ತ್ತು ಅದರ ಮೇಲೆ ನಿಷೇಧ ಹೇರಲು ಒತ್ತಾಯಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಬಂಗಾಲದ ಬದಲು ಯಾವುದಾದರೂ ಹಿಂದುತ್ವನಿಷ್ಠ ಸಂಘಟನೆಯಲ್ಲಿ ಇಂತಹ ಬಾಂಬ್ ಪತ್ತೆಯಾಗಿದ್ದರೆ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರವಾದಿ ಕಾಂಗ್ರೆಸ್ ಇತ್ಯಾದಿ ಪಕ್ಷಗಳು, ಅದೇರೀತಿ ಪ್ರಗತಿ(ಅಧೋಗತಿ)ಪರರು, ಜಾತ್ಯಾತೀತವಾದಿ ಹಾಗೂ ಅಂಧಶ್ರದ್ಧಾ ನಿರ್ಮೀಲನ ಸಮಿತಿಯಂತಹ ಸಂಘಟನೆಗಳು ಸಂಬಂಧಪಟ್ಟ ಹಿಂದುತ್ವನಿಷ್ಠ ಸಂಘಟನೆಯ ಮೇಲೆ ನಿರ್ಬಂಧ ಹೇರುವಂತೆ ಒತ್ತಾಯಿಸುತ್ತಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಕೋಲಕಾತಾ (ಬಂಗಾಲ) – ಇಲ್ಲಿನ ಬಿಜೆಪಿ ಕಚೇರಿಯ ಬಳಿ ೫೧ ನಾಡಬಾಂಬ್ಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ಈ ಬಾಂಬ್ಗಳನ್ನು ಇಡಲಾಗಿತ್ತು. ಈ ಮಾಹಿತಿ ಪಡೆದ ನಂತರ, ಬಾಂಬ್ ನಿಷ್ಕ್ರೀಯ ದಳವು ಸ್ಥಳಕ್ಕೆ ತಲುಪಿತು. ಈ ಎಲ್ಲಾ ಬಾಂಬ್ಗಳು ಕಡಿಮೆ ತೀವ್ರತೆಯ ಹೊಂದಿವೆ ಎಂದು ಹೇಳಲಾಗುತ್ತದೆ. ಪೊಲೀಸರು ಇದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಇಲ್ಲಿಯ ‘ಸಿಸಿಟಿವಿ ದೃಶ್ಯಾವಳಿ’ಗಳನ್ನು ಪರಿಶೀಲಿಸಲಾಗುತ್ತಿದೆ.
The bombs were recovered at around 8 PM on Saturday evening just 20 metres away from BJP’s officehttps://t.co/gSt5mRV84J
— OpIndia.com (@OpIndia_com) June 6, 2021
ರಾಜ್ಯದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಸಹ ಇಂತಹ ದೊಡ್ಡ ಸಂಖ್ಯೆಯ ನಾಡಬಾಂಬ್ಗಳು ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿತ್ತು. ದಕ್ಷಿಣ ೨೪ ಪರಗಣಾ ಜಿಲ್ಲೆಯ ಭಾಂಗರ ಪ್ರದೇಶದಿಂದ ಸುಮಾರು ೨೦೦ ನಾಡಬಾಂಬ್ಗಳನ್ನು ಪೊಲೀಸರು ಜಫ್ತಿಮಾಡಿದ್ದಾರೆ. ಈ ಹಿಂದೆ ಇಲ್ಲಿ ನಾಡಬಾಂಬು ಸ್ಫೋಟಗೊಂಡಿತ್ತು. ಇದರಲ್ಲಿ ಒಬ್ಬ ಬಿಜೆಪಿಯ ಕಾರ್ಯಕರ್ತನು ಸಾವನ್ನಪ್ಪಿದ್ದು, ಐವರು ಕಾರ್ಯಕರ್ತರು ಗಾಯಗೊಂಡಿದ್ದರು.

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ