ಸ್ತ್ರೀಯರಿಗೆ ಪ್ರಸನ್ನತೆ, ತೇಜ ಮತ್ತು ಸಾತ್ತ್ವಿಕತೆಯನ್ನು ನೀಡುವ ವಿವಿಧ ಆಭರಣಗಳು

ಉಂಗುರದ ಉಪಯೋಗಗಳು

೧. ಸಂರಕ್ಷಣೆ : ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ.

೨. ಉಂಗುರವು ಬೆರಳುಗಳನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸುತ್ತದೆ. – ಈಶ್ವರ (ಕು.ಮಧುರಾ ಭೋಸಲೆಯವರು ಈಶ್ವರ ಈ ಅಂಕಿತ ನಾಮದಿಂದ ಲೇಖನ ಬರೆಯುತ್ತಾರೆ, ೧೨.೧೧.೨೦೦೭, ರಾತ್ರಿ ೮.೧೫)

ಕಾಲುಂಗುರದ ಮಹತ್ವ

. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ.

೨. ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ.

ಮಂಗಳಸೂತ್ರ

೨ ಬಟ್ಟಲುಗಳ ರಚನೆಯಿಂದ ಮಂಗಳ ಸೂತ್ರದ ಹಿಂದಿನ ಟೊಳ್ಳಿನಲ್ಲಿ ನಿರ್ಮಾಣವಾಗುವ ಆಕರ್ಷಣಾ ಲಹರಿಯಿಂದ ಇತರ ಯಾವುದೇ ಅಲಂಕಾರದ ತುಲನೆಯಲ್ಲಿ ಮಂಗಳ ಸೂತ್ರದಲ್ಲಿ ಈಶ್ವರೀತತ್ತ್ವವು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ.

ಬಳೆಗಳ (ಕಂಕಣಗಳ) ಮಹತ್ವ

. ‘ಹಸಿರು ಬಳೆಗಳನ್ನು ಧರಿಸುವುದು ಮುತ್ತೈದೆಯರ ಪಾತಿವ್ರತ್ಯದ ಪ್ರಕಟ ಶಕ್ತಿರೂಪದ ಪೂಜೆಯನ್ನು ಅಲಂಕಾರಸಹಿತ ಮಾಡುವುದರ ಪ್ರತೀಕವಾಗಿದೆ.

. ಬಳೆಗಳಲ್ಲಿ ಕಾರ್ಯನಿರತ ದೇವಿತತ್ತ್ವದ ಶಕ್ತಿಲಹರಿಗಳನ್ನು ಮಣಿಕಟ್ಟಿನಲ್ಲಿ ಆಕರ್ಷಿಸಿ, ಸಂಪೂರ್ಣ ಕೈಯಲ್ಲಿ ಪಸರಿಸುವುದರಿಂದ ಕೈಗಳಿಗೆ ಕಾರ್ಯವನ್ನು ಮಾಡಲು ಶಕ್ತಿಯು ಸಿಗುತ್ತದೆ.

ಕಾಲ್ಗೆಜ್ಜೆಗಳ ಮಹತ್ವ ಮತ್ತು ಲಾಭ

೧. ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವು ತಯಾರಾಗುತ್ತದೆ : ‘ಕಾಲ್ಗೆಜ್ಜೆಯನಾದವು ಬ್ರಹ್ಮಾಂಡದಲ್ಲಿರುವ ಕ್ರಿಯಾಶಕ್ತಿಯನ್ನು ಆಕರ್ಷಿಸುವಂತಹದ್ದಾಗಿರುವುದರಿಂದ, ಕಾಲ್ಗೆಜ್ಜೆಗಳ ನಾದದಿಂದ ಪ್ರಕ್ಷೇಪಿತವಾಗುವ ಕ್ರಿಯೆಯ ಲಹರಿಗಳು ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ವಿರೋಧಿಸಿ ಅವುಗಳನ್ನು ವಿಭಜಿಸಿ ಅವುಗಳಲ್ಲಿರುವ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ನಾದರೂಪೀಯಾದ ಈ ಕ್ರಿಯಾಲಹರಿಗಳು ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಿಸುತ್ತವೆ, ಹಾಗೆಯೇ ಈ ನಾದಲಹರಿಗಳಿಂದಾಗಿ ಸ್ತ್ರೀಯಲ್ಲಿನ ಶಕ್ತಿರೂಪೀ ರಜೋಗುಣಕ್ಕೆ ಗತಿ ಸಿಗುತ್ತದೆ ಮತ್ತು ಅವಳೇ ಒಂದು ಸ್ವಯಂಸಿದ್ಧಸ್ವರೂಪವಾಗುತ್ತಾಳೆ.

. ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ.

(ಆಭರಣಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥಮಾಲಿಕೆ ಸಾತ್ತ್ವಿಕ ಆಭರಣ)