ಸದ್ಯ ಸಾಧಕರಿಗೆ ಅವರ ವಾಸ್ತುವನ್ನು ಮಾರಾಟ ಮಾಡಲು ತುಂಬಾ ಅಡಚಣೆ ಬರುತ್ತಿದೆ, ಎಂದು ತುಂಬಾ ಸಾಧಕರ ಉದಾಹರಣೆಯಿಂದ ಗಮನಕ್ಕೆ ಬಂದಿದೆ. ವಾಸ್ತು ಮಾರಾಟದಲ್ಲಿನ ಅಡಚಣೆ ದೂರವಾಗಲು ಏನಾದರೂ ಉಪಾಯ ಇದ್ದರೆ ಸೂಚಿಸಿ ಎಂದು ಭಗವಾನ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿದೆ. ಭಗವಾನ ಶ್ರೀ ಕೃಷ್ಣನು ವಾಸ್ತು ಮಾರಾಟದಲ್ಲಿನ ಅಡಚಣೆ ದೂರ ಆಗಲು ವಾಸ್ತು ಮಾರಾಟ ಯಂತ್ರ ಸೂಚಿಸಿದನು. ಯಂತ್ರದ (3×3 ಇಂಚು ಆಕಾರದಲ್ಲಿ) ಚಿತ್ರವನ್ನು ಮುಂದೆ ನೀಡಲಾಗಿದೆ. ಒಂದು ಖಾಲಿ ಕಾಗದದ ಮೇಲೆ ವಾಸ್ತು ಮಾರಾಟ ಯಂತ್ರದ ಚಿತ್ರದ ಬಣ್ಣದ ಗಣಕೀಯ ಪ್ರತಿ (ಪ್ರಿಂಟ್) ತೆಗೆಯಬೇಕು. ಈ ಯಂತ್ರವನ್ನು ವಾಸ್ತುವಿನ ವಾಯುವ್ಯ ದಿಕ್ಕಿನ ಗೋಡೆಯ ಮೇಲೆ ಸಾಧಾರಣ ೫ ಅಡಿ ಎತ್ತರದಲ್ಲಿ ಹಚ್ಚಬೇಕು. (ವಾಯುವ್ಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಆ ಭಾಗವನ್ನು ಬಿಟ್ಟು ಯಂತ್ರವನ್ನು ಪಕ್ಕದ ಗೋಡೆಯ ಮೇಲೆ ಹಚ್ಚಬೇಕು) ಉಪಾಯವನ್ನು ಪಂಚಾಂಗದಲ್ಲಿ ಶುಭದಿನವನ್ನು ನೋಡಿ ಆರಂಭಿಸಬೇಕು. ಯಂತ್ರ ಹಚ್ಚಿದ ಮೇಲೆ ಊದುಬತ್ತಿ ಬೆಳಗಿಸಿ ಮುಂದಿನ ಪ್ರಾರ್ಥನೆ ಮಾಡಬೇಕು, ವಾಸ್ತುವಿನ ಮಾರಾಟದಲ್ಲಿ ಬರುವ ಎಲ್ಲಾ ಅಡಚಣೆಗಳು ದೂರವಾಗಿ, ವಾಸ್ತು ಆದಷ್ಟು ಬೇಗ ಮಾರಾಟವಾಗಲಿ. ವಾಸ್ತು ಮಾರಾಟವಾದ ನಂತರ ಆ ಯಂತ್ರಕ್ಕೆ ಕೃತಜ್ಞತೆ ವ್ಯಕ್ತ ಮಾಡಿ ಅಗ್ನಿಗೆ ಸಮರ್ಪಿಸಬೇಕು.
– ಶ್ರೀ. ಧನಂಜಯ ಕರ್ವೆ

ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !