
ಅಧ್ಯಾತ್ಮ ಪ್ರಸಾರ, ಸಮಾಜಕ್ಕೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವುದು, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಮಾಡುವುದು, ಈ ವ್ಯಾಪಕ ಉದ್ದೇಶಗಳಿಂದ ಸನಾತನ ಸಂಸ್ಥೆಯ ಕಾರ್ಯವು ನಡೆದಿದೆ. ವಿವಿಧ ವಯಸ್ಸಿನ ನೂರಾರು ಸಾಧಕರು ಪೂರ್ಣವೇಳೆ ಸೇವಾ ನಿರತರಾಗಿ ಈ ಧರ್ಮ ಕಾರ್ಯದಲ್ಲಿ ತಮ್ಮ ಯೋಗದಾನವನ್ನು ನೀಡುತ್ತಿದ್ದಾರೆ. ಬಹಳಷ್ಟು ಸಾಧಕರು ಗಣಕೀಯ, ಹಾಗೆಯೇ ಇತರ ಸೇವೆಗಳಿಗಾಗಿ ಅನೇಕ ಗಂಟೆಗಳ ಕಾಲ ಒಂದೇ ಜಾಗದಲ್ಲಿ ಕುಳಿತು ಸೇವೆಯನ್ನು ಮಾಡುತ್ತಾರೆ ಮತ್ತು ಕೆಲವು ಸಾಧಕರು ತಮ್ಮ ಕ್ಷಮತೆಗಿಂತ ಹೆಚ್ಚು ಸೇವೆಯನ್ನು ಮಾಡುತ್ತಾರೆ. ಈ ಸಾಧಕರಿಗೆ ಉಪಚಾರ ಮಾಡಲು ಸನಾತನದ ರಾಮನಾಥಿ ಮತ್ತು ದೇವದ ಆಶ್ರಮಗಳಲ್ಲಿ ‘ಫಿಸಿಯೋ ಥೆರಪಿಸ್ಟ್’ (ಮರ್ದನ (ಮಾಲಿಶ್), ಬಿಂದು ಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರೆಪಿ, ಯೋಗಾಸನಗಳು ಈ ವಿಷಯಗಳಲ್ಲಿನ ತಜ್ಞರ) ಆವಶ್ಯಕತೆಯಿದೆ. ಈ ಸೇವೆಯನ್ನು ಪೂರ್ಣವೇಳೆ ಮಾಡುವುದು ಸಾಧ್ಯವಿಲ್ಲದಿದ್ದಲ್ಲಿ ವಾರದಲ್ಲಿನ ಕೆಲವು ದಿನಗಳು ಅಥವಾ ದಿನದಲ್ಲಿ ಕೆಲವು ಗಂಟೆಗಳ ಕಾಲ ಈ ಸೇವೆಯನ್ನು ಮಾಡಬಹುದು. ಮರ್ದನ, ಬಿಂದುಒತ್ತಡ, ಪಂಚಕರ್ಮ, ಆಯುರ್ವೇದೀಯ ನ್ಯೂರೋಥೆರಪಿ, ಯೋಗಾಸನಗಳು ಮುಂತಾದ ವಿಷಯಗಳಲ್ಲಿ ಶಿಕ್ಷಣ ಪಡೆದ ಅಥವಾ ಅವುಗಳ ಜ್ಞಾನ ಮತ್ತು ಅನುಭವವಿರುವ ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು ಅಥವಾ ಸಾಧಕರು
ಈ ಸೇವೆಯನ್ನು ಮಾಡಬಹುದು. ಇಚ್ಛೆಯುಳ್ಳವರು ಸ್ಥಳೀಯ ಸಾಧಕರ ಮಾಧ್ಯಮದಿಂದ ಜಿಲ್ಲಾಸೇವಕರಿಗೆ ತಿಳಿಸಬೇಕು. ಜಿಲ್ಲಾ ಸೇವಕರು ಕೆಳಗಿನ ಕೋಷ್ಟಕಕ್ಕನುಸಾರ ಸಂಬಂಧಿತರ ಮಾಹಿತಿಯನ್ನು ಕಳುಹಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !