೧. ಶ್ರೀಕೃಷ್ಣನ ಅನೇಕ ಸಾವಿರ ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠ !
ಭಗವಾನ ಶ್ರೀಕೃಷ್ಣನ ಅನೇಕ ಸಾವಿರ ಗೋಪಿಯರಲ್ಲಿ ೧೬ ಸಾವಿರ ಗೋಪಿಯರು ಪ್ರಮುಖರು. ಈ ೧೬ ಸಾವಿರದಲ್ಲಿ ೧೦೮ ಜನ ವಿಶೇಷವಾಗಿ ಪ್ರಖ್ಯಾತರಾಗಿದ್ದಾರೆ. ಈ ೧೦೮ ರಲ್ಲಿ ೮ ಜನ ಪ್ರಧಾನರಾಗಿದ್ದಾರೆ ಹಾಗೂ ಈ ೮ ಪ್ರಧಾನ ಗೋಪಿಯರಲ್ಲಿ ರಾಧಾರಾಣಿ ಮತ್ತು ಚಂದ್ರಾವಲಿ ಪ್ರಮುಖರಾಗಿದ್ದಾರೆ ಹಾಗೂ ಈ ಇಬ್ಬರು ಗೋಪಿಯರಲ್ಲಿ ರಾಧಾರಾಣಿ ಶ್ರೇಷ್ಠಳಾಗಿದ್ದಾಳೆ. (ಆಧಾರ: ಸ್ಕಂದಪುರಾಣ)
೨. ಗೋಪಿಯರ ಜನ್ಮರಹಸ್ಯ !
ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು, ಋಷಿಗಳಾಗಿದ್ದರು ಹಾಗೂ ಅವರು ಮಾಧುರ್ಯ-ಪ್ರೇಮಭಕ್ತಿಯಿಂದ ಪ್ರಭು ಶ್ರೀರಾಮನ ಸಾನಿಧ್ಯದ ಇಚ್ಛೆ ಇಟ್ಟಿದ್ದರು. ಆಗ ರಾಮನು ಅವರಿಗೆ ದ್ವಾಪಾರಯುಗದಲ್ಲಿ ಶ್ರೀಕೃಷ್ಣಜನ್ಮದಲ್ಲಿ ಅವರ ಈ ಇಚ್ಛೆಯನ್ನು ಗೋಪಾಲ ಕೃಷ್ಣನು ಪೂರ್ಣಗೊಳಿಸುವನು, ಎಂದು ಆಶೀರ್ವಾದ ನೀಡಿದ್ದರು. ಆ ಆಶೀರ್ವಾದಕ್ಕನುಸಾರ ಆ ಎಲ್ಲ ವೈದಿಕ ವಿದ್ವಾಂಸರು ಶ್ರೀಕೃಷ್ಣನ ಅವತಾರದಲ್ಲಿ ವೃಂದಾವನದಲ್ಲಿನ ಗೋಪಿಯರ ರೂಪದಲ್ಲಿ ಜನ್ಮ ಪಡೆದು ಶ್ರೀಕೃಷ್ಣನ ಸಾನಿಧ್ಯವನ್ನುಗಳಿಸಿದ್ದರು. ಅವರ ಶುದ್ಧ ಇಚ್ಛೆ ಸಾಧನೆಯಿಂದ ಸಫಲವಾಗಿತ್ತು. ಇದು ಗೋಪಿಯರ ಜನ್ಮರಹಸ್ಯವಾಗಿದೆ.
೩. ಗೋಪಿಯರ ಶ್ರೀಕೃಷ್ಣಭಕ್ತಿ !
ಶ್ರೀಕೃಷ್ಣನ ಪ್ರಾಪ್ತಿಯಾದ ತಕ್ಷಣ ಅವರಿಗೆ ಇನ್ನೇನೂಗಳಿಸುವ ಇಚ್ಛೆಯೇ ಉಳಿಯದಿರುವುದರಿಂದ ಅವರಲ್ಲಿ ಶುದ್ಧ ಭಾವ (ಪರಮೇಶ್ವರೀ ತತ್ತ್ವ) ನಿರ್ಮಾಣವಾಗಿ ಅವರು ಕೃಷ್ಣನೊಂದಿಗೆ ಅಖಂಡ ಅನುಸಂಧಾನ (ತನು, ಮನ, ಧನ, ಮತ್ತು ಪ್ರಾಣಸಹಿತ)ವನ್ನು ಉಳಿಸಿಕೊಂಡಿದ್ದರು; ಆದ್ದರಿಂದ ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೇ ಆತ್ಮಾರಾಮಿ ಮಧುರಭಕ್ತಿ ಎನ್ನಲಾಗಿದೆ. ಇವೆಲ್ಲ ಸಾಧನೆಗಳನ್ನು ಪೂರ್ಣಗೊಳಿಸಲು ಗೋಪಿಯರು ಪ್ರೇಮಭಕ್ತಿಯ ಗಂಗೆಯನ್ನು ಅಖಂಡವಾಗಿ ಹರಿಸಿದ್ದರು. – ಶ್ರೀ. ಶ್ರೀಕಾಂತ ಭಟ್.

ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !