
ತಿರುವನಂತಪುರಂ (ಕೇರಳ) – ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಸದ್ರುಲ್ ಅನಮ್ (ವಯಸ್ಸು ೨೨ ವರ್ಷ) ಎಂಬ ಮತಾಂಧ ಮುಸ್ಲಿಂ ಯುವಕ ಕೇರಳ ಮೂಲದ ಸಾವರಿಯಾ ಬಸಂತ್ (ವಯಸ್ಸು ೨೨ ವರ್ಷ) ಎಂಬ ವಿದ್ಯಾರ್ಥಿನಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಉಜ್ಬೇಕಿಸ್ತಾನದ ‘ಬುಖಾರಾ ಸ್ಟೇಟ್ ಮೆಡಿಕಲ್ ಇನ್ಸ್ಟಿಟ್ಯೂಟ್’ನಲ್ಲಿ ‘ಎಂಬಿಬಿಎಸ್’ ಮೊದಲ ವರ್ಷದಲ್ಲಿದ್ದರು. ಉಜ್ಬೇಕಿಸ್ತಾನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ಕೇರಳಕ್ಕೆ ತಂದ ನಂತರ, ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Kerala Medical student murdered by classmate Sadarul Anam in Uzbekistan after refusing to convert her religion
The fact that radical fanatics carry out "love jihad" across the world makes it clear that this is an organised conspiracy.
Why are the secularists silent about this… pic.twitter.com/wEGxf1NmvB
— Sanatan Prabhat (@SanatanPrabhat) July 10, 2026
ಜುಲೈ ೨೩ ರಂದು ಕಾಲೇಜು ಆವರಣದಲ್ಲಿ ಇಬ್ಬರ ನಡುವೆ ವಾದ ನಡೆದಿದ್ದು, ಸದ್ರುಲ್ ಅನಮ್, ಸಾವರಿಯಾ ತಲೆಯ ಮೇಲೆ ಭಾರವಾದ ಲ್ಯಾಪ್ಟಾಪ್ನಿಂದ ಪ್ರಾಣಾಂತಿಕವಾಗಿ ಹಲ್ಲೆ ನಡೆಸಿದನು. ಈ ದಾಳಿಯಲ್ಲಿ ಆಕೆ ಸಾವನ್ನಪ್ಪಿದಳು. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ಈ ಹಿಂದೆಯೂ ಸಾವರಿಯಾ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದನು ಮತ್ತು ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು. ಆರೋಪಿ ಪ್ರಸ್ತುತ ಉಜ್ಬೇಕಿಸ್ತಾನದ ಜೈಲಿನಲ್ಲಿದ್ದು, ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಅಲ್ಲಿನ ತನಿಖೆಯ ಮಾಹಿತಿ ಕೋರಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಉಜ್ಬೇಕಿಸ್ತಾನದ ನ್ಯಾಯಾಂಗ ಪ್ರಕ್ರಿಯೆಗೆ ಅನುಗುಣವಾಗಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!