ಉಜ್ಬೇಕಿಸ್ತಾನ್: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ಯುವತಿಯ ಹತ್ಯೆಗೈದ ಮುಸ್ಲಿಮ್ ಯುವಕ

ಕೊಲೆಯಾದ ಯುವತಿ ಸವಾರಿಯಾ ಬಸಂತ್ ಮತ್ತು ಆರೋಪಿ ಸದ್ರುಲ್ ಅನಾಮ್

ತಿರುವನಂತಪುರಂ (ಕೇರಳ) – ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ಸದ್ರುಲ್ ಅನಮ್ (ವಯಸ್ಸು ೨೨ ವರ್ಷ) ಎಂಬ ಮತಾಂಧ ಮುಸ್ಲಿಂ ಯುವಕ ಕೇರಳ ಮೂಲದ  ಸಾವರಿಯಾ ಬಸಂತ್ (ವಯಸ್ಸು ೨೨ ವರ್ಷ) ಎಂಬ ವಿದ್ಯಾರ್ಥಿನಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಉಜ್ಬೇಕಿಸ್ತಾನದ ‘ಬುಖಾರಾ ಸ್ಟೇಟ್ ಮೆಡಿಕಲ್ ಇನ್‌ಸ್ಟಿಟ್ಯೂಟ್’ನಲ್ಲಿ ‘ಎಂಬಿಬಿಎಸ್’ ಮೊದಲ ವರ್ಷದಲ್ಲಿದ್ದರು. ಉಜ್ಬೇಕಿಸ್ತಾನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ಕೇರಳಕ್ಕೆ ತಂದ ನಂತರ, ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

​ಜುಲೈ ೨೩ ರಂದು ಕಾಲೇಜು ಆವರಣದಲ್ಲಿ ಇಬ್ಬರ ನಡುವೆ ವಾದ ನಡೆದಿದ್ದು, ಸದ್ರುಲ್ ಅನಮ್, ಸಾವರಿಯಾ ತಲೆಯ ಮೇಲೆ ಭಾರವಾದ ಲ್ಯಾಪ್‌ಟಾಪ್‌ನಿಂದ ಪ್ರಾಣಾಂತಿಕವಾಗಿ ಹಲ್ಲೆ ನಡೆಸಿದನು. ಈ ದಾಳಿಯಲ್ಲಿ ಆಕೆ ಸಾವನ್ನಪ್ಪಿದಳು. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ಈ ಹಿಂದೆಯೂ ಸಾವರಿಯಾ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದನು ಮತ್ತು ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು. ಆರೋಪಿ ಪ್ರಸ್ತುತ ಉಜ್ಬೇಕಿಸ್ತಾನದ ಜೈಲಿನಲ್ಲಿದ್ದು, ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಅಲ್ಲಿನ ತನಿಖೆಯ ಮಾಹಿತಿ ಕೋರಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಉಜ್ಬೇಕಿಸ್ತಾನದ ನ್ಯಾಯಾಂಗ ಪ್ರಕ್ರಿಯೆಗೆ ಅನುಗುಣವಾಗಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರು ಪ್ರಪಂಚದಾದ್ಯಂತ ಲವ್ ಜಿಹಾದ್ ಮಾಡುತ್ತಾರೆ, ಇದು ಅವರ ನಿಯೋಜಿತ ಷಡ್ಯಂತ್ರವೇ ಆಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! ಈ ಘಟನೆಯ ಬಗ್ಗೆ ಈಗ ಜಾತ್ಯತೀತವಾದಿಗಳು ಏಕೆ ಮೌನವಾಗಿದ್ದಾರೆ?