ನೇಪಾಳದ ಪ್ರಧಾನಿ ಬಾಲೆನ್ ಶಾ ಅವರ ಹಳೆಯ ಹೇಳಿಕೆಗೆ ಸ್ಪಷ್ಟನೆ

ಕಾಠಮಂಡು (ನೇಪಾಳ) – ಭಾರತದೊಂದಿಗಿನ ಗಡಿ ವಿವಾದವನ್ನು ಇತ್ಯರ್ಥಪಡಿಸಲು ತಮ್ಮ ದೇಶವು ಬ್ರಿಟನ್ ಅನ್ನು ಮಧ್ಯಸ್ಥಗಾರನನ್ನಾಗಿ ಮಾಡಲು ಬಯಸುವುದಿಲ್ಲ ಎಂದು ನೇಪಾಳದ ಪ್ರಧಾನಿ ಬಾಲೆನ್ ಶಾ ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ವಹಿಸಬೇಕೆಂದು ಕರೆ ನೀಡಿದ್ದರು. ಈಗ ಅವರು, ನನ್ನ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನೇಪಾಳವು ಈ ವಿಷಯವನ್ನು ಭಾರತದೊಂದಿಗೆ ನೇರ ಚರ್ಚೆಯ ಮೂಲಕವೇ ಬಗೆಹರಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಶಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕಾಲಾಪಾನಿ ಮತ್ತು ಲಿಪುಲೇಖ್ ಗೆ ಸಂಬಂಧಿಸಿದ ಬ್ರಿಟಿಷ್ ಆಡಳಿತದ ಕೆಲವು ದಾಖಲೆಗಳು ಲಭ್ಯವಿವೆ. ಈ ಐತಿಹಾಸಿಕ ಪುರಾವೆಗಳನ್ನು ಮುನ್ನೆಲೆಗೆ ತರಬೇಕು; ಆದರೆ ಇದರರ್ಥ ನೇಪಾಳಕ್ಕೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬೇಕು ಎಂದಲ್ಲ. ನೇಪಾಳವು ತನ್ನ ನೆರೆಯ ದೇಶಗಳೊಂದಿಗೆ ಸ್ವತಃ ಚರ್ಚಿಸಿ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಿದೆ. ಭಾರತದೊಂದಿಗಿನ ಎಲ್ಲಾ ಬಾಕಿ ಉಳಿದಿರುವ ವಿಷಯಗಳನ್ನು ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಬಗೆಹರಿಸಲಾಗುವುದು ಎಂದು ಹೇಳಿದರು.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
ನಾನು ಟ್ರಂಪ್ ಅವರ ಹೇಳಿಕೆಯಂತೆ ಮತ್ತು ಟ್ರಂಪ್ ನನ್ನ ಹೇಳಿಕೆಯಂತೆ ಕೆಲಸ ಮಾಡುತ್ತಿಲ್ಲ! – ನೆತನ್ಯಾಹು
‘ಭಾರತದ ವಿರುದ್ಧ ಯುದ್ಧ ಘೋಷಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ!(ವಂತೆ)’ : Khawaja Asif
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆ
ಗುವಾಹಟಿ (ಅಸ್ಸಾಂ) ನಿಂದ 13 ಬಾಂಗ್ಲಾದೇಶಿ ನುಸುಳುಕೋರರ ಬಂಧನ!
ಇರಾನ್ ನಿಂದ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಬಂದ್ !