ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!

ಮಧ್ಯಪ್ರದೇಶದಲ್ಲಿ ಬಂಧಿತರಾದ ಭಯೋತ್ಪಾದಕ ಗುಂಪು ವಿಚಾರಣೆಯಲ್ಲಿ ನೀಡಿದ ಮಾಹಿತಿ

ಭೋಪಾಲ್ (ಮಧ್ಯಪ್ರದೇಶ) – ರಾಜ್ಯದಲ್ಲಿ ಭಯೋತ್ಪಾದಕ ಜಾಲ ಪತ್ತೆಯಾದ ನಂತರ, ಇದರಲ್ಲಿ ಬಂಧಿತನಾದ ಇಝಾರ್ ಉಲ್ ಹಕ್ ಹೇಳುವ ಪ್ರಕಾರ, ಎಲ್ಲಾ ಭಯೋತ್ಪಾದಕರು ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಮಾಧ್ಯಮಗಳ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಮುಖ್ಯಸ್ಥರ ಸಂಪರ್ಕದಲ್ಲಿದ್ದರು. ದೇಶಾದ್ಯಂತ ಜಾಲವನ್ನು ವಿಸ್ತರಿಸುವುದು ಮತ್ತು ಮುಸ್ಲಿಂ ಯುವಕರ ಬ್ರೈನ್‌ವಾಶ್‌ ಮಾಡಿ ಅವರನ್ನು ಸ್ಲೀಪರ್ ಸೆಲ್ (ಗುಪ್ತವಾಗಿ ಭಯೋತ್ಪಾದಕರಿಗೆ ಸಹಾಯ ಮಾಡುವ ಮತಾಂಧ ಮುಸ್ಲಿಮರ ಸ್ಥಳೀಯ ಗುಂಪುಗಳು) ಆಗಿ ಸಿದ್ಧಪಡಿಸುವುದು ಅವರ ಉದ್ದೇಶವಾಗಿತ್ತು. ಅವರು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047ಗಾಗಿ ಕೆಲಸ ಮಾಡುತ್ತಿದ್ದರು. ಸಮಯ ಬಂದಾಗ ಎಲ್ಲಾ ಭಯೋತ್ಪಾದಕರು ಒಂದೇ ಬಾರಿಗೆ ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ. ಟಾರ್ಗೆಟ್ ಕಿಲ್ಲಿಂಗ್ (ಗುರಿಯಿಟ್ಟು ಹತ್ಯೆ ಮಾಡುವುದು) ಮತ್ತು ದೇಶದಲ್ಲಿ ಭಯದ ವಾತಾವರಣ ನಿರ್ಮಿಸುವುದು ಅವರ ಗುರಿಯಾಗಿದೆ.

ಭಯೋತ್ಪಾದನಾ ವಿರೋಧಿ ದಳದ ಪ್ರಕಾರ, ಈ ಸಂಘಟನೆಯ ಉದ್ದೇಶ 2047 ರ ವೇಳೆಗೆ ದೇಶದಲ್ಲಿ ಇಸ್ಲಾಮಿಕ್ ಕಾನೂನನ್ನು ಜಾರಿಗೆ ತರುವುದಾಗಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರ ಉದ್ದೇಶ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವುದು ಆಗಿದ್ದು, ಅದಕ್ಕಾಗಿ ಅವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಲು ಹಿಂದೂಗಳು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕವಾಗಿದೆ!