ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !

  • 'ಲವ್ ಜಿಹಾದ್'‌ನ ಪರಿಣಾಮ

  • ಯುವತಿಯ ಬುದ್ಧಿ ಕೆಡಿಸಲಾಗಿದೆ ಎಂದು ಕುಟುಂಬಸ್ಥರ ಆರೋಪ

ಕಾನ್ಪುರ (ಉತ್ತರ ಪ್ರದೇಶ) – ನಾವು ಹಿಂದುಗಳು, ಸ್ವಲ್ಪ ಜಾಣತನದ ಮಾತನ್ನು ಅರ್ಥಮಾಡಿಕೋ, ಎಂದು ತನ್ನ ವಿವಾಹಿತ ಸಹೋದರಿಗೆ ಎಷ್ಟೇ ಬುದ್ಧಿ ಹೇಳಿದರೂ ಆಕೆ ತನ್ನ ಮುಸ್ಲಿಂ ಪ್ರಿಯಕರನೊಂದಿಗೆ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಸಂದೀಪ ಎಂಬ ಸಹೋದರ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಸಹೋದರನೇ ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಸಹೋದರಿಯ ವಿವಾಹವು ಸ್ವಲ್ಪ ಸಮಯದ ಹಿಂದಷ್ಟೇ ಆಗಿತ್ತು. ಆಕೆಯ ಪ್ರಿಯಕರ ಮುಸ್ಲಿಂ ಸಮಾಜದ ಕಸಾಯಿ ಎಂದು ಸಂದೀಪ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಸಂಬಂಧ ಯುವತಿಯ ಮುಸ್ಲಿಂ ಪ್ರಿಯಕರ ಆಕೆಯ ಬುದ್ಧಿ ಕೆಡಿಸಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಕೊಲೆ ಮಾಡಿದ ಸಹೋದರನಿಂದ ತಪ್ಪಿನ ಒಪ್ಪಿಗೆ !

ಸಂದೀಪ ಪೊಲೀಸರಿಗೆ, ನಾವು ಹಿಂದುಗಳು ಎಂದು ನಾನು ನನ್ನ ತಂಗಿಗೆ ಹೇಳುತ್ತಿದ್ದೆ. ಬೇರೆ ಧರ್ಮದಲ್ಲಿ ಮದುವೆಯಾಗಲು ಸಾಧ್ಯವಿಲ್ಲ. ಈಗ ನಿನ್ನ ಮದುವೆಯೂ ಆಗಿದೆ. ನೀನು ನಿನ್ನ ಗಂಡನ ಮನೆಯ ಲಕ್ಷ್ಮಿಯಾಗಿದ್ದೀಯ. ಅಲ್ಲೇ ಇರು ಮತ್ತು ಸಂತೋಷದ ಜೀವನವನ್ನು ನಡೆಸು. ಸ್ವಲ್ಪ ಜಾಣತನದ ಮಾತನ್ನು ಅರ್ಥಮಾಡಿಕೋ. ನಿನ್ನ ಪ್ರಿಯಕರನ ಬಳಿ ಹೋಗುವ ಯೋಚನೆಯನ್ನೂ ಮಾಡಬೇಡ ಎಂದು ನಾನು ನನ್ನ ಸಹೋದರಿಗೆ ಅರ್ಥಮಾಡಿಸಲು ಬಹಳ ಪ್ರಯತ್ನಿಸಿದೆ. ಆಕೆ ಕೇಳದಿದ್ದಾಗ, ನಾನು ಆಕೆಯ ಕತ್ತು ಹಿಸುಕಿ, ಅವಳ ಶವವನ್ನು ಬಾವಿಗೆ ಎಸೆದೆ’ ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

  • ತನ್ನ ಸಹೋದರಿ 'ಲವ್ ಜಿಹಾದ್' ಸುಳಿಗೆ ಸಿಲುಕಿದಾಗ ಆಕೆಯನ್ನು ಕೊಲೆ ಮಾಡುವುದು ಎಂದಿಗೂ ಖಂಡನೀಯ ! ಇಂತಹ ಘಟನೆಗಳು ನಡೆಯದಂತೆ ತಡೆಯಲು ಹಿಂದುಗಳು ಜಾಗೃತರಾಗಿ ಕಾನೂನು ಮಾರ್ಗಗಳನ್ನು ಅನುಸರಿಸುವುದು ಅವಶ್ಯಕ !
  • 'ಲವ್ ಜಿಹಾದ್' ಸುಳಿಗೆ ಸಿಲುಕಿದ ಹಿಂದು ಯುವತಿ ಮದುವೆಯಾದ ಮೇಲೂ ತನ್ನ ಕುಟುಂಬದವರ ಮಾತು ಕೇಳದಿದ್ದಾಗ, ಇಸ್ಲಾಮಿಕ್ ರೀತಿಯಲ್ಲಿ ಆಕೆಯನ್ನು ವಶೀಕರಣ ಮಾಡಿರುವ ಸಾಧ್ಯತೆ ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಸರಕಾರ ಹಾಗೂ ಹಿಂದುಗಳು ಈ ವಿಷಯದ ಕಡೆಗೆ ಗಮನ ಹರಿಸಿ ಆಧ್ಯಾತ್ಮಿಕ ಮಟ್ಟದಲ್ಲಿಯೂ ಪರಿಹಾರ ಕಂಡುಕೊಳ್ಳುವುದು ಕಾಲದ ಅವಶ್ಯಕತೆಯಾಗಿದೆ !