
ಸರೆ (ಕೆನಡಾ) – ಇಲ್ಲಿನ ‘ಕ್ರೆಸೆಂಟ್ ಬೀಚ್’ ಪ್ರದೇಶದಲ್ಲಿ ೧ ಫೆಬ್ರವರಿ ೨೦೨೬ ರಂದು ಹಣ ಸುಲಿಗೆಗಾಗಿ ಗುಂಡಿನ ದಾಳಿ ಮಾಡಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರೆ ಪ್ರಾಂತೀಯ ನ್ಯಾಯಾಲಯವು ಮೂವರು ಸಿಖ್ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದೆ. ತರಣ್ವೀರ್ ಸಿಂಗ್, ದಯಾಜೀತ್ ಸಿಂಗ್ ಮತ್ತು ಹರಜೋತ್ ಸಿಂಗ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಈ ಘಟನೆಯಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಇವರು ಒಪ್ಪಿಕೊಂಡಿದ್ದರು.
ಗುಂಡಿನ ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದ ತರಣ್ವೀರ್ ಸಿಂಗ್ಗೆ ೫ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದರೆ, ಸ್ಫೋಟಕ ವಸ್ತುಗಳನ್ನು ಎಸೆದ ಆರೋಪ ಹೊತ್ತಿದ್ದ ದಯಾಜೀತ್ ಸಿಂಗ್ ಮತ್ತು ಹರಜೋತ್ ಸಿಂಗ್ ಅವರಿಗೆ ತಲಾ ಸುಮಾರು ೨ ವರ್ಷಗಳ ಶಿಕ್ಷೆ ನೀಡಲಾಗಿದೆ. ತರಣ್ವೀರ್ ಈಗಾಗಲೇ ಕಾರಾಗೃಹದಲ್ಲಿ ಅನುಭವಿಸಿರುವ ಅವಧಿಯನ್ನು ಆತನ ಒಟ್ಟು ಶಿಕ್ಷೆಯ ಅವಧಿಯಿಂದ ಕಡಿತಗೊಳಿಸಲಾಗುವುದು.
ಇರಾನ್ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದಿದ್ದರೆ, ಇಸ್ರೇಲ್ನ ಅಸ್ತಿತ್ವವೇ ಇರುತ್ತಿರಲಿಲ್ಲ ! – ಟ್ರಂಪ್
ಕೆನಡಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಷೇಧ! : Social Media Ban
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧನ!
ಅಮೆರಿಕದ ದಾಳಿಯಲ್ಲಿ ಮೂರು ಭಾರತೀಯರ ಸಾವು !
ಬಲಿಷ್ಠ ಚೀನಾದಿಂದ ‘ಅಪರೂಪದ ಖನಿಜಗಳ’ ಸಂಸ್ಕರಣೆಯ ಮೇಲಿನ ಕಠಿಣ ನಿರ್ಬಂಧ ಮುಂದುವರಿಕೆ!
ಪಾಕಿಸ್ತಾನದ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 13 ಅಫ್ಘಾನ್ ನಾಗರಿಕರ ಸಾವು ! – ತಾಲಿಬಾನ್ : Pakistan Air Strike