ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ೨೦ ಪುಟಗಳ ಪಾಠ! – ದಾದಾ ಭುಸೆ, ಶಿಕ್ಷಣ ಸಚಿವರು

ಬದಲಾದ ಪುಸ್ತಕಗಳು ಶಾಲೆಯ ಮೊದಲ ದಿನವೇ ಸಿಗಲಿವೆ!

​ಮುಂಬಯಿ – ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಈ ವರ್ಷ ೨ನೇ, ೩ನೇ, ೪ನೇ ಹಾಗೂ ೬ನೇ ತರಗತಿಯ ಪುಸ್ತಕಗಳನ್ನು ಬದಲಾಯಿಸಲಾಗಿದೆ. ಈ ಪುಸ್ತಕಗಳನ್ನು ಬಾಲಭಾರತಿಯು ಸಿದ್ಧಪಡಿಸಿದ್ದು, ಬಾಲಭಾರತಿಯ ವಜ್ರ ಮಹೋತ್ಸವದ ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ೪ ತರಗತಿಗಳ ಪುಸ್ತಕಗಳನ್ನು ಬದಲಾಯಿಸಲಾಗಿದೆ. ಶಾಲೆಯ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಸಿಗಲಿವೆ.

ಈ ಮೊದಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ೮ನೇ ತರಗತಿಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮರಾಠಾ ಸಾಮ್ರಾಜ್ಯದ ಬಗ್ಗೆ ಕೇವಲ ಒಂದೂವರೆ ಪುಟದಷ್ಟು ಮಾತ್ರ ಬರವಣಿಗೆ ಇತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿಕ್ಷಣ ಇಲಾಖೆಯಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರವರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ನಂತರ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ೨೦ ಪುಟಗಳ ಪಾಠವನ್ನು ಸೇರಿಸಲಾಗಿದೆ, ಎಂದು ಶಿಕ್ಷಣ ಸಚಿವ ದಾದಾ ಭುಸೆಯವರು ಮಾಹಿತಿ ನೀಡಿದ್ದಾರೆ.

ಈ ಪುಸ್ತಕಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣವನ್ನು ಹೆಚ್ಚು ಆನಂದದಾಯಕ, ಪ್ರಯೋಗಶೀಲ ಮತ್ತು ಅನುಭವವನ್ನು ಸಮೃದ್ಧಗೊಳಿಸಲು ಒತ್ತು ನೀಡಲಾಗಿದೆ. ಭಾರತೀಯ ಜ್ಞಾನ ಪರಂಪರೆ, ಸ್ಥಳೀಯ ಸಂದರ್ಭ, ವಿವಿಧ ಚಟುವಟಿಕೆಗಳು, ಪರಿಕಲ್ಪನೆ ಚಿತ್ರಗಳು ಮತ್ತು ಕೋಷ್ಟಕಗಳ ಮೂಲಕ ಶಿಕ್ಷಣವನ್ನು ಹೆಚ್ಚು ಅನುಭವಾಧಾರಿತಗೊಳಿಸಲು ಪ್ರಯತ್ನಿಸಲಾಗಿದೆ.

ಸಂಪಾದಕೀಯ ನಿಲುವು

  • ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಒಂದೂವರೆ ಪುಟದಿಂದ ೨೦ ಪುಟಗಳಿಗೆ ಹೆಚ್ಚಿಸುವ ಸರಕಾರದ ಪ್ರಯತ್ನವು ಶ್ಲಾಘನೀಯವಾಗಿದೆ !
  • ಶಿವಾಜಿ ಮಹಾರಾಜರೊಂದಿಗೆ ಇತರ ರಾಷ್ಟ್ರಪುರುಷರು ಅಥವಾ ಕ್ರಾಂತಿಕಾರಿಗಳ ಇತಿಹಾಸವನ್ನೂ ವಿದ್ಯಾರ್ಥಿಗಳ ವರೆಗೆ ತಲುಪಿಸುವ ಪ್ರಯತ್ನವನ್ನು ಭವಿಷ್ಯದಲ್ಲಿ ಮಾಡಬೇಕು!