ಗುತ್ತಿಗೆದಾರನಿಗೆ ಬೆದರಿಸಿ ೨ ಕೋಟಿ ೫೭ ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣ

ಮಂಗಳೂರು – ಖಾಸಗಿ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ೨ ಕೋಟಿ ೫೭ ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಅಲಿಯಾಸ್ ಇಬ್ರಾಹಿಂ ಸೇರಿದಂತೆ ಇಬ್ಬರನ್ನು ಉರ್ವಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
೧. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಗುತ್ತಿಗೆದಾರನ ಜೊತೆ ಕೆಲಸ ಮಾಡುತ್ತಿದ್ದ ಜಿತೇಶ್ ಎಂಬಾತ ಅವರ ಖಾಸಗಿ ವಿಡಿಯೋ ಮತ್ತು ಚಿತ್ರಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದನು. ಈ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಆತ ಅವರಿಂದ ಹಣ ಸುಲಿಗೆ ಮಾಡುತ್ತಿದ್ದನು.
೨. ಆ ಬಳಿಕ ಗುತ್ತಿಗೆದಾರನು ಸಹಾಯಕ್ಕಾಗಿ ಕಾಂಗ್ರೆಸ್ ನಾಯಕ ನಿಜಾಮ್ನನ್ನು ಸಂಪರ್ಕಿಸಿದ್ದನು. ಆದರೆ ನಿಜಾಮ್ ಅವರಿಗೆ ಸಹಾಯ ಮಾಡುವ ಬದಲಿಗೆ ಜಿತೇಶ್ ಜೊತೆ ಕೈಜೋಡಿಸಿ, ಹಣಕ್ಕಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದನು.
೩. ‘ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಅವನ ‘ಆತ್ಮಹತ್ಯೆ ಪತ್ರ’ದಲ್ಲಿ (ಸುಸೈಡ್ ನೋಟ್) ನಿಮ್ಮ ಹೆಸರಿದೆ ಮತ್ತು ನೀವು ನ್ಯಾಯಾಲಯದ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ’ ಎಂದು ಹೆದರಿಸಿ ನಿಜಾಮ್ ಗುತ್ತಿಗೆದಾರನಿಂದ ಹಣ ಸುಲಿಗೆ ಮಾಡಿದ್ದನು. ಇಬ್ಬರೂ ಸೇರಿ ಸುಮಾರು ೨ ಕೋಟಿ ೫೭ ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
೪. ಕೆಲವು ದಿನಗಳ ಹಿಂದೆ ಜಿತೇಶ್ ನಗರದಲ್ಲೇ ಇರುವುದು ಗುತ್ತಿಗೆದಾರನ ಗಮನಕ್ಕೆ ಬಂದಾಗ ಅವರಿಗೆ ಸಂಶಯ ಬಂದಿತು. ತಮಗೆ ವಂಚನೆಯಾಗಿರುವುದು ಅರಿವಿಗೆ ಬರುತ್ತಿದ್ದಂತೆ ಅವರು ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
೫. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
೬. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಜಾಮ್ನನ್ನು ಯುವ ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟಿಸಲಾಗಿದೆ.
೭. ಈ ಪ್ರಕರಣದಲ್ಲಿ ಇನ್ನುಳಿದ ಪ್ರಭಾವಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವಿದೆಯೇ ಎಂಬುದನ್ನು ಪತ್ತೆಹಚ್ಚಲು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಭಾಜಪ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಆಗ್ರಹಿಸಿದೆ.
ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು! – ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ನಿಯತ್, ನೀತಿ ಮತ್ತು ನಿರ್ಣಯಗಳಿಂದ ದೇಶದ ಅಭಿವೃದ್ಧಿಗೆ ವೇಗ! – ಪ್ರಧಾನಮಂತ್ರಿ : PM Narendra Modi
‘ಶ್ರೀರಾಮನು ದಶರಥನ ಪುತ್ರನಾಗಿರಲಿಲ್ಲ !’ (ಅಂತೆ) : Prof. Bhagwan
ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್ಗೆ ಮಧ್ಯಂತರ ಜಾಮೀನು!
‘ಅಮೆಜಾನ್ ಇಂಡಿಯಾ’ದ ಜಾಹೀರಾತಿನಲ್ಲಿ ಶ್ರೇಷ್ಠ ವಿಜ್ಞಾನಿ ಆರ್ಯಭಟರಿಗೆ ಅಪಮಾನ!