ಕ್ರೈಸ್ತನಾದರೆ ಸರಕಾರಿ ಉದ್ಯೋಗ ಕೊಡುವೆ, ಸುಂದರ ಹುಡುಗಿಯೊಂದಿಗೆ ಮದುವೆ ಮಾಡಿಸುವೆ, ಎಂದು ನೀಡುತ್ತಿದ್ದ ಆಮಿಷ !

ಪೀಲಿಭೀತ್ (ಉತ್ತರಪ್ರದೇಶ) – ಇಲ್ಲಿ ಆಮಿಷವೊಡ್ಡಿ ಕ್ರೈಸ್ತನಾಗಲು ಒತ್ತಡ ಹೇರುತ್ತಿದ್ದ ಅನೋಖೇಲಾಲ್ ಎಂಬ ಮತಾಂತರಗೊಂಡ ಮಿಷನರಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವನು ಗ್ರಾಮಸ್ಥರಿಗೆ ಸರಕಾರಿ ಉದ್ಯೋಗ ಮತ್ತು ಸುಂದರ ಹುಡುಗಿಯೊಂದಿಗೆ ಮದುವೆ ಮಾಡಿಸುವ ಆಮಿಷವೊಡ್ಡಿ ಕ್ರೈಸ್ತ ಪಂಥವನ್ನು ಸ್ವೀಕರಿಸಲು ಒತ್ತಡ ಹೇರುತ್ತಿದ್ದನು. ಗ್ರಾಮಸ್ಥರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಈ ಪ್ರಚಾರಕ್ಕಾಗಿ ಅವನಿಗೆ ನಿಧಿ ಎಲ್ಲಿಂದ ಸಿಗುತ್ತಿತ್ತು ಮತ್ತು ಅವನು ಯಾವ ವಿಭಾಗಕ್ಕಾಗಿ ಕೆಲಸ ಮಾಡುತ್ತಿದ್ದನು, ಎಂಬುದರ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ.
ಯೇಸುವು ದುಷ್ಟ ಆತ್ಮದಿಂದ ಮುಕ್ತಗೊಳಿಸಿದ್ದರಿಂದ ಮತಾಂತರಗೊಂಡಿದ್ದಾಗಿ ದಾವೆ
ಅನೋಖೇಲಾಲ್ ತಾನು ೨೦ ವರ್ಷಗಳಿಂದ ಕ್ರೈಸ್ತ ಪಂಥದ ಪ್ರಚಾರ ಮಾಡುತ್ತಿರುವುದಾಗಿ ಮತ್ತು ತಾನು ಈ ಕೆಲಸವನ್ನು ‘ಒಳ್ಳೆಯ ಕೆಲಸ’ ಎಂದು ಪರಿಗಣಿಸುವುದಾಗಿ ಹೇಳಿದನು. ತನ್ನ ಹಿಂದೆ ಒಂದು ದುಷ್ಟ ಆತ್ಮ ಬಿದ್ದಿತ್ತು. ಅದು ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿತ್ತು ಎಂದು ಅವನು ದಾವೆ ಮಾಡಿದನು. ಅವನು ದೆಹಲಿಯಲ್ಲಿ ಓರ್ವ ವ್ಯಕ್ತಿಯನ್ನು ಭೇಟಿಯಾದನು. ಅವನು ಇವನಿಗೆ ಬೈಬಲ್ ಓದಲು ಸಲಹೆ ನೀಡಿದನು. ಇದರ ನಂತರ ಯೇಸು ಕ್ರಿಸ್ತನು ಅವನನ್ನು ಆ ದುಷ್ಟ ಆತ್ಮದಿಂದ ಮುಕ್ತಗೊಳಿಸಿದನು. (ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದಿದ್ದರಿಂದ ಇಂತಹ ಇತರ ಧರ್ಮೀಯರ ಮೂಢನಂಬಿಕೆಗಳಿಗೆ ಬಲಿಯಾಗಿ ಹಿಂದೂಗಳು ಆತ್ಮಾಹುತಿ ಮತ್ತು ರಾಷ್ಟ್ರಘಾತ ಮಾಡುತ್ತಿದ್ದಾರೆ ! ಇದನ್ನು ತಡೆಯಲು ಹಿಂದೂ ಸಂಘಟನೆಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು ! – ಸಂಪಾದಕರು) ಅದರ ನಂತರ ಅವನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡನು. ಅಂದಿನಿಂದ ಅವನು ಹಳ್ಳಿಹಳ್ಳಿಗೆ ಹೋಗಿ ಕ್ರೈಸ್ತ ಪಂಥದ ಪ್ರಚಾರ ಮಾಡುತ್ತಿದ್ದಾನೆ. (ಮತಾಂತರಗೊಂಡವರು ಹೆಚ್ಚು ಕಟ್ಟರಾಗಿರುತ್ತಾರೆ, ಎಂಬುದು ಇದರಿಂದಲೇ ಕಂಡುಬರುತ್ತದೆ ! – ಸಂಪಾದಕರು)
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ