‘ಕ್ರೀಮಿ ಲೇಯರ್' ಕುರಿತು ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ
(ಕ್ರೀಮಿ ಲೇಯರ್ ಎಂದರೆ ಹಿಂದುಳಿದ ವರ್ಗಗಳಲ್ಲಿ ಯಾರ ವಾರ್ಷಿಕ ಆದಾಯವು ೮ ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದೆಯೋ, ಅವರಿಗೆ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಲಾಗುವುದಿಲ್ಲ. ಇಂತಹ ಜನರು ‘ಕ್ರೀಮಿ ಲೇಯರ್’ ಪರಿಕಲ್ಪನೆಯಡಿ ಬರುತ್ತಾರೆ.)

ನವದೆಹಲಿ – ತಂದೆ-ತಾಯಿ ಇಬ್ಬರೂ ಭಾರತೀಯ ಆಡಳಿತ ಸೇವೆಯ (ಐ.ಎ.ಎಸ್. – ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್) ಅಧಿಕಾರಿಗಳಾಗಿದ್ದರೆ, ಅವರ ಮಕ್ಕಳಿಗೆ ಮೀಸಲಾತಿ ಏಕೆ ಸಿಗಬೇಕು? ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದೆ. ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಕುಟುಂಬಗಳ ಮಕ್ಕಳಿಗೆ ಮೀಸಲಾತಿಯ ಲಾಭವನ್ನು ಮುಂದುವರಿಸುವುದರ ಕುರಿತು ನ್ಯಾಯಾಲಯವು ಈ ಪ್ರಶ್ನೆಯನ್ನು ಎತ್ತಿದೆ. ಕರ್ನಾಟಕ ಹೈಕೋರ್ಟ್ನ ತೀರ್ಪೊಂದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ನಡೆಸುತ್ತಿತ್ತು. ಆ ತೀರ್ಪಿನಲ್ಲಿ ಅರ್ಜಿದಾರರನ್ನು ‘ಕ್ರೀಮಿ ಲೇಯರ್’ ಎಂದು ಪರಿಗಣಿಸಿ ಮೀಸಲಾತಿಯ ಲಾಭವನ್ನು ನಿರಾಕರಿಸಲಾಗಿತ್ತು.
ಮಕ್ಕಳಿಗಾಗಿ ಮೀಸಲಾತಿಯನ್ನು ಕೇಳುತ್ತಲೇ ಇದ್ದರೆ, ನಾವು ಎಂದಿಗೂ ಇದರಿಂದ ಹೊರಬರಲು ಸಾಧ್ಯವಿಲ್ಲ!
ಅರ್ಜಿದಾರರ ತಂದೆ-ತಾಯಿ ಇಬ್ಬರೂ ರಾಜ್ಯ ಸರಕಾರದ ಉದ್ಯೋಗಿಗಳಾಗಿದ್ದಾರೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ಮಾತನಾಡಿ, “ಒಂದು ವೇಳೆ ತಂದೆ-ತಾಯಿ ಒಳ್ಳೆಯ ಉದ್ಯೋಗದಲ್ಲಿದ್ದು, ಉತ್ತಮ ಆದಾಯವನ್ನು ಗಳಿಸುತ್ತಿದ್ದರೆ, ಅವರ ಮಕ್ಕಳು ಮೀಸಲಾತಿಯಿಂದ ಹೊರಬರಬೇಕು. ಇಂತಹ ಸಮೃದ್ಧ ವರ್ಗವನ್ನು ಮೀಸಲಾತಿಯ ಲಾಭದಿಂದ ಹೊರಗಿಡುವಂತೆ ಸರಕಾರ ಈಗಾಗಲೇ ಆದೇಶಿಸಿದೆ. ಮಕ್ಕಳಿಗಾಗಿಯೂ ಮೀಸಲಾತಿಯನ್ನು ಕೇಳುತ್ತಲೇ ಹೋದರೆ, ನಾವು ಎಂದಿಗೂ ಇದರಿಂದ ಹೊರಬರಲು ಸಾಧ್ಯವಿಲ್ಲ” ಎಂದು ಹೇಳಿತು.
ಅರ್ಜಿದಾರನು ‘ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್’ (ಕೆ.ಪಿ.ಟಿ.ಸಿ.ಎಲ್.) ನಲ್ಲಿ ಮೀಸಲಾತಿ ಪ್ರವರ್ಗದ ಅಡಿಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದನು; ಆದರೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಆತನನ್ನು ‘ಕ್ರೀಮಿ ಲೇಯರ್’ ವ್ಯಾಪ್ತಿಗೆ ಒಳಪಡಿಸಿತು. ಈ ಕಾರಣದಿಂದಾಗಿ ಆತನಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲಾಗಿರಲಿಲ್ಲ. ಆತನ ಪೋಷಕರ ಒಟ್ಟು ಜಂಟಿ ಆದಾಯವು ಕ್ರೀಮಿ ಲೇಯರ್ ದ ೮ ಲಕ್ಷ ರೂಪಾಯಿಗಳ ಮಿತಿಗಿಂತ ಹೆಚ್ಚಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ