
ಕೊಲಕಾತಾ (ಬಂಗಾಲ) – ಬಂಗಾಲದ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ೨೭ ಕಿಲೋಮೀಟರ್ ಭೂಮಿಯನ್ನು ಗಡಿ ಭದ್ರತಾ ಪಡೆಗೆ ಒಪ್ಪಿಸಿದರು. ಇದರ ಮೇಲೆ ಈಗ ಬೇಲಿ ಮತ್ತು ಭದ್ರತಾ ವ್ಯವಸ್ಥೆಯನ್ನು ನಿರ್ಮಿಸುವರು.
ಗಡಿ ಭದ್ರತಾ ಪಡೆ, ಪೊಲೀಸ್ ಮತ್ತು ಆಡಳಿತ ಇವುಗಳ ಸಮನ್ವಯ ಸಭೆಗಳು ಮತ್ತೆ ಪ್ರಾರಂಭವಾಗಲಿವೆ !
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು, ‘ಇದು ಕೇವಲ ಪ್ರಾರಂಭವಾಗಿದೆ. ಮುಂದೆ ಗಡಿ ಭದ್ರತೆಗಾಗಿ ಎಲ್ಲಿ ಭೂಮಿಯ ಅವಶ್ಯಕತೆಯಿರುತ್ತದೆಯೋ, ರಾಜ್ಯ ಸರಕಾರವು ಅದನ್ನು ಗಡಿ ಭದ್ರತಾ ಪಡೆಗೆ ಲಭ್ಯ ಮಾಡಿಕೊಡುವುದು. ಗಡಿ ಭದ್ರತೆಯನ್ನು ಬಲಪಡಿಸಲು ಬೇಲಿಯ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ಹಿಂದಿನ ತೃಣಮೂಲ ಕಾಂಗ್ರೆಸ್ ಸರಕಾರವು ಮತಬ್ಯಾಂಕಿನ ರಾಜಕಾರಣ ಮತ್ತು ಓಲೈಕೆಯಿಂದಾಗಿ ಗಡಿ ಭದ್ರತಾ ಪಡೆಗೆ ಭೂಮಿಯನ್ನು ನೀಡಲಿಲ್ಲ. ಕಳೆದ ಅನೇಕ ವರ್ಷಗಳಿಂದ ಗಡಿಭಾಗದ ಜಿಲ್ಲೆಗಳಲ್ಲಿ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಮತ್ತು ಜಿಲ್ಲಾಡಳಿತದ ನಡುವೆ ಸಮನ್ವಯ ಸಭೆಗಳು ನಡೆಯುತ್ತಿರಲಿಲ್ಲ. ಈಗ ಈ ಸಭೆಗಳು ಮತ್ತೆ ಪ್ರಾರಂಭವಾಗಿದ್ದು ಮುಂದೆ ಅವು ನಿಯಮಿತವಾಗಿ ನಡೆಯಲಿವೆ’ ಎಂದು ಹೇಳಿದರು.
ಈ ಸಮಯದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರಿಗಳು, ‘ರಾಜ್ಯದ ೨ ಸಾವಿರದ ೨೦೦ ಕಿಲೋಮೀಟರ್ ಉದ್ದದ ಅಂತರರಾಷ್ಟ್ರೀಯ ಗಡಿಯ ಪೈಕಿ ಅಂದಾಜು ೧ ಸಾವಿರದ ೬೦೦ ಕಿಲೋಮೀಟರ್ ಭಾಗದಲ್ಲಿ ಬೇಲಿ ಹಾಕಿದ್ದಾರೆ, ಹಾಗೂ ಅಂದಾಜು ೬೦೦ ಕಿಲೋಮೀಟರ್ ಗಡಿಯು ಇಂದಿಗೂ ಬೇಲಿಯಿಲ್ಲದೆ ಇದೆ’ ಎಂದು ಹೇಳಿದರು.
ಬಂಗಾಲದಲ್ಲಿ ನಾಗರಿಕತ್ವ ಸುಧಾರಣಾ ಕಾಯ್ದೆ ಜಾರಿ !ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಈ ಸಮಯದಲ್ಲಿ, ರಾಜ್ಯದಲ್ಲಿ ‘ಸಿಎಎ’ (ಸಿಟಿಜನ್ ಅಮೆಂಡಮೆಂಟ್ ಆಕ್ಟ್ – ನಾಗರಿಕತ್ವ ಸುಧಾರಣಾ ಕಾಯ್ದೆ) ಜಾರಿಗೊಳಿಸಿರುವುದಾಗಿ ಘೋಷಿಸಿದರು. ನುಸುಳುಕೋರರ ಪ್ರಶ್ನೆಯ ಕುರಿತು ಅವರು, ‘ಈಗ ರಾಜ್ಯ ಪೊಲೀಸರು ಹಿಡಿದ ನುಸುಳುಕೋರರನ್ನು ನೇರವಾಗಿ ಗಡಿ ಭದ್ರತಾ ಪಡೆಗೆ ಒಪ್ಪಿಸುವರು. ಇಂತಹ ಜನರನ್ನು ನಂತರ ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸುವರು. ಕೇಂದ್ರ ಸರಕಾರವು ಕಳೆದ ವರ್ಷ ಈ ಸಂದರ್ಭದಲ್ಲಿ ರಾಜ್ಯಕ್ಕೆ ಪತ್ರವನ್ನು ಕಳುಹಿಸಿತ್ತು; ಆದರೆ ಹಿಂದಿನ ಸರಕಾರವು ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯಾರು ‘ಸಿಎಎ’ಯ (ಸಿಟಿಜನ್ ಅಮೆಂಡಮೆಂಟ್ ಆಕ್ಟ್ – ನಾಗರಿಕತ್ವ ಸುಧಾರಣಾ ಕಾಯ್ದೆ) ವ್ಯಾಪ್ತಿಯಲ್ಲಿ ಬರುವುದಿಲ್ಲವೋ, ಅವರನ್ನು ನುಸುಳುಕೋರರು ಎಂದು ಪರಿಗಣಿಸುವರು’ ಎಂದು ಹೇಳಿದರು. |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !