ತಮಿಳು ನಟ ಜಯ್ ನೀಡಿದ ಮಾಹಿತಿ

ಚೆನ್ನೈ (ತಮಿಳುನಾಡು) – ದೇವಸ್ಥಾನದಲ್ಲಿ ಅಪಮಾನವಾಯಿತು ಎಂಬ ಕಾರಣಕ್ಕಾಗಿ ತಮಿಳು ನಟ ಜಯ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಜಯರವರೇ ಸಂದರ್ಶನವೊಂದರಲ್ಲಿ ನೀಡಿದ್ದಾರೆ. ತಾನು ೨೦೧೧ ರಿಂದ ಇಸ್ಲಾಂನ್ನು ಪಾಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಆದರೆ ಅವರು ಇದುವರೆಗೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿಲ್ಲ.
“After being repeatedly insulted in temples, I left Hinduism and accepted Islam,” says Tamil actor Jai.
If some people insulted him in a temple, they may have been wrong – but how can the entire religion be blamed for it?
Changing one’s religion over such incidents is a serious… pic.twitter.com/yXlAfZewb0
— Sanatan Prabhat (@SanatanPrabhat) May 20, 2026
ಜಯರವರು ಸಂದರ್ಶನದಲ್ಲಿ,
೧. ನಾನು ಶಬರಿಮಲೆಗಾಗಿ ಕೊರಳಿಗೆ ಮಾಲೆ ಧರಿಸಿದ್ದೆ. ಆನಂತರ ಒಂದು ವರ್ಷ ಏಸುವಿಗಾಗಿಯೂ ಮಾಲೆ ಧರಿಸಿ ಉಪವಾಸ ವ್ರತ ಮಾಡಿದ್ದೆ; ಆದರೆ ಒಂದು ಸಮಯವಿತ್ತು, ಆಗ ದೇವಸ್ಥಾನದಲ್ಲಿ ಪದೇ ಪದೇ ನನಗೆ ಅಪಮಾನ ಮಾಡಲಾಯಿತು. ಇಂತಹ ಕೆಲವು ಘಟನೆಗಳಿಂದಾಗಿ ನನಗೆ ತುಂಬಾ ಬೇಸರವಾಯಿತು.
೨. ನಾನು ಮಸೀದಿಗೆ ಹೋದಾಗ, ಅಲ್ಲಿ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿರುವುದನ್ನು ನೋಡಿದೆ. ನಾನು ಒಬ್ಬ ನಟ ಎಂಬುದು ಅಲ್ಲಿ ಎಲ್ಲರಿಗೂ ಗೊತ್ತಿತ್ತು. ಆದರೂ ಮಸೀದಿಯೊಳಗೆ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ಮಸೀದಿಯಿಂದ ಹೊರಗೆ ಬಂದ ನಂತರವೇ ಕೆಲವು ಜನರು ನನ್ನೊಂದಿಗೆ ಮಾತನಾಡಿದರು, ಅದೂ ಸಹ ಅತ್ಯಂತ ನಮ್ರತೆಯಿಂದ. ಯಾರೂ ನನಗೆ ಛಾಯಾಚಿತ್ರಕ್ಕಾಗಿ ಒತ್ತಾಯಿಸಲಿಲ್ಲ.
೩. ಆಗ ನನಗೆ ಇಲ್ಲಿ ಎಲ್ಲರೂ ಸಮಾನರು ಎಂದು ಅನ್ನಿಸಿತು. (ಇಸ್ಲಾಂ ಧರ್ಮದ ಅಧ್ಯಯನ ಮತ್ತು ಪ್ರಸ್ತುತ ಸ್ಥಿತಿಯ ಅರಿವಿಲ್ಲದ ಕಾರಣ ಇಂತಹ ತಪ್ಪು ಕಲ್ಪನೆಗಳು ಮೂಡುತ್ತವೆ! – ಸಂಪಾದಕರು) ಮಸೀದಿಯೊಳಗೆ ಹೋದಾಗ ಕೇವಲ ಅಲ್ಲಾಹ್ ಮಾತ್ರ ಅತ್ಯುನ್ನತ. ಎಷ್ಟೇ ದೊಡ್ಡ ವ್ಯಕ್ತಿ ಬಂದರೂ ಅವರಿಗೆ ಸಮಾನವಾದ ಗೌರವ ಸಿಗುತ್ತದೆ. ಮಸೀದಿಯೊಳಗೆ ನೀವು ಪ್ರಾರ್ಥನೆ ಮಾಡುತ್ತಿರುವಾಗ ಯಾರೂ ನೂಕುನುಗ್ಗಲು ಮಾಡುವುದಿಲ್ಲ ಅಥವಾ ಅಲ್ಲಿಂದ ಹೋಗಲು ಹೇಳುವುದಿಲ್ಲ. ನಿಮಗೆ ಎಷ್ಟು ಸಮಯ ಅಲ್ಲಿ ಇರಬೇಕೋ ಅಷ್ಟು ಸಮಯ ಕುಳಿತು ಪ್ರಾರ್ಥನೆ ಮಾಡಬಹುದು.
೪. ಇಸ್ಲಾಂ ಸ್ವೀಕರಿಸಿದಾಗಿನಿಂದ ನನ್ನ ಸ್ವಭಾವದಲ್ಲೂ ಸಾಕಷ್ಟು ಬದಲಾವಣೆ ಕಂಡುಬಂದಿದೆ. ವರ್ಷ ೨೦೧೯ ರಲ್ಲಿ ನಾನು ಮತಾಂತರಗೊಂಡೆ. ನನಗೆ ಇಸ್ಲಾಂ ಧರ್ಮದ ಮೇಲೆ ಶ್ರದ್ಧೆಯಿದೆ. ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ; ಏಕೆಂದರೆ ಯಾವ ದೇವರ ಪೂಜೆಯನ್ನೂ ಮಾಡದ ಮಗನು ಈಗ ಧಾರ್ಮಿಕನಾಗಿದ್ದಾನೆ. (ಮುಂದೆ ಅವನು ಮತಾಂಧನಾಗದಿದ್ದರೆ ಸಾಕು! – ಸಂಪಾದಕರು) ಮತಾಂತರಗೊಂಡ ನಂತರವೂ ನಾನು ಇನ್ನೂ ನನ್ನ ಹೆಸರನ್ನು ಬದಲಾಯಿಸಿಲ್ಲ. ನಾನು ನನ್ನ ಹೆಸರನ್ನು ಬದಲಾಯಿಸಿ ‘ಅಜೀಜ್ ಜಯ’ ಎಂದು ಇಟ್ಟುಕೊಳ್ಳುವ ಆಲೋಚನೆಯಲ್ಲಿದ್ದೇನೆ.
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”