ಮಿರ್ಜಾಪುರ (ಉತ್ತರ ಪ್ರದೇಶ)ದಲ್ಲಿ ‘ಜಿಮ್ ಜಿಹಾದ್’ ಪ್ರಕರಣ
(‘ಜಿಮ್ ಜಿಹಾದ್’ ಎಂದರೆ ವ್ಯಾಯಾಮಶಾಲೆಗೆ ಬರುವ ಹಿಂದೂ ಮಹಿಳೆಯರನ್ನು ಅಲ್ಲಿನ ಮತಾಂಧ ತರಬೇತುದಾರರು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವರ ಶೋಷಣೆ ಮಾಡುವುದು)

ಮಿರ್ಜಾಪುರ (ಉತ್ತರ ಪ್ರದೇಶ) – ನಗರದಲ್ಲಿನ ‘ಜಿಮ್ ಜಿಹಾದ್’ ಮತ್ತು ಮತಾಂತರ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಠಿಣ ನಿಲುವು ತಳೆದಿದ್ದಾರೆ. ಅವರ ಆದೇಶದ ಮೇರೆಗೆ ಮಹಿಳೆಯರ ವಿರುದ್ಧ ಅಪರಾಧ ಎಸಗುತ್ತಿದ್ದ ‘ಲವ್ ಜಿಹಾದ್’ ಗ್ಯಾಂಗ್ನ ೧೦ ಆರೋಪಿಗಳ ವಿರುದ್ಧ ‘ಗ್ಯಾಂಗ್ಸ್ಟರ್ ಆಕ್ಟ್’ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿನ ಆರೋಪಿಗಳಾದ ಮೌಲ್ವಿ ಖಲೀಲುರ್ ರೆಹಮಾನ್, ಜಿಮ್ ತರಬೇತುದಾರ ಇಮ್ರಾನ್ ಖಾನ್ ಸೇರಿದಂತೆ ೧೦ ಆರೋಪಿಗಳ ಮೇಲೆ ಲವ್ ಜಿಹಾದ್ನ ಸಂಘಟ ಗ್ಯಾಂಗ್ ನಡೆಸುತ್ತಿರುವ ಆರೋಪವಿದೆ.
೧. ತನಿಖಾ ಸಂಸ್ಥೆಗಳು ನೀಡಿದ ಮಾಹಿತಿಯ ಪ್ರಕಾರ, ಈ ಗ್ಯಾಂಗ್ ಪೂರ್ಣ ಯೋಜನೆಯೊಂದಿಗೆ ಹಿಂದೂ ಮಹಿಳೆಯರನ್ನು ಬಲೆಯಲ್ಲಿ ಸಿಲುಕಿಸಿ ಅವರನ್ನು ಗುರಿಯಾಗಿಸುತ್ತಿತ್ತು.
೨. ಈ ಗ್ಯಾಂಗ್ ವ್ಯಾಯಾಮ ತರಬೇತಿಯ ನೆಪದಲ್ಲಿ ಹಿಂದೂ ಮಹಿಳೆಯರನ್ನು ಪ್ರೇಮದ ಜಾಲದಲ್ಲಿ ಸಿಲುಕಿಸುತ್ತಿತ್ತು. ಆ ನಂತರ ಈ ಜಿಹಾದಿಗಳಿಂದ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಲಾಗುತ್ತಿತ್ತು. ಅವರ ಆಕ್ಷೇಪಾರ್ಹ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತಯಾರಿಸಿ, ಅವುಗಳ ಮೂಲಕ ಅವರನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು.
೩. ಪೊಲೀಸರು ಈ ಗ್ಯಾಂಗ್ಗೆ ಸಂಬಂಧಿಸಿದ ಇತರ ಜಿಹಾದಿಗಳ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಉತ್ತರ ಪ್ರದೇಶದ ‘ಗ್ಯಾಂಗ್ಸ್ಟರ್ ಆಕ್ಟ್’ ಎಂದರೇನು ?
‘ಉತ್ತರ ಪ್ರದೇಶ ಗುಂಡಾ ಮತ್ತು ಸಮಾಜವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಅಧಿನಿಯಮ (ಕಾಯ್ದೆ), ೧೯೮೬’ ಒಂದು ಕಠಿಣ ಕಾನೂನಾಗಿದ್ದು, ಇದನ್ನು ಸಂಘಟಿತ ಅಪರಾಧಗಳು ಮತ್ತು ಅಪರಾಧಿ ಗ್ಯಾಂಗ್ಗಳನ್ನು ನಿರ್ಮೂಲನೆ ಮಾಡಲು ಬಳಸಲಾಗುತ್ತದೆ. ಈ ಕಾಯ್ದೆಯಡಿ ಅಪರಾಧಿ ಎಂದು ಸಾಬೀತಾದರೆ ಕನಿಷ್ಠ ೨ ವರ್ಷ ಮತ್ತು ಗರಿಷ್ಠ ೧೦ ವರ್ಷಗಳ ಜೈಲು ಶಿಕ್ಷೆ, ಹಾಗೂ ಕನಿಷ್ಠ ೫ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಅಪರಾಧಿಗಳು ತಮ್ಮ ಕಾನೂನುಬಾಹಿರ ಚಟುವಟಿಕೆಗಳಿಂದ ಗಳಿಸಿದ ಆಸ್ತಿ ಮತ್ತು ಸಂಪತ್ತನ್ನು ಪತ್ತೆಹಚ್ಚಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಆಡಳಿತಕ್ಕೆ ಲಭಿಸುತ್ತದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !