ಗುರುತನ್ನು ಮರೆಮಾಚಿ ಹಿಂದೂ ಮಹಿಳಾ ನ್ಯಾಯವಾದಿಯ ಶಾರೀರಿಕ ಶೋಷಣೆ ಮಾಡಿದ ಜಿಹಾದಿ ನ್ಯಾಯವಾದಿ !

ಸೂರತ (ಗುಜರಾತ) ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ

ಸೂರತ (ಗುಜರಾತ) – ನಗರದ ಓರ್ವ ಸಂತ್ರಸ್ತೆಯಾದ ಹಿಂದೂ ಮಹಿಳಾ ನ್ಯಾಯವಾದಿಯು ತನ್ನದೇ ಸಹೋದ್ಯೋಗಿ ನ್ಯಾಯವಾದಿಯ ಮೇಲೆ ಗುರುತನ್ನು ಮರೆಮಾಚಿ ಪ್ರೇಮಸಂಬಂಧ ಬೆಳೆಸುವುದು, ಮದುವೆಯ ಆಮಿಷ ತೋರಿಸುವುದು ಮತ್ತು ಶಾರೀರಿಕ ಶೋಷಣೆ ಮಾಡುವುದು ಇತ್ಯಾದಿ ಆರೋಪಗಳನ್ನು ಮಾಡಿದ್ದಾರೆ. ಸಂತ್ರಸ್ತೆಯು ಆರೋಪಿಯು ತನ್ನ ಹೆಸರನ್ನು ‘ರೋಹನ್’ ಎಂದು ಸುಳ್ಳು ಹೇಳಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

೧. ಸಂತ್ರಸ್ತೆಯ ಹೇಳುವಂತೆ, ಆರೋಪಿಯು ಹಿಂದೂ ಧರ್ಮದ ಕುರಿತು ತನಗಿರುವ ಗಾಢ ಶ್ರದ್ಧೆಯನ್ನು ತೋರಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು. ಇದರಿಂದಾಗಿ ಅವಳಿಗೆ ಅವನ ಮೇಲೆ ಪೂರ್ಣ ವಿಶ್ವಾಸ ಮೂಡಿತ್ತು.

೨. ಇದೇ ವಿಶ್ವಾಸದ ಬಲದ ಮೇಲೆ ಆರೋಪಿಯು ಮದುವೆಯ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಬಂಧ ಇಟ್ಟಿದ್ದಾಗಿ ಮಹಿಳಾ ನ್ಯಾಯವಾದಿಯು ಆರೋಪಿಸಿದ್ದಾರೆ.

೩. ಸಂತ್ರಸ್ತೆಯು ಮದುವೆಗಾಗಿ ಒತ್ತಾಯಿಸಿದಾಗ, ಆರೋಪಿಯು ಹಠಾತ್ತನೆ ನಿರಾಕರಿಸಿದನು ಮತ್ತು ಸತ್ಯವು ಹೊರಬಂದಿತು.

೪. ಸಂತ್ರಸ್ತೆಯು ಆರೋಪಿಯನ್ನು ವಿರೋಧಿಸಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ಅವನು ಅವಳಿಗೆ ಹೊಡೆದು ಬಡಿದು, ಜಾತಿ ನಿಂದನೆ ಮಾಡಿ ಅವಮಾನಿಸಿದನು.

೫. ಆರೋಪಿಗೆ ಈಗಾಗಲೇ ಮತ್ತೊಬ್ಬ ಮಹಿಳೆಯೊಂದಿಗೆ ಮದುವೆಯಾಗಿತ್ತು. ಈ ಮಾಹಿತಿ ದೊರೆತ ನಂತರ ಸಂತ್ರಸ್ತೆಗೆ ತನ್ನೊಂದಿಗೆ ವಂಚನೆ ಮತ್ತು ಶೋಷಣೆಯಾಗಿರುವುದು ಗಮನಕ್ಕೆ ಬಂದಿತು. ಆನಂತರ ಮಹಿಳೆಯು ಸೂರತ್‌ ನ ಚೌಕ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

ನ್ಯಾಯವಾದಿಯಾಗಿರುವ ಹಿಂದೂ ಮಹಿಳೆಯೂ ಲವ್ ಜಿಹಾದ್‌ ಗೆ ಬಲಿಯಾಗುತ್ತಾರೆ ಎಂದಾದರೆ, ಹಿಂದೂ ಯುವತಿಯರು ಎಷ್ಟು ಜಾಗರೂಕರಾಗಿರಬೇಕು ಎಂಬುದು ಇದರಿಂದ ಕಂಡುಬರುತ್ತದೆ !