ಸೂರತ (ಗುಜರಾತ) ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ

ಸೂರತ (ಗುಜರಾತ) – ನಗರದ ಓರ್ವ ಸಂತ್ರಸ್ತೆಯಾದ ಹಿಂದೂ ಮಹಿಳಾ ನ್ಯಾಯವಾದಿಯು ತನ್ನದೇ ಸಹೋದ್ಯೋಗಿ ನ್ಯಾಯವಾದಿಯ ಮೇಲೆ ಗುರುತನ್ನು ಮರೆಮಾಚಿ ಪ್ರೇಮಸಂಬಂಧ ಬೆಳೆಸುವುದು, ಮದುವೆಯ ಆಮಿಷ ತೋರಿಸುವುದು ಮತ್ತು ಶಾರೀರಿಕ ಶೋಷಣೆ ಮಾಡುವುದು ಇತ್ಯಾದಿ ಆರೋಪಗಳನ್ನು ಮಾಡಿದ್ದಾರೆ. ಸಂತ್ರಸ್ತೆಯು ಆರೋಪಿಯು ತನ್ನ ಹೆಸರನ್ನು ‘ರೋಹನ್’ ಎಂದು ಸುಳ್ಳು ಹೇಳಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
೧. ಸಂತ್ರಸ್ತೆಯ ಹೇಳುವಂತೆ, ಆರೋಪಿಯು ಹಿಂದೂ ಧರ್ಮದ ಕುರಿತು ತನಗಿರುವ ಗಾಢ ಶ್ರದ್ಧೆಯನ್ನು ತೋರಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು. ಇದರಿಂದಾಗಿ ಅವಳಿಗೆ ಅವನ ಮೇಲೆ ಪೂರ್ಣ ವಿಶ್ವಾಸ ಮೂಡಿತ್ತು.
೨. ಇದೇ ವಿಶ್ವಾಸದ ಬಲದ ಮೇಲೆ ಆರೋಪಿಯು ಮದುವೆಯ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಬಂಧ ಇಟ್ಟಿದ್ದಾಗಿ ಮಹಿಳಾ ನ್ಯಾಯವಾದಿಯು ಆರೋಪಿಸಿದ್ದಾರೆ.
೩. ಸಂತ್ರಸ್ತೆಯು ಮದುವೆಗಾಗಿ ಒತ್ತಾಯಿಸಿದಾಗ, ಆರೋಪಿಯು ಹಠಾತ್ತನೆ ನಿರಾಕರಿಸಿದನು ಮತ್ತು ಸತ್ಯವು ಹೊರಬಂದಿತು.
೪. ಸಂತ್ರಸ್ತೆಯು ಆರೋಪಿಯನ್ನು ವಿರೋಧಿಸಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ಅವನು ಅವಳಿಗೆ ಹೊಡೆದು ಬಡಿದು, ಜಾತಿ ನಿಂದನೆ ಮಾಡಿ ಅವಮಾನಿಸಿದನು.
೫. ಆರೋಪಿಗೆ ಈಗಾಗಲೇ ಮತ್ತೊಬ್ಬ ಮಹಿಳೆಯೊಂದಿಗೆ ಮದುವೆಯಾಗಿತ್ತು. ಈ ಮಾಹಿತಿ ದೊರೆತ ನಂತರ ಸಂತ್ರಸ್ತೆಗೆ ತನ್ನೊಂದಿಗೆ ವಂಚನೆ ಮತ್ತು ಶೋಷಣೆಯಾಗಿರುವುದು ಗಮನಕ್ಕೆ ಬಂದಿತು. ಆನಂತರ ಮಹಿಳೆಯು ಸೂರತ್ ನ ಚೌಕ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ