ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರಕ್ಕೆ ಲಜ್ಜಾಸ್ಪದ ಘಟನೆ...
ಪ್ರವಾಸಿಗರು ಕೋಟೆಯ ಮೇಲೆ ಮದ್ಯಪಾನದ ಔತಣಕೂಟ ಮಾಡುತ್ತಿರುವುದು ಬಹಿರಂಗ

ಮಹಾಡ (ರಾಯಗಡ ಜಿಲ್ಲೆ) – ರಾಯಗಡ ಕೋಟೆಯ ಮೇಲೆ ಪ್ರವಾಸಿಗರು ಮದ್ಯಪಾನದ ಔತಣಕೂಟಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೋಟೆಯ ಆವರಣದಲ್ಲಿ ಮದ್ಯದ ೫೦ ಕ್ಕೂ ಅಧಿಕ ಖಾಲಿ ಬಾಟಲಿಗಳ ರಾಶಿ ಬಿದ್ದಿರುವುದು ಕಂಡುಬಂದಿದೆ. ಇದರ ವಿರುದ್ಧ ಕೋಟೆ ಪ್ರೇಮಿಗಳು, ಸ್ಥಳೀಯ ನಾಗರಿಕರು ಮತ್ತು ಶಿವ(ಛತ್ರಪತಿ ಶಿವಾಜಿ ಮಹಾರಾಜ)ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯದ ಬಾಟಲಿಗಳೊಂದಿಗೆ ಪ್ಲಾಸ್ಟಿಕ್ ಕಸ ಮತ್ತು ದೊಡ್ಡ ಪ್ರಮಾಣದಲ್ಲಿ ಅಸ್ವಚ್ಛತೆಯೂ ಕಂಡುಬಂದಿದೆ.
ಕೋಟೆಯ ಮುಖ್ಯ ಪ್ರವೇಶದ್ವಾರಗಳಲ್ಲಿ ಪ್ರವಾಸಿಗರು ಮತ್ತು ಅವರ ಸಾಮಗ್ರಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡದೇ ಇದ್ದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶಿವ(ಛತ್ರಪತಿ ಶಿವಾಜಿ ಮಹಾರಾಜ)ಪ್ರೇಮಿಗಳು ಆರೋಪಿಸಿದ್ದಾರೆ. ‘ಕೋಟೆಗೆ ಹೋಗುವ ಪ್ರತಿಯೊಬ್ಬ ಪ್ರವಾಸಿಗನನ್ನು ಪ್ರವೇಶದ್ವಾರದಲ್ಲಿ ಕೂಲಂಕಷವಾಗಿ ತಪಾಸಣೆ ನಡೆಸಬೇಕು. ಕೋಟೆಯ ಮೇಲಿರುವ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ತಕ್ಷಣವೇ ಹೆಚ್ಚಿಸಬೇಕು. ಕೋಟೆಯ ಆವರಣದಲ್ಲಿ ಮತ್ತು ಮುಖ್ಯ ಐತಿಹಾಸಿಕ ವಾಸ್ತುಗಳ ಹಿಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕೋಟೆಯ ಮೇಲೆ ಮದ್ಯಪಾನ ನಿಷೇಧದ ಫಲಕಗಳನ್ನು ಅಳವಡಿಸಿ, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ಶಿವಭಕ್ತರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಕೋಟೆ-ದುರ್ಗಗಳ ಮೇಲೆ ಅವ್ಯವಸ್ಥೆ ನಡೆದಿರುವ ಕಳೆದ ೨ ವರ್ಷಗಳ ಕೆಲವು ಉದಾಹರಣೆಗಳು !
ಡಿಸೆಂಬರ್ ೨೦೨೫ : ಸಿಂಹಗಡ ಕೋಟೆಗೆ ಹೋಗುತ್ತಿದ್ದ ಒಂದು ಕಾರಿನಿಂದ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿತ್ತು.
ಅಕ್ಟೋಬರ್ ೨೦೨೫ : ಭೋರ (ಪುಣೆ ಜಿಲ್ಲೆ) ಇಲ್ಲಿನ ರಾಯರೇಶ್ವರ ಕೋಟೆಯ ಬಳಿ ಕೆಲವು ಜನರು ಮದ್ಯಪಾನ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.
ಜುಲೈ ೨೦೨೪ : ವಿಶಾಲಗಡ ಕೋಟೆಯ ಮೇಲೆ ಭಾರಿ ಪ್ರಮಾಣದಲ್ಲಿ ಕಸ ಪತ್ತೆಯಾಗಿದ್ದರಿಂದ ವ್ಯಾಪಕ ಆಂದೋಲನ ನಡೆಸಲಾಗಿತ್ತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !