ಸಾಂಸ್ಕೃತಿಕ ಕಾರ್ಯ ಸಚಿವ ಆಶಿಶ್ ಶೆಲಾರ್ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ ಪ್ರಭಾತ್ ಲೋಧಾ ಅವರಿಗೆ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣ !

ಆಶಿಶ್ ಶೆಲಾರ್ ಅವರಿಗೆ ಆಮಂತ್ರಣ ನೀಡುತ್ತಿರುವ ಸುನೀಲ್ ಘನವಟ್

ಮುಂಬಯಿ, 11 ಮೇ (ವಾರ್ತೆ.) – ಮಹಾರಾಷ್ಟ್ರದ ಸಾಂಸ್ಕೃತಿಕ ಕಾರ್ಯ ಸಚಿವ ಆಶಿಶ್ ಶೆಲಾರ್ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ ಪ್ರಭಾತ್ ಲೋಧಾ ಅವರಿಗೆ ಸನಾತನ ಸಂಸ್ಥೆಯ ವತಿಯಿಂದ ಮುಂಬಯಿನಲ್ಲಿ ನಡೆಯಲಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣವನ್ನು ನೀಡಲಾಯಿತು. ತಪೋಭೂಮಿ ಭಾರತಕ್ಕೆ ರಕ್ಷಾಕವಚ ಲಭಿಸಲು ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲು, ಸನಾತನ ಸಂಸ್ಥೆಯ ವತಿಯಿಂದ ಈ ಮಹಾಯಜ್ಞವನ್ನು ಆಯೋಜಿಸಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ್ ಅವರು ಸಚಿವಾಲಯದಲ್ಲಿ ಭೇಟಿಯಾಗಿ ಸಚಿವರಿಗೆ ಈ ಯಜ್ಞದ ಆಮಂತ್ರಣವನ್ನು ನೀಡಿದರು. ಮೇ 17 ರಂದು ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ ಸಂಜೆ 7.30 ರವರೆಗೆ ಈ ಮಹಾಯಜ್ಞವು ನೂರಾರು ಜನರ ಉಪಸ್ಥಿತಿಯಲ್ಲಿ ನಡೆಯಲಿದೆ.