ಆಂಧ್ರ ಉಪಮುಖ್ಯಮಂತ್ರಿ ವಿರುದ್ಧ ವಿವಾದಿತ ಹೇಳಿಕೆ: ಪಾದ್ರಿ ಮೇಲೆ ಪ್ರಕರಣ ದಾಖಲು

ಅಮರಾವತಿ (ಆಂಧ್ರಪ್ರದೇಶ) – ರಾಜ್ಯದ ದಂಗೇತಿವಾರಿಪಾಲೆಮ್‌ನ ‘ರಿಡೀಮ್ ಇಂಡಿಯಾ ಚರ್ಚ್‌ನ ಪಾದ್ರಿಯೊಬ್ಬರು ‘ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ತುಂಡು ತುಂಡು ಮಾಡಬೇಕು’ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

೧. ಸಂಬಂಧಿತ ಪಾದ್ರಿಯು ತನ್ನ ಭಾಷಣದ ಸಮಯದಲ್ಲಿ ಪವನ್ ಕಲ್ಯಾಣ್ ಅವರ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ. ಅಲ್ಲದೆ, ‘ನೀವು ಸನಾತನ ಧರ್ಮವನ್ನು ನಂಬುವುದಾದರೆ, ಅದು ನಿಮ್ಮ ತಾಯಿ ಮತ್ತು ಸಹೋದರಿಯನ್ನು ಮಾರಾಟ ಮಾಡಿದಂತೆ’ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

೨. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಸ್ಥಳೀಯ ನಾಗರಿಕರು ಮತ್ತು ಪವನ್ ಕಲ್ಯಾಣ್ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

೩. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

'ಪ್ರೀತಿ' ಮತ್ತು 'ಶಾಂತಿ'ಯ ಸಂದೇಶ ನೀಡುವ ಪಾದ್ರಿಯ ಹಿಂಸಾತ್ಮಕ ರೂಪವನ್ನು ತಿಳಿಯಿರಿ!