‘ಭಾರತದ ೨೫ ಕೋಟಿ ಮುಸಲ್ಮಾನರು ಒಂದಾಗಿ ಭಾರತವನ್ನು ವಿಭಜಿಸಬೇಕು !’

ಬಾಂಗ್ಲಾದೇಶ: ಆಡಳಿತ ಪಕ್ಷದ ನಾಯಕ ಅಲ್ತಾಬ್ ಹುಸೇನ್ ಮುಲ್ಲಾ ಅವರ ಪ್ರಚೋದನಾಕಾರಿ ಹೇಳಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಯ ನಂತರ ನಿರ್ಮಾಣವಾಗಿರುವ ಅಸ್ಥಿರತೆಯ ವಾತಾವರಣದಲ್ಲಿ ಈಗ ಅಲ್ಲಿನ ನಾಯಕರಿಂದ ಭಾರತದ ವಿರುದ್ಧ ಬಹಿರಂಗವಾಗಿ ವಿಷ ಕಾರಲಾಗುತ್ತಿದೆ. ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ (‘ಬಿ.ಎನ್.ಪಿ.’ಯ) ನಾಯಕ ಅಲ್ತಾಬ್ ಹುಸೇನ್ ಮುಲ್ಲಾ ಅವರ ಅತ್ಯಂತ ಪ್ರಚೋದನಾಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಭಾರತೀಯ ಮುಸಲ್ಮಾನರಿಗೆ ದೇಶವನ್ನು ವಿಭಜಿಸುವಂತೆ ಅಲ್ತಾಬ್ ಪ್ರಚೋದನೆ ನೀಡಿದ್ದಾರೆ. ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವಾಗ, ‘ಒಂದು ವೇಳೆ ಭಾರತದ ೨೦ ರಿಂದ ೨೫ ಕೋಟಿ ಮುಸಲ್ಮಾನರು ಒಂದಾದರೆ, ಅವರು ಭಾರತವನ್ನು ತುಂಡು-ತುಂಡು ಮಾಡಬಲ್ಲರು ಮತ್ತು ಅಲ್ಲಿನ ಮುಸ್ಲಿಮರು ಶೀಘ್ರದಲ್ಲೇ ಈ ಮಾರ್ಗವನ್ನು ಅನುಸರಿಸಲಿದ್ದಾರೆ’ ಎಂದು ಅಲ್ತಾಬ್ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ತೀವ್ರ ಆಕ್ರೋಶ

ಈ ವಿಡಿಯೋ ಹೊರಬಂದ ನಂತರ ಭಾರತದಲ್ಲಿ ಆಕ್ರೋಶದ ಅಲೆ ಎದ್ದಿದೆ. ಅನೇಕ ರಕ್ಷಣಾ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಇದನ್ನು ಭಾರತದ ಸಾರ್ವಭೌಮತ್ವಕ್ಕೆ ನೀಡಿದ ನೇರ ಬೆದರಿಕೆ ಎಂದು ಕರೆದಿದ್ದಾರೆ. ಕೇಂದ್ರ ಸರಕಾರ ಮತ್ತು ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶ ಸರಕಾರಕ್ಕೆ ಈ ಪ್ರಕರಣದ ಬಗ್ಗೆ ಕಠಿಣ ಶಬ್ದಗಳಲ್ಲಿ ಪ್ರತಿಭಟನೆಯನ್ನು ದಾಖಲಿಸಬೇಕೆಂದು ಅನೇಕರು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷ’ದ ಸರಕಾರವು ಒಂದೆಡೆ ಭಾರತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ತನ್ನ ಭಾರತದ್ವೇಷಿ ಜಿಹಾದಿ ಮಾನಸಿಕತೆಯನ್ನು ಪ್ರದರ್ಶಿಸುತ್ತಿದೆ. ಇದರಿಂದ ಬಾಂಗ್ಲಾದೇಶದ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ!
  • ಇರಾನ್ ಯುದ್ಧದಿಂದಾಗಿ ಸಂಕಷ್ಟಕ್ಕೀಡಾಗಿರುವ ಬಾಂಗ್ಲಾದೇಶಕ್ಕೆ ಭಾರತವು ಡೀಸೆಲ್ ನೀಡಿ ಸಹಾಯ ಮಾಡುತ್ತಿದೆ, ಭಾರತೀಯ ಸಂಸ್ಥೆಗಳು ವಿದ್ಯುತ್ ಪೂರೈಕೆ ಮಾಡುತ್ತಿವೆ, ಭಾರತದಿಂದಲೇ ಗಂಗಾನದಿಯ ನೀರು ಬಾಂಗ್ಲಾದೇಶಕ್ಕೆ ಹೋಗುತ್ತದೆ; ಇದನ್ನು ಗಮನಿಸಿದರೆ ಭಾರತವು ಬಾಂಗ್ಲಾದೇಶದ ಮೇಲೆ ನಿಯಂತ್ರಣ ಸಾಧಿಸಲು ಈಗಲೇ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ!