
- ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.
- ಅರ್ಪಣೆ ಪೆಟ್ಟಿಗೆಯ ಹಣ ಮತ್ತು ಒಡವೆಗಳ ಭ್ರಷ್ಟಾಚಾರ ಬಹಿರಂಗವಾಗಿದೆ. ಗುತ್ತಿಗೆದಾರರು ಮತ್ತು ಧರ್ಮದರ್ಶಿಗಳು ಕೂಡ ಅನೇಕ ಕಡೆ ದೇವನಿಧಿಯನ್ನು ಲೂಟಿ ಮಾಡಿ ಧರ್ಮಕ್ಕೆ ಹಾನಿಯುಂಟು ಮಾಡಿದ್ದಾರೆ.
- ಅರ್ಚಕರಿಗೆ ಅತೀ ಕಡಿಮೆ ಗೌರವಧನ ನೀಡುತ್ತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ೫೦ ಸಾವಿರದಿಂದ ೧ ಲಕ್ಷ ರೂಪಾಯಿಗಳ ವರೆಗೆ ಸಂಬಳ ನೀಡಲಾಗುತ್ತದೆ.
- ದೇವಸ್ಥಾನಗಳ ವಿಷಯದಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದರೂ ಎಲ್ಲ ಪಕ್ಷಗಳ ಸರಕಾರಗಳಿಂದ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದೆ.
- ಮತಾಂಧರು, ಜಾತ್ಯತೀತರು, ಪ್ರಗತಿ(ಅಧೋಗತಿ) ಪರರಿಂದಲೂ ದೇವಸ್ಥಾನಗಳ ಮೇಲೆ ಆಘಾತಗಳಾದವು.
- ವಕ್ಫ್ ಕಾಯ್ದೆಯ ಮೂಲಕ ದೇವಸ್ಥಾನಗಳು, ಹಾಗೆಯೇ ದೇವಸ್ಥಾನಗಳ ಭೂಮಿಗಳನ್ನು ವಶಪಡಿಸಿಕೊಳ್ಳುವ ಮೂಲಕ ಧರ್ಮದ್ರೋಹ ನಡೆಯಿತು.
- ಸ್ವಾತಂತ್ರ್ಯದ ಬಳಿಕ ದೇಶಾದ್ಯಂತ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳ ಸರಕಾರಿಕರಣ ಮಾಡಲಾಯಿತು.
- ದೇವಸ್ಥಾನಗಳಿಂದ ಧರ್ಮಶಿಕ್ಷಣ ನೀಡುವುದು ನಿಂತು ಹೋದ ಕಾರಣ ಹಿಂದೂಗಳಿಗೆ ಒಳಗಿಂದೊಳಗೆ ಅಪಾರ ಹಾನಿಯಾಯಿತು.
- ಧರ್ಮಶಿಕ್ಷಣದ ಕೊರತೆಯಿಂದ ದೇವಸ್ಥಾನಗಳಲ್ಲಿ ಕಳ್ಳತನಗಳ ಪ್ರಮಾಣ ಹೆಚ್ಚಾಯಿತು. ಮೂರ್ತಿಗಳನ್ನು ಕಳವು ಮಾಡಿ ವಿದೇಶಗಳಿಗೆ ಕಳುಹಿಸಿರುವುದು ಕೂಡ ಬಹಿರಂಗವಾಗಿದೆ.
- ದೇವಸ್ಥಾನಗಳ ನಿರ್ಮಾಣದ ಹಿಂದಿನ ವಿಜ್ಞಾನವನ್ನು ನಾಶ ಮಾಡಲಾಯಿತು.
– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !
ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆಯ ಚಾಲನೆ
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!