ದೇವಸ್ಥಾನ ಸಂಸ್ಕೃತಿಯ ಮೇಲಾಗುತ್ತಿರುವ ವಿವಿಧ ಆಘಾತಗಳು !

  • ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ  ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.
  • ಅರ್ಪಣೆ ಪೆಟ್ಟಿಗೆಯ ಹಣ ಮತ್ತು ಒಡವೆಗಳ ಭ್ರಷ್ಟಾಚಾರ ಬಹಿರಂಗವಾಗಿದೆ. ಗುತ್ತಿಗೆದಾರರು ಮತ್ತು ಧರ್ಮದರ್ಶಿಗಳು ಕೂಡ ಅನೇಕ ಕಡೆ ದೇವನಿಧಿಯನ್ನು ಲೂಟಿ ಮಾಡಿ ಧರ್ಮಕ್ಕೆ ಹಾನಿಯುಂಟು ಮಾಡಿದ್ದಾರೆ.
  • ಅರ್ಚಕರಿಗೆ ಅತೀ ಕಡಿಮೆ ಗೌರವಧನ ನೀಡುತ್ತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ೫೦ ಸಾವಿರದಿಂದ ೧ ಲಕ್ಷ ರೂಪಾಯಿಗಳ ವರೆಗೆ ಸಂಬಳ ನೀಡಲಾಗುತ್ತದೆ.
  • ದೇವಸ್ಥಾನಗಳ ವಿಷಯದಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದರೂ ಎಲ್ಲ ಪಕ್ಷಗಳ ಸರಕಾರಗಳಿಂದ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದೆ.
  • ಮತಾಂಧರು, ಜಾತ್ಯತೀತರು, ಪ್ರಗತಿ(ಅಧೋಗತಿ) ಪರರಿಂದಲೂ ದೇವಸ್ಥಾನಗಳ ಮೇಲೆ ಆಘಾತಗಳಾದವು.
  • ವಕ್ಫ್ ಕಾಯ್ದೆಯ ಮೂಲಕ ದೇವಸ್ಥಾನಗಳು, ಹಾಗೆಯೇ ದೇವಸ್ಥಾನಗಳ ಭೂಮಿಗಳನ್ನು ವಶಪಡಿಸಿಕೊಳ್ಳುವ ಮೂಲಕ ಧರ್ಮದ್ರೋಹ ನಡೆಯಿತು.
  • ಸ್ವಾತಂತ್ರ್ಯದ ಬಳಿಕ ದೇಶಾದ್ಯಂತ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳ ಸರಕಾರಿಕರಣ ಮಾಡಲಾಯಿತು.
  • ದೇವಸ್ಥಾನಗಳಿಂದ ಧರ್ಮಶಿಕ್ಷಣ ನೀಡುವುದು ನಿಂತು ಹೋದ ಕಾರಣ ಹಿಂದೂಗಳಿಗೆ ಒಳಗಿಂದೊಳಗೆ ಅಪಾರ ಹಾನಿಯಾಯಿತು.
  • ಧರ್ಮಶಿಕ್ಷಣದ ಕೊರತೆಯಿಂದ ದೇವಸ್ಥಾನಗಳಲ್ಲಿ ಕಳ್ಳತನಗಳ ಪ್ರಮಾಣ ಹೆಚ್ಚಾಯಿತು. ಮೂರ್ತಿಗಳನ್ನು ಕಳವು ಮಾಡಿ ವಿದೇಶಗಳಿಗೆ ಕಳುಹಿಸಿರುವುದು ಕೂಡ ಬಹಿರಂಗವಾಗಿದೆ.
  • ದೇವಸ್ಥಾನಗಳ ನಿರ್ಮಾಣದ ಹಿಂದಿನ ವಿಜ್ಞಾನವನ್ನು ನಾಶ ಮಾಡಲಾಯಿತು.

– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ