‘ಕಾರ್ಪೊರೇಟ್ ಜಿಹಾದ್’ ವಿಷಯವನ್ನು ನಾನು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರವರೆಗೆ ತಲುಪಿಸುತ್ತೇನೆ! – ಸಂತೋಷ ಕುಮಾರ ಗಂಗ್ವಾರ್, ರಾಜ್ಯಪಾಲರು, ಜಾರ್ಖಂಡ್

ಎಡದಿಂದ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್, ಶ್ರೀ. ಶಂಭು ಗವಾರೆ, ಶ್ರೀ. ಚಂದ್ರಕಾಂತ ರಾಯ್ ಪತ್, ಪೂಜಾ ಚೌಹಾಣ್ ಮತ್ತು ಶ್ರೀ. ಸಿ.ಡಿ. ಸಿಂಗ್

ರಾಂಚಿ (ಜಾರ್ಖಂಡ್) – ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ‘ಕಾರ್ಪೊರೇಟ್ ಜಿಹಾದ್’ ನ ಪ್ರಕರಣವು ಅತ್ಯಂತ ಗಂಭೀರವಾಗಿದೆ. ಈ ಸಂದರ್ಭದಲ್ಲಿ ನೀವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ. ನಾನು ಸಹ ಇಂದು ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರಿಗೆ ಕಳುಹಿಸುತ್ತೇನೆ, ಎಂದು ಜಾರ್ಖಂಡ್ ರಾಜ್ಯಪಾಲರಾದ ಶ್ರೀ. ಸಂತೋಷ ಕುಮಾರ ಗಂಗ್ವಾರ್ ಅವರು ಇಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು.

ನಾಸಿಕ್‌ನಲ್ಲಿನ ‘ಟಿ.ಸಿ.ಎಸ್.’ ನಂತಹ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ‘ಕಾರ್ಪೊರೇಟ್ ಜಿಹಾದ್’ ಘಟನೆ ಬೆಳಕಿಗೆ ಬಂದ ನಂತರ ಅದರ ತೀವ್ರ ಪ್ರತಿಕ್ರಿಯೆಗಳು ದೇಶಾದ್ಯಂತ ಕೇಳಿಬರುತ್ತಿವೆ. ಆದ್ದರಿಂದ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಭದ್ರತೆ ಮತ್ತು ಧಾರ್ಮಿಕ ತಾರತಮ್ಯ ವಿರೋಧಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯಪಾಲ ಸಂತೋಷ ಕುಮಾರ ಗಂಗ್ವಾರ್ ಅವರಿಗೆ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಈಶಾನ್ಯ ಭಾರತ ರಾಜ್ಯ ಸಮನ್ವಯಕಾರರಾದ ಶ್ರೀ. ಶಂಭು ಗವಾರೆ, ವಿಶ್ವ ಹಿಂದೂ ಪರಿಷತ್ತಿನ ಜಾರ್ಖಂಡ್ ರಾಜ್ಯ ಅಧ್ಯಕ್ಷರಾದ ಶ್ರೀ. ಚಂದ್ರಕಾಂತ್ ರಾಯಪತ್, ಸಮಿತಿಯ ಪೂಜಾ ಚೌಹಾಣ್ ಮತ್ತು ಶ್ರೀ. ಸಿ.ಡಿ. ಸಿಂಗ್ ಉಪಸ್ಥಿತರಿದ್ದರು.