‘ಜಾನಿ ಜಾನಿ ಯೆಸ್ ಪಾಪಾ’ದಂತಹ ಇಂಗ್ಲಿಷ್ ಕವಿತೆಗಳು ಮಕ್ಕಳಿಗೆ ಸುಳ್ಳು ಹೇಳುವುದನ್ನು ಕಲಿಸುತ್ತವೆ! – ಯೋಗೇಂದ್ರ ಉಪಾಧ್ಯಾಯ, ಶಿಕ್ಷಣ ಸಚಿವರು, ಉತ್ತರ ಪ್ರದೇಶ

ಕಾನ್ಪುರ (ಉತ್ತರ ಪ್ರದೇಶ) – ‘ಜಾನಿ ಜಾನಿ ಯೆಸ್ ಪಾಪಾ’ ಎಂಬ ಇಂಗ್ಲಿಷ್ ಕವಿತೆ ಎಲ್ಲರಿಗೂ ಪರಿಚಿತವಾಗಿರುತ್ತದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಸಣ್ಣ ಮಕ್ಕಳು ಈ ಕವಿತೆಯನ್ನು ಇಷ್ಟಪಟ್ಟು ಹೇಳುತ್ತಾರೆ; ಆದರೆ ಈ ಕವಿತೆಯು ಮಕ್ಕಳಿಗೆ ಸುಳ್ಳು ಹೇಳುವುದನ್ನು ಕಲಿಸುತ್ತದೆ ಎಂದು ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ ಹೇಳಿದ್ದಾರೆ. ಕಾನ್ಪುರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಉಪಾಧ್ಯಾಯ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಾಯ ಅವರು ಯಾವ ಕವಿತೆಗಳನ್ನು ಕೇಳಿ ಹಿಂದಿನ ಪೀಳಿಗೆಗಳು ಬೆಳೆದವೋ, ಅಂತಹ ಉತ್ತಮ ಜೀವನ ಮೌಲ್ಯಗಳನ್ನು ಹೊಂದಿರುವ ಕೆಲವು ಹಿಂದಿ ಕವಿತೆಗಳ ಉದಾಹರಣೆಗಳನ್ನೂ ನೀಡಿದರು. ‘ಶಿಕ್ಷಕರು ಪಠ್ಯಕ್ರಮದ ಜೊತೆಗೆ ಸಂಸ್ಕಾರ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು ಅವರು ಕರೆ ನೀಡಿದರು.

ಸಚಿವ ಯೋಗೇಂದ್ರ ಉಪಾಧ್ಯಾಯ ಅವರು,

೧. ಯಾವಾಗ ಶಿಕ್ಷಕರು ಗುರುವಿನ ಪಾತ್ರವನ್ನು ವಹಿಸುತ್ತಾರೋ, ಆಗ ಅವರು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ನೀಡಬಲ್ಲರು. ‘ಜಾನಿ ಜಾನಿ ಯೆಸ್ ಪಾಪಾ’ ಈ ಕವಿತೆಯಲ್ಲಿ ‘ಈಟಿಂಗ್ ಶುಗರ್ ನೋ ಪಾಪಾ’ ಎಂಬ ಸಾಲುಗಳು ಮಕ್ಕಳಿಗೆ ಬಾಲ್ಯದಿಂದಲೇ ಸುಳ್ಳು ಹೇಳುವುದನ್ನು ಕಲಿಸುತ್ತವೆ.

೨. ಪಾಶ್ಚಾತ್ಯ ಸಂಸ್ಕೃತಿ ಇರುವ ಇಂಗ್ಲಿಷ್ ಕವಿತೆಗಳು ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿರುವ ಸಂಸ್ಕಾರಗಳನ್ನು ನೀಡಲು ಸಾಧ್ಯವಿಲ್ಲ.

ಸಂಪಾದಕೀಯ ನಿಲುವು

ಇಂತಹ ಕವಿತೆಗಳನ್ನು ಕಳೆದ ಹಲವು ದಶಕಗಳಿಂದ ಭಾರತೀಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದ್ದರೂ, ಯಾರೂ ಅವುಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕುವ ಧೈರ್ಯವನ್ನು ಏಕೆ ತೋರಿಸಲಿಲ್ಲ? ಮತ್ತು ಈಗಲಾದರೂ ಅವುಗಳನ್ನು ತೆಗೆದುಹಾಕಲಾಗುವುದೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ!