ಭಾಜಪದಿಂದ ತೃಣಮೂಲ ಕಾಂಗ್ರೆಸ್ ಮೇಲೆ ಆರೋಪ!

ಕೋಲಕಾತಾ (ಬಂಗಾಳ) – ಬಂಗಾಳದ ಭಾಜಪ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರಕಾಂತ ರಥ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯ ಮಧ್ಯಮ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಥ ಅವರ ಜೊತೆಗಿದ್ದ ಚಾಲಕ ಬುದ್ಧದೇವ ಈ ದಾಳಿಯಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಕಾಂತ ರಥ ಅವರು ಸುವೇಂದು ಅಧಿಕಾರಿ ಅವರ ರಾಜಕೀಯ ಸಮನ್ವಯದ ಕೆಲಸವನ್ನು ನೋಡಿಕೊಳ್ಳುತ್ತಿದ್ದರು. ರಥ ಅವರು ರಾಜಕೀಯ ಕ್ಷೇತ್ರಕ್ಕೆ ಬರುವ ಮೊದಲು ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.
‘ಈ ದಾಳಿಯು ತೃಣಮೂಲ ಕಾಂಗ್ರೆಸ್ಸಿನ ಇಷ್ಟು ವರ್ಷಗಳ ಹಿಂಸಾತ್ಮಕ ಪ್ರವೃತ್ತಿಯ ಸಂಕೇತವಾಗಿದೆ. ಈ ಪ್ರಕರಣದ ಬಗ್ಗೆ ಆಳವಾದ ತನಿಖೆಯಾಗಬೇಕು. ಈ ದಾಳಿಯ ಹಿಂದೆ ದೊಡ್ಡ ಸಂಚು ಇರುವ ಸಾಧ್ಯತೆಯಿದೆ,” ಎಂದು ಭಾಜಪ ನಾಯಕ ನಿಖಿಲ ಪ್ರಸೂನ ಹೇಳಿದ್ದಾರೆ.
ಸಿಬಿಐ ತನಿಖೆ ನಡೆಸಿ! – ತೃಣಮೂಲ ಕಾಂಗ್ರೆಸ್ ಬೇಡಿಕೆ
ಮಧ್ಯಮಗ್ರಾಮದ ಚಂದ್ರಕಾಂತ ರಥ ಅವರ ಬರ್ಬರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ಸೇರಿದಂತೆ ಕಠಿಣ ಕ್ರಮಕ್ಕೆ ನಾವು ಆಗ್ರಹಿಸುತ್ತೇವೆ. ಇತರ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ಹತ್ಯೆಯ ಘಟನಾವಳಿ!
೧. ಸ್ಕಾರ್ಪಿಯೋದಲ್ಲಿದ್ದ ಚಂದ್ರಕಾಂತ ರಥ ಅವರು ಉತ್ತರ ೨೪ ಪರಗಣದ ಮಧ್ಯಮಗ್ರಾಮದ ಡೋಲತಲಾ ಪ್ರದೇಶದಿಂದ ಮೇ ೬ ರಂದು ರಾತ್ರಿ ಸುಮಾರು ೧೦.೩೦ ಗಂಟೆಗೆ ಮನೆಗೆ ಹೋಗುತ್ತಿದ್ದರು.
೨. ಮೋಟಾರ್ ಸೈಕಲ್ ಮತ್ತು ನಾಲ್ಕು ಚಕ್ರದ ವಾಹನದಲ್ಲಿ ಬಂದ ಹಂತಕರು ಹಿಂದಿನಿಂದ ಬಂದು ರಥ ಅವರ ವಾಹನವನ್ನು ಬಲವಂತವಾಗಿ ತಡೆದರು. ಅವರು ಮುಂದಿನ ಸೀಟಿನಲ್ಲಿ ಕುಳಿತಿದ್ದ ರಥ್ ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿದರು.
೩. ವಾಹನದ ಬಾಗಿಲಿನ ಗಾಜಿನ ಮೂಲಕ ಗುಂಡುಗಳು ರಥ ಮತ್ತು ಅವರ ಚಾಲಕನಿಗೆ ತಗುಲಿದವು. ಇದರ ನಂತರ ಹಂತಕರು ಪರಾರಿಯಾದರು.
೪. ರಥ ಅವರ ತಲೆ, ಎದೆ ಮತ್ತು ಹೊಟ್ಟೆಗೆ ಗುಂಡುಗಳು ತಗುಲಿದ್ದವು. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ರಥ ಅವರನ್ನು ಪರೀಕ್ಷಿಸಿದ ನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
೫. ಘಟನೆಯ ನಂತರ ಭಾಜಪ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ೧೨ ರಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು. ಹಂತಕರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕೆಂದು ಅವರು ಒತ್ತಾಯಿಸಿದರು.
೬. ಮೋಟಾರ್ ಸೈಕಲ್ನಲ್ಲಿ ಬಂದ ಹಂತಕರು ಹೆಲ್ಮೆಟ್ ಧರಿಸಿದ್ದರು ಮತ್ತು ವಾಹನಕ್ಕೆ ನಂಬರ್ ಪ್ಲೇಟ್ ಇರಲಿಲ್ಲ. ಪೊಲೀಸರು ಘಟನಾ ಸ್ಥಳದಿಂದ ಸ್ಕಾರ್ಪಿಯೋ ದಾರಿಯನ್ನು ತಡೆದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆ ವಾಹನದ ನಂಬರ್ ಪ್ಲೇಟ್ ನಕಲಿ ಎಂದು ತಿಳಿದುಬಂದಿದೆ.
೭. ಹಂತಕರು ‘ಗ್ಲಾಕ್ ೪೭ ಎಕ್ಸ್’ ಪಿಸ್ತೂಲ್ ಬಳಸಿದ್ದಾರೆ. ಸಾಮಾನ್ಯ ಅಪರಾಧಿಗಳು ಇಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ. ದಾಳಿಯ ವಿಧಾನವನ್ನು ನೋಡಿದರೆ ಇದು ವೃತ್ತಿಪರ ಶೂಟರ್ ಗಳಿಂದಲೇ ನಡೆದಿದೆ ಎಂದು ತೋರುತ್ತದೆ.
ಭಾಜಪ ಕಾರ್ಯಕರ್ತನ ಮೇಲೂ ಗುಂಡಿನ ದಾಳಿ
ಚಂದ್ರಕಾಂತ ರಥ ಅವರ ಮೇಲಿನ ಗುಂಡಿನ ದಾಳಿಯ ನಂತರ ರಾತ್ರಿ ೧೨:೩೦ ರ ಸುಮಾರಿಗೆ ಬಸಿರಹತ್ ಜಿಲ್ಲೆಯಲ್ಲಿ ರೋಹಿತ ರಾಯ್ ಎಂಬ ಭಾಜಪ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದೆ. ಅವರ ಸ್ಥಿತಿ ಗಂಭೀರವಾಗಿದೆ. ಮೇ ೪ ರಂದು ಚುನಾವಣಾ ಫಲಿತಾಂಶ ಘೋಷಣೆಯಾದಾಗಿನಿಂದ ರಾಜ್ಯದಲ್ಲಿ ೫ ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ೩ ಜನರು ಭಾಜಪ ಮತ್ತು ೨ ಜನರು ತೃಣಮೂಲ ಕಾಂಗ್ರೆಸ್ಸಿಗೆ ಸೇರಿದವರಾಗಿದ್ದಾರೆ.
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad