ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ರದ್ದು!

ನೋಟಿಸ್‌ಗೆ ದೇವಸ್ಥಾನದ ವಿರೋಧದ ಪರಿಣಾಮ!

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನ

ಗೋಕರ್ಣ – ಶ್ರೀ ಸಂಸ್ಥಾನ ಮಹಾಬಲೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು 2016-17ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ 13 ಲಕ್ಷ ರೂಪಾಯಿ ಮತ್ತು 2019-20ನೇ ಸಾಲಿಗೆ 90 ಲಕ್ಷ ರೂಪಾಯಿ ಬಾಕಿ ತೆರಿಗೆ ಪಾವತಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು; ಈಗ ಈ ಪ್ರಕರಣದಲ್ಲಿ ದೇವಸ್ಥಾನಕ್ಕೆ ಜಯ ಸಿಕ್ಕಿದ್ದು, ತೆರಿಗೆ ಬಾಕಿ ‘ಶೂನ್ಯ’ ಎಂದು ಆದಾಯ ತೆರಿಗೆ ಇಲಾಖೆಯ ‘ಕಮಿಷನರ್ ಆಫ್ ಅಪೀಲ್’ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು, 2015-16ನೇ ಸಾಲಿನ 1 ಕೋಟಿ 42 ಲಕ್ಷ ರೂಪಾಯಿ ತೆರಿಗೆ ಬಾಕಿ ಪ್ರಕರಣದಲ್ಲೂ ದೇವಸ್ಥಾನದ ಆಡಳಿತ ಮಂಡಳಿಗೆ ಜಯ ಸಿಕ್ಕಿತ್ತು. ಈಗ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧವಿದ್ದ ಎಲ್ಲಾ ಆದಾಯ ತೆರಿಗೆ ಪ್ರಕರಣಗಳು ಅಂತ್ಯಗೊಂಡಿವೆ.

ಸಂಪಾದಕೀಯ ನಿಲುವು

ಆದಾಯ ತೆರಿಗೆ ಇಲಾಖೆಯು ಮಸೀದಿ ಅಥವಾ ಚರ್ಚ್‌ಗಳಿಗೆ ಇಂತಹ ನೋಟಿಸ್ ನೀಡಿದ್ದನ್ನು ಎಂದಾದರೂ ಕೇಳಿದ್ದೀರಾ? ಇಂತಹ ಘಟನೆಗಳೇ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತವೆ!