
ವಾರಣಾಸಿ (ಉತ್ತರ ಪ್ರದೇಶ) – ವಾರಣಾಸಿಯಲ್ಲಿ ಶುಕ್ರವಾರದ ನಮಾಜ್ಗಿಂತ ಮೊದಲು ಜ್ಞಾನವಾಪಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ಪ್ರವೇಶ ದ್ವಾರ ಸಂಖ್ಯೆ ೪ ರ ಹೊರಗೆ ಸ್ವಲ್ಪ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜ್ಞಾನವಾಪಿ ಸಮೀಪದ ಗೋಡೆಯೊಂದರ ಮೇಲೆ ಮಧುಬನಿ ಶೈಲಿಯ ಚಿತ್ರವನ್ನು ಬಿಡಿಸಲಾಗಿತ್ತು, ಇದರಿಂದಾಗಿ ಈ ಉದ್ವಿಗ್ನತೆ ಉಂಟಾಯಿತು; ಆದರೆ ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಭೇಟಿಗೂ ಮುನ್ನ ಈ ಚಿತ್ರ ಬಿಡಿಸುವ ಕೆಲಸ ಮಾಡಲಾಗಿತ್ತು. ನಮಾಜ್ ಸಮಯದಲ್ಲಿ ಯಾವುದೇ ವಿರೋಧ ವ್ಯಕ್ತವಾಗದಿದ್ದರೂ ಮತ್ತು ನಮಾಜ್ ಶಾಂತಿಯುತವಾಗಿ ನಡೆದಿದ್ದರೂ, ಈ ಹಿಂದೆ ಇದ್ದ ಸ್ಥಿತಿಯನ್ನು ಬದಲಾಯಿಸುವ ಅಗತ್ಯವಿರಲಿಲ್ಲ ಎಂದು ಕೆಲವು ಜನರು ಹೇಳಿದರು. ಇಂತಹ ಕೆಲಸಗಳಿಂದ ಸಾಮಾಜಿಕ ಸೌಹಾರ್ದತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಭೂಮಿ ವಕ್ಫ್ಗೆ ಸೇರಿದ್ದೆಂದು ದಾವೆ ಮಾಡುತ್ತಾ ದೂರು ದಾಖಲು
ವಾರಣಾಸಿಯ ‘ಮುಫ್ತಿ-ಎ-ಬನಾರಸ್’ ಮೌಲಾನಾ ಅಬ್ದುಲ್ ಬಾತಿನ ನೋಮಾನಿ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭೂಮಿ ವಕ್ಫ್ಗೆ ಸೇರಿದ್ದಾಗಿದ್ದು ಮತ್ತು ಜ್ಞಾನವಾಪಿ ಸಮಿತಿಯ ಅನುಮತಿಯಿಲ್ಲದೆ ಅದರ ಮೇಲೆ ಚಿತ್ರ ಬಿಡಿಸಲಾಗಿದೆ ಎಂದು ಅವರು ಹೇಳಿದರು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದರೂ ಯಾರೂ ಗಮನ ಹರಿಸಲಿಲ್ಲ. ಮುಫ್ತಿ ಅವರು ಲಿಖಿತ ದೂರನ್ನು ಸಲ್ಲಿಸಿದ್ದು, ಚಿತ್ರವನ್ನು ತೆಗೆದುಹಾಕಲು ಮತ್ತೆ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಪೊಲೀಸ್ ಉಪ ಆಯುಕ್ತ (ಕಾಶಿ) ಗೌರವ್ ಬನ್ಸ್ವಾಲ್ ಮಾತನಾಡಿ, ಈ ಚಿತ್ರದಲ್ಲಿ ಯಾವುದೇ ತಪ್ಪು ಅಥವಾ ಆಕ್ಷೇಪಾರ್ಹ ವಿಷಯವಿಲ್ಲ. ಇದು ಕೇವಲ ಒಂದು ಸಾಂಸ್ಕೃತಿಕ ಚಿತ್ರವಾಗಿದೆ. ಈ ಗೋಡೆಯು ಜ್ಞಾನವಾಪಿಯ ವ್ಯಾಪ್ತಿಗೆ ಬರುವುದಿಲ್ಲ. ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ