ಭಾಜಪದ ಪ್ರಮುಖ ನಾಯಕ ಸುವೇಂದು ಅಧಿಕಾರಿ ಮೇಲೆ ತೃಣಮೂಲ ಕಾಂಗ್ರೆಸ್ ದಾಳಿ

ಕೋಲಕಾತಾ (ಬಂಗಾಳ) – ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ 142 ಸ್ಥಾನಗಳಿಗೆ ಏಪ್ರಿಲ್ 29 ರಂದು ಮತದಾನ ನಡೆಯಿತು. ಅಂತಿಮ ಅಂಕಿಅಂಶ ಲಭ್ಯವಾಗುವ ಹೊತ್ತಿಗೆ ರಾಜ್ಯದಲ್ಲಿ ಒಟ್ಟು ಶೇಕಡಾ 80 ಕ್ಕೂ ಹೆಚ್ಚು ಮತದಾನವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದಾಗ್ಯೂ, ಮತದಾನದ ವೇಳೆ ನಡೆದ ಹಲವು ಹಿಂಸಾಚಾರದ ಘಟನೆಗಳಿಂದಾಗಿ ಚುನಾವಣೆಗೆ ಕಪ್ಪುಚುಕ್ಕೆ ಬಿತ್ತು. ರಾಜ್ಯದ ಪ್ರಮುಖ ಭಾಜಪ ನಾಯಕ ಸುವೇಂದು ಅಧಿಕಾರಿ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅಧಿಕಾರಿ ಅವರ ಪ್ರಕಾರ, ದಾಳಿಕೋರರಲ್ಲಿ ಕೆಲವು ಮಹಿಳೆಯರು ಮತ್ತು ಮುಸ್ಲಿಂ ಯುವಕರು ಸೇರಿದ್ದರು.
ಏಪ್ರಿಲ್ 23 ರಂದು ಮೊದಲ ಹಂತದ 152 ಸ್ಥಾನಗಳಿಗೆ ನಡೆದ ಮತದಾನದ ಪ್ರಮಾಣ ಶೇಕಡಾ 93 ರಷ್ಟಿತ್ತು. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಯ ಕೆಲವು ಗಂಭೀರ ಘಟನೆಗಳು!
1. ರಾಜ್ಯದ ಡೈಮಂಡ್ ಹಾರ್ಬರ್ನ ಫಾಲ್ಟಾದಲ್ಲಿ ಮತಯಂತ್ರದಲ್ಲಿ ಭಾಜಪದ ಬಟನ್ಗೆ ಟೇಪ್ (ಅಂಟುಪಟ್ಟಿ) ಹಚ್ಚಿ ಮುಚ್ಚಲಾಗಿದೆ ಎಂದು ಭಾಜಪ ಆರೋಪಿಸಿದ್ದು, ಪಾಣಿಹಾಟಿಯಲ್ಲಿ ಮತಯಂತ್ರದ ಮೇಲಿನ ಭಾಜಪ ಬಟನ್ ಮೇಲೆ ಶಾಯಿಯ ಕಲೆ ಇರುವುದಾಗಿ ದೂರು ಕೇಳಿಬಂದಿದೆ.
2. ದಕ್ಷಿಣ 24 ಪರಗಣ ಜಿಲ್ಲೆಯ ಭಾಜಪ ಅಭ್ಯರ್ಥಿ ವಿಕಾಸ್ ಸರ್ದಾರ್ ಅವರ ಕಾರಿನ ಗಾಜುಗಳನ್ನು ತೃಣಮೂಲ ಕಾಂಗ್ರೆಸ್ ಗೂಂಡಾಗಳು ಒಡೆದಿದ್ದಾರೆ. ಅವರ ಭದ್ರತಾ ಸಿಬ್ಬಂದಿಯ ಬಂದೂಕನ್ನು ಕಸಿದುಕೊಳ್ಳುವ ಪ್ರಯತ್ನವೂ ನಡೆದಿದೆ.
3. ಭಾಜಪ ಅಭ್ಯರ್ಥಿ ರತ್ನಾ ದೇಬ್ನಾಥ್ ಕೂಡ ತೃಣಮೂಲ ಕಾಂಗ್ರೆಸ್ ಗೂಂಡಾಗಳು ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
4. ನಂದಿಗ್ರಾಮ ಹಾಗೂ ಭವಾನಿಪುರದ ಭಾಜಪ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಕಾಳಿಘಾಟ್ನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಿಂದ ಸುಮಾರು 100 ಮೀಟರ್ ದೂರದಲ್ಲಿರುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಸ್ಥಳೀಯರು ‘ಹಿಂದೆ ಹೋಗಿ’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಅಧಿಕಾರಿ ಅವರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವ ಮೂಲಕ ಉತ್ತರಿಸಿದರು. ಈ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ.
5. ಉತ್ತರ 24 ಪರಗಣ ಜಿಲ್ಲೆಯ ಕೆಲವು ಮತದಾರರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣೆ ವೇಳೆ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
6. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಾ ಪಾಂಡೆ ಅವರ ಮನೆಯ ಎದುರು ಮಾಣಿಕ್ತಲಾದ ಶಿಕ್ಷಾ ನಿಕೇತನ್ ಶಾಲೆಯಲ್ಲಿ ಮತಗಟ್ಟೆ ಇದೆ. ಅದರ ಸಮೀಪ ಪಾಂಡೆ ಅವರ ಪ್ರಚಾರದ ಫಲಕವೊಂದನ್ನು ಅಳವಡಿಸಲಾಗಿತ್ತು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಪ್ರಚಾರ ಸಾಮಗ್ರಿಗಳು ಇರಬಾರದು. (ಇದರಿಂದಾಗಿಯೇ ಶ್ರೇಯಾ ಪಾಂಡೆ ಗೆದ್ದರೂ, ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು! – ಸಂಪಾದಕರು)
ಮತಯಂತ್ರದ ಮೇಲೆ ಎಲ್ಲಿ ‘ಟೇಪ್’ ಕಂಡುಬರುತ್ತದೆಯೋ, ಅಲ್ಲಿ ಮರುಮತದಾನ ನಡೆಯಲಿದೆ! – ಚುನಾವಣಾ ಆಯೋಗ
ಕಪ್ಪು ಅಥವಾ ಬಿಳಿ ‘ಟೇಪ್’ ಇರುವ ಬಗ್ಗೆ ದೂರುಗಳು ಬರುವ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗುವುದು ಎಂದು ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ. ಇದರ ಜೊತೆಗೆ ಒಂದೇ ವಿಧಾನಸಭಾ ಕ್ಷೇತ್ರದ ಹಲವು ಮತಗಟ್ಟೆಗಳಿಂದ ಇಂತಹ ದೂರುಗಳು ಬಂದರೆ, ಇಡೀ ಕ್ಷೇತ್ರದಲ್ಲಿಯೇ ಮರುಮತದಾನ ನಡೆಸಲಾಗುವುದು.
‘ಹಲವು ವರ್ಷಗಳ ಬಳಿಕ ಬಂಗಾಳದಲ್ಲಿ ಶಾಂತಿಯುತ ಮತದಾನ!’ – ಇಂಡಿಯನ್ ಸೆಕ್ಯುಲರ್ ಫ್ರಂಟ್
‘ಇಂಡಿಯನ್ ಸೆಕ್ಯುಲರ್ ಫ್ರಂಟ್’ ರಾಜಕೀಯ ಪಕ್ಷದ ಅಧ್ಯಕ್ಷ ನೌಶಾದ್ ಸಿದ್ದಿಕಿ ಮಾತನಾಡಿ, ಬಂಗಾಳ ಕಳ್ಳರಿಂದ ಮುಕ್ತವಾಗಬೇಕು. ಮತಗಟ್ಟೆಗಳಿಗೆ ಹೋಗಿ ನೋಡಿ, ಹಲವು ವರ್ಷಗಳ ನಂತರ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ನಮಗೆ ಇದೇ ಬೇಕಾಗಿತ್ತು. ನಿಮಗೆ ಬೇಕಾದವರಿಗೆ ಮತ ಹಾಕಿ; ಆದರೆ ಶಾಂತಿಯಿಂದ ಮತದಾನ ಮಾಡಿ ಎಂದರು. ಸಂಪಾದಕೀಯ ನಿಲುವುಇಷ್ಟೆಲ್ಲಾ ಹಿಂಸಾಚಾರದ ನಡುವೆಯೂ ಶಾಂತಿಯುತ ಮತದಾನ ನಡೆಯುತ್ತಿದೆ ಎಂದು ಸಿದ್ದಿಕಿ ಹೇಳುತ್ತಿದ್ದರೆ, ಹಿಂದಿನ ಚುನಾವಣೆಗಳಲ್ಲಿ ಹಿಂಸಾಚಾರ ಯಾವ ಮಟ್ಟದಲ್ಲಿ ನಡೆಯುತ್ತಿತ್ತು ಎಂಬುದನ್ನು ಊಹಿಸದಿರುವುದೇ ಲೇಸು! |
‘ಹೊರಗಿನ ವೀಕ್ಷಕರು ಹಾಗೂ ಅಧಿಕಾರಿಗಳನ್ನು ಕರೆತಂದು ಭಾಜಪ ಭೀತಿ ಹುಟ್ಟಿಸುತ್ತಿದೆ!’ಹೊರಗಿನಿಂದ ಅನೇಕ ವೀಕ್ಷಕರು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಮತ್ತು ಭವಾನಿಪುರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಭಾಜಪ ಹೇಳಿದ್ದನ್ನೆಲ್ಲಾ ಅವರು ಮಾಡುತ್ತಿದ್ದಾರೆ. ಚುನಾವಣೆಗಳನ್ನು ಹೀಗೆ ನಡೆಸುತ್ತಾರೆಯೇ? ಮತದಾರರು ತಮ್ಮ ಮತ ಚಲಾಯಿಸುತ್ತಾರೆಯೇ ಹೊರತು, ಪೊಲೀಸ್ ಅಥವಾ ಭದ್ರತಾ ಪಡೆಯಲ್ಲ. ಇತ್ತೀಚೆಗಷ್ಟೇ ಕೆಲವು ಹೊಸಬರನ್ನು ಕರೆತರಲಾಗಿದ್ದು, ತಮಗೆ ಬೇಕಾದಂತೆ ಅವರು ವರ್ತಿಸುತ್ತಿದ್ದಾರೆ. ಅವರು ಭಯವನ್ನು ಹುಟ್ಟಿಸುತ್ತಿದ್ದಾರೆ. |

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ