೮ ದಿನಗಳ ಹಿಂದೆಯಷ್ಟೇ ನಡೆದಿತ್ತು ವಿದ್ಯಾರ್ಥಿಯ ಮುಂಜಿ!

ಚಿಕ್ಕಬಳ್ಳಾಪುರ – ಇಲ್ಲಿನ ನಾಗಾರ್ಜುನ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ಸಾಮಾನ್ಯ ಪ್ರವೇಶ ಪರೀಕ್ಷೆ’ (ಸಿಇಟಿ) ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅವರ ಜನಿವಾರ, ಹಾಗೂ ವಿದ್ಯಾರ್ಥಿನಿಯರಿಗೆ ಮೂಗುಬೊಟ್ಟು ತೆಗೆಯಲು ಹೇಳಿದ ಆಕ್ರೋಶಕಾರಿ ಘಟನೆ ನಡೆದಿತ್ತು. ಈ ಬಗ್ಗೆ ಈಗ ಸುಪ್ರೀತ್ ಕೆ.ಆರ್. ಎಂಬ ವಿದ್ಯಾರ್ಥಿ ತನ್ನ ಜೊತೆ ನಡೆದ ಘಟನೆಯನ್ನು ವಿವರಿಸಿದ್ದಾನೆ. ಅವನು, “ಏಪ್ರಿಲ್ ೨೩ ರಂದು ಬೆಳಗ್ಗೆ ೯ ಗಂಟೆ ೪೫ ನಿಮಿಷಕ್ಕೆ ನಾನು ಪರೀಕ್ಷಾ ಕೇಂದ್ರವನ್ನು ತಲುಪಿದೆ. ಒಳಗೆ ಹೋಗುವ ಮುನ್ನ ಅಲ್ಲಿನ ಸಿಬ್ಬಂದಿ ನನ್ನ ತಪಾಸಣೆ ಮಾಡಿದರು, ಆಗ ನಾನು ಜನಿವಾರ ಧರಿಸಿರುವುದು ಅವರ ಗಮನಕ್ಕೆ ಬಂತು. ನಾನು ಸ್ವತಃ ಜನಿವಾರ ತೆಗೆಯಲು ಸಿದ್ಧತೆ ತೋರಿಸಿದರೂ ಸಿಬ್ಬಂದಿ ಸ್ವತಃ ಅದನ್ನು ಕತ್ತರಿಯಿಂದ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು. ಈ ಘಟನೆಯಿಂದ ನನಗೆ ತೀವ್ರ ಮಾನಸಿಕ ಆಘಾತವಾಯಿತು. ಕೇವಲ ೮ ದಿನಗಳ ಹಿಂದೆಯಷ್ಟೇ ನನ್ನ ಉಪನಯನ ಸಂಸ್ಕಾರ ವಿಧಿ (ಮುಂಜಿ) ಆಗಿತ್ತು. ಪರೀಕ್ಷೆ ಮುಗಿದ ನಂತರ ನಾನು ಸ್ವತಃ ಕಸದ ಬುಟ್ಟಿಯಿಂದ ನನ್ನ ಜನಿವಾರವನ್ನು ಹುಡುಕಿ ಮನೆಗೆ ತೆಗೆದುಕೊಂಡು ಹೋದೆ,” ಎಂದು ಹೇಳಿದ್ದಾನೆ.
ಆರೋಪ ತಳ್ಳಿಹಾಕಿದ ಅಧಿಕಾರಿ!
ಪರೀಕ್ಷಾ ಕೇಂದ್ರದ ಸಮವಸ್ತ್ರ ಸಂಹಿತೆ ಅಧಿಕಾರಿ ದೊಡ್ಡ ಈರಪ್ಪ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಕೇಂದ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರವೇ ವಿದ್ಯಾರ್ಥಿಯ ತಪಾಸಣೆ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಗೆ ಅವನ ಜನಿವಾರ ತೆಗೆಯಲು ನಾವು ಹೇಳಿಲ್ಲ, ಕತ್ತರಿಸಿಲ್ಲ ಅಥವಾ ಎಸೆದಿಲ್ಲ. ಆದರೂ ಈ ವಿದ್ಯಾರ್ಥಿ ಏಕೆ ಹೀಗೆ ಆರೋಪ ಮಾಡುತ್ತಿದ್ದಾನೆ ಎಂಬುದು ನನಗೆ ತಿಳಿದಿಲ್ಲ” ಎಂದಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ !

ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಘಟನೆ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ‘ಕೃಪಾನಿಧಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ನನ್ನ ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಈಗಾಗಲೇ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ રહી ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ಸಚಿವ ಗುಂಡೂರಾವ್ ಅವರು,
೧. ಸಿಇಟಿ ಪರೀಕ್ಷೆಗೆ ಬರುವ ವಿದ್ಯಾರ್ಥಿನಿಯರ ಕಿವಿಯೋಲೆ, ಕೈಯಲ್ಲಿದ್ದ ಬಳೆಗಳು, ಹಾಗೂ ಹುಡುಗರ ಜನಿವಾರ ತೆಗೆಯುವುದು, ಹಾಗೂ ಉದ್ದನೆಯ ತೋಳುಗಳನ್ನು ಕತ್ತರಿಸುವಂತಹ ಕೃತ್ಯಗಳಿಂದ ಅವರ ಮನೋಬಲ ಕುಗ್ಗಿಸುವ ಅಮಾನವೀಯ ಕೃತ್ಯ ಕ್ಷಮಿಸಲಾರದ ಮತ್ತು ಖಂಡನೀಯವಾಗಿದೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವ ಸ್ಥಳಗಳಾಗಿರಬೇಕು. ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೇಂದ್ರಗಳಾಗಬಾರದು.
೨. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಅತ್ಯಂತ ಗಂಭೀರ ಹೆಜ್ಜೆಗಳನ್ನು ಇಡಲಿದೆ. ಈ ಘಟನೆಯಿಂದ ವಿದ್ಯಾರ್ಥಿಗಳು ಎದೆಗುಂದಬಾರದು. ಅವರು ಪರೀಕ್ಷೆಗೆ ಉತ್ತಮ ಸಿದ್ಧತೆ ನಡೆಸಬೇಕು ಮತ್ತು ಜೀವನದಲ್ಲಿ ಯಶಸ್ಸಿನತ್ತ ನಿಷ್ಠೆ ಮತ್ತು ನಿಶ್ಚಿಂತೆಯಿಂದ ಸಾಗಬೇಕು. ನಮ್ಮ ಸರಕಾರ ನಿಮ್ಮ ಬೆಂಬಲಕ್ಕೆ ದೃಢವಾಗಿ ನಿಂತಿದೆ. ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಮತ್ತು ಯಶಸ್ವಿಯಾಗಿ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!