ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯ ನ್ಯಾಯಾಂಗ ಹೋರಾಟಕ್ಕೆ ಜಯ!

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಸಹ-ಜಿಲ್ಲಾ ನ್ಯಾಯಾಧೀಶರು ಧಾಮರಾಯಿ ಉಪಜಿಲ್ಲೆಯ ಪೀಡಿತ ಹಿಂದೂಗಳನ್ನು ಇತ್ತೀಚೆಗೆ ಸುಳ್ಳು ಪ್ರಕರಣದಲ್ಲಿ ಖುಲಾಸೆ ಮಾಡಿದ್ದಾರೆ. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಕಾನೂನು ಹೋರಾಟಕ್ಕೆ ಜಯ ಲಭಿಸಿದೆ ಎಂದು ಸಂಘಟನೆಯ ಸಂಸ್ಥಾಪಕ ಪೂ. ನ್ಯಾಯವಾದಿ ರವೀಂದ್ರ ಘೋಷ್ ಅವರು ಮಾಹಿತಿ ನೀಡಿದ್ದಾರೆ. ಜೀವನ ಪಾಲ್, ಕಾರ್ತಿಕ ಹಲದರ ಮತ್ತು ರೂಪಾ ಹಲದರ ಎಂಬುವವರೇ ಈ ಮೂವರು ಪೀಡಿತ ಹಿಂದೂಗಳಾಗಿದ್ದಾರೆ.
೧. ಖುಲಾಸೆಗೊಂಡ ಪೀಡಿತ ಹಿಂದೂಗಳು ಒಂದು ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಅವರಿಗೆ ನ್ಯಾಯ ನೀಡುವ ಬದಲಿಗೆ, ಢಾಕಾ ಪೊಲೀಸರ ಅಪರಾಧ ಶಾಖೆಯು ಮಾನವ ಹಕ್ಕುಗಳ ಉಲ್ಲಂಘನೆಯ ಹಳೆಯ ಪ್ರಕರಣವೊಂದರಲ್ಲಿ ದೂರುದಾರ ಹಿಂದೂಗಳ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಿ ಅವರನ್ನು ಆರೋಪಿಗಳನ್ನಾಗಿ ಮಾಡಿತು.
೨. ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯು ಘಟನಾ ಸ್ಥಳಕ್ಕೆ ಹೋಗಿ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸಿದಾಗ ಜೀವನ ಪಾಲ್, ಕಾರ್ತಿಕ ಹಲದರ ಮತ್ತು ರೂಪಾ ಹಲದರ ಅವರಿಗೆ ನೀಡಿದ ಕಿರುಕುಳಕ್ಕೆ ಪೊಲೀಸರೇ ಕಾರಣರೆಂದು ಕಂಡುಬಂದಿತು.
೩. ಪೂ. ನ್ಯಾಯವಾದಿ ರವೀಂದ್ರ ಘೋಷ್ ಅವರು ೨೧ ಏಪ್ರಿಲ್ ೨೦೨೬ ರಂದು ಢಾಕಾ ನ್ಯಾಯಾಲಯದ ಸಹ-ಜಿಲ್ಲಾ ನ್ಯಾಯಾಧೀಶರ ಮುಂದೆ ಪೀಡಿತ ಹಿಂದೂಗಳ ಪರವಾಗಿ ವಾದ ಮಂಡಿಸಿದರು. ಪೊಲೀಸರು ದೂರುದಾರರ ಮೇಲೆ ಒತ್ತಡ ಹೇರಿ ಮತ್ತು ಬೆದರಿಕೆ ಹಾಕಿ ಬಲವಂತವಾಗಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂಬ ಅಂಶವನ್ನು ನ್ಯಾಯವಾದಿ ಘೋಷ್ ಅವರು ನ್ಯಾಯಾಧೀಶರ ಗಮನಕ್ಕೆ ತಂದರು.
೪. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದ ನಂತರ ಹಿಂದೂ ಪೀಡಿತರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !