ಉತ್ತರ ಪ್ರದೇಶದ ‘ಕೆ.ಜಿ.ಎಂ.ಯು.’ನ ‘ಎಂ.ಬಿ.ಬಿ.ಎಸ್.’ ವಿದ್ಯಾರ್ಥಿನಿಯರನ್ನು ದೆಹಲಿಗೆ ಕರೆದೊಯ್ಯುವ ಸಂಚು ಬಯಲು! : Hassam Ahmed

  • ವೈದ್ಯಕೀಯ ಕ್ಷೇತ್ರದಲ್ಲಿ ‘ಲವ್ ಜಿಹಾದ್’

  • ‘ಕೆ.ಜಿ.ಎಂ.ಯು.’ನ ನಕಲಿ ಜಿಹಾದಿ ವೈದ್ಯ ಹಸ್ಸಾಮ್ ಅಹ್ಮದ್ ಪೊಲೀಸ್ ವಶಕ್ಕೆ!

(ಕೆ.ಜಿ.ಎಂ.ಯು. – ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ‘ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ’ (ಕೆ.ಜಿ.ಎಂ.ಯು.) ನಲ್ಲಿ ಹಸ್ಸಾಮ್ ಅಹ್ಮದ್ ಎಂಬ ಮುಸ್ಲಿಂ ಯುವಕನು ತಾನು ‘ಕೆ.ಜಿ.ಎಂ.ಯು.’ನ ‘ಎಂ.ಬಿ.ಬಿ.ಎಸ್.’ ಉತ್ತೀರ್ಣ ವಿದ್ಯಾರ್ಥಿ ಎಂದು ಸುಳ್ಳು ಹೇಳಿ, ನಕಲಿ ಪತ್ರಗಳು ಮತ್ತು ನೋಟಿಸ್‌ಗಳ ಆಧಾರದ ಮೇಲೆ ‘ಕೆ.ಜಿ.ಎಂ.ಯು.’ನ ಹಿಂದೂ ವಿದ್ಯಾರ್ಥಿನಿಯರನ್ನು ದೆಹಲಿಗೆ ಕರೆದೊಯ್ಯುವ ಸಂಚು ರೂಪಿಸಿದ್ದನು. ಈ ಪ್ರಕರಣ ಬೆಳಕಿಗೆ ಬಂದ ನಂತರ, ‘ಕೆ.ಜಿ.ಎಂ.ಯು.’ ಆಡಳಿತ ಮಂಡಳಿಯು ಆರೋಪಿ ಜಿಹಾದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ.

. ಆರೋಪಿ ಹಸ್ಸಾಮ್ ಅಹ್ಮದ್ ತಾನು ‘ಕಾರ್ಡಿಯೋ ಸೇವಾ ಸಂಸ್ಥಾನ’ದ ಸಹ-ಸಂಸ್ಥಾಪಕ ಎಂದು ಹೇಳಿಕೊಳ್ಳುತ್ತಿದ್ದನು. ಅವನು ದೀರ್ಘಕಾಲದವರೆಗೆ ತಾನು ವೈದ್ಯನೆಂದು ಸುಳ್ಳು ಹೇಳುತ್ತಾ ‘ಕೆ.ಜಿ.ಎಂ.ಯು.’ ಆವರಣದಲ್ಲಿ ಓಡಾಡುತ್ತಿದ್ದನು. ಅವನು ಹನ್ನೆರಡನೇ ತರಗತಿಯನ್ನೂ (ಪಿಯುಸಿ) ಉತ್ತೀರ್ಣನಾಗದಿದ್ದರೂ, ವೈದ್ಯರಂತೆ ಉಡುಪು ಧರಿಸಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ರೋಗಿಗಳಲ್ಲಿ ನಂಬಿಕೆ ಹುಟ್ಟಿಸಿದ್ದನು.

. ಹಸ್ಸಾಮ್ ದೆಹಲಿಯ ಘಂಟಾಘರ್ ಪ್ರದೇಶದಲ್ಲಿ ‘ಕೆ.ಜಿ.ಎಂ.ಯು.’ ಹೆಸರಿನಲ್ಲಿ ವೈದ್ಯಕೀಯ ಶಿಬಿರವೊಂದನ್ನು ಆಯೋಜಿಸಿದ್ದನು. ಈ ಶಿಬಿರದಲ್ಲಿ ‘ಕೆ.ಜಿ.ಎಂ.ಯು.’ನ ೮ ರಿಂದ ೧೦ ವಿದ್ಯಾರ್ಥಿನಿಯರು ಸೇರಿದಂತೆ ಇತರ ಸಂಸ್ಥೆಗಳ ‘ಎಂ.ಬಿ.ಬಿ.ಎಸ್.’ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ‘ಕೆ.ಜಿ.ಎಂ.ಯು.’ನ ಒಬ್ಬ ವಿದ್ಯಾರ್ಥಿನಿಯು ಸಂಸ್ಥೆಯ ವಕ್ತಾರರಾದ ಡಾ. ಕೆ.ಕೆ. ಸಿಂಗ್ ಅವರಿಗೆ ಈ ಶಿಬಿರದ ಬಗ್ಗೆ ಮಾಹಿತಿ ನೀಡಿ, ಭಾಗವಹಿಸಲು ಆಮಂತ್ರಣ ನೀಡಿದ್ದಳು. ಅನುಮಾನಗೊಂಡ ಅವರು ನೇರವಾಗಿ ಶಿಬಿರದ ಸ್ಥಳಕ್ಕೆ ಹೋದರು. ಅಲ್ಲಿ ಹಸ್ಸಾಮ್‌ನ ದಾಖಲೆಗಳನ್ನು ಪರಿಶೀಲಿಸಿದಾಗ, ಅವನು ವೈದ್ಯನಲ್ಲ ಎಂಬ ಸತ್ಯ ಬಯಲಾಯಿತು.

ಸಂಪಾದಕೀಯ ನಿಲುವು

ದೇಶದಲ್ಲಿ ಲವ್ ಜಿಹಾದ್ ಘಟನೆಗಳು ಹೆಚ್ಚುತ್ತಿರುವ ವೇಗವನ್ನು ನೋಡಿದರೆ, ‘ಪೊಲೀಸ್ ಎಂಬ ವ್ಯವಸ್ಥೆ ಅಸ್ತಿತ್ವದಲ್ಲಿದೆಯೇ?’ ಎಂಬ ಸಂಶಯ ಮೂಡುತ್ತದೆ! ಇದು ಪೊಲೀಸರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ!