ನೋಯ್ಡಾ (ಉತ್ತರ ಪ್ರದೇಶ): ಹಿಂಸಾಚಾರದ ಹಿಂದೆ ಪಾಕಿಸ್ತಾನ ಮತ್ತು ಸಾಮ್ಯವಾದಿ ಸಂಘಟನೆಗಳ ಕೈವಾಡ!

ಕಾರ್ಮಿಕ ಸಂಘಟನೆಯ ಹೆಸರಿನಲ್ಲಿ ಹಿಂಸಾಚಾರ ಪ್ರಚೋದಿಸಿರುವುದು ಬಹಿರಂಗ

ನೋಯ್ಡಾ (ಉತ್ತರ ಪ್ರದೇಶ) – ಇಲ್ಲಿನ ಕಾರ್ಮಿಕರ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನ ಮತ್ತು ಸಾಮ್ಯವಾದಿ (ಕಮ್ಯುನಿಸ್ಟ್) ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದಿಂದ ನಿರ್ವಹಿಸಲ್ಪಡುವ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಮಿಕರನ್ನು ಪ್ರಚೋದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ‘ಮಜ್ದೂರ್ ಬಿಗುಲ್ ದಸ್ತ’ ಎಂಬ ಸಾಮ್ಯವಾದಿ ಸಂಘಟನೆಯ ಮನೀಷಾ ಚೌಹಾಣ ಮತ್ತು ರೂಪೇಶ ರಾಯ ಎಂಬುವವರನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ‘ಎಕ್ಸ್’ ನಲ್ಲಿನ ‘@Proudindiannavi’ ಮತ್ತು ‘@Mir_Ilyas_INC’ ಎಂಬ ಖಾತೆಗಳಿಂದ ನೋಯ್ಡಾದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ವಿಷಯಗಳನ್ನು ಪ್ರಸಾರ ಮಾಡಲಾಗಿತ್ತು. ಈ ಖಾತೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು. ಈ ಎರಡೂ ಖಾತೆಗಳ ವಿರುದ್ಧ ಈಗಾಗಲೇ ಮೊಕದ್ದಮೆ ದಾಖಲಿಸಲಾಗಿದೆ. ಈ ತನಿಖೆಯಲ್ಲಿ ಸದರಿ ಖಾತೆಗಳ ನಿರ್ವಾಹಕರು ತಮ್ಮ ಗುರುತನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆದರೂ ಸೈಬರ್ ವಿಭಾಗವು ಅವರ ಸ್ಥಳವನ್ನು ಪತ್ತೆಹಚ್ಚಿದೆ. ಈ ಖಾತೆಗಳ ಮೂಲಕ ಈ ಹಿಂದೆಯೂ ಪ್ರಚೋದನಕಾರಿ ವಿಷಯಗಳನ್ನು ಪ್ರಸಾರ ಮಾಡಿ ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸಲಾಗಿತ್ತು ಎಂಬ ಮಾಹಿತಿ ಹೊರಬಂದಿದೆ.

ಸಂಪಾದಕೀಯ ನಿಲುವು

ಸಾಮ್ಯವಾದಿ ಸಂಘಟನೆಗಳ ರಾಷ್ಟ್ರಘಾತಕ ಹಿನ್ನೆಲೆಯನ್ನು ಗಮನಿಸಿ ಇಂತಹ ಎಲ್ಲಾ ಸಂಘಟನೆಗಳನ್ನು ನಿಷೇಧಿಸಬೇಕು!