ಹಿಂದೂಗಳು ‘ಹಲಾಲ್’ (ಇಸ್ಲಾಮಿಕ್ ಪದ್ಧತಿಯಂತೆ ಪ್ರಾಣಿ ಹತ್ಯೆ ಮಾಡಿ ತಯಾರಿಸಿದ) ಮಾಂಸವನ್ನು ತಿನ್ನಬೇಕಾಗಿ ಬಂದಿದ್ದಕ್ಕೆ ಆಕ್ರೋಶ

ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದಲ್ಲಿ ಮತ್ತೊಮ್ಮೆ ಅಂಗಡಿಯ ಹೆಸರಿನ ವಿಚಾರವಾಗಿ ಹೊಸ ವಿವಾದ ಉಂಟಾಗಿದೆ. ರುದ್ರಾಪುರದ ಯುವಕನೊಬ್ಬ ಜೊಮ್ಯಾಟೊ (Zomato) ಆ್ಯಪ್ ಮೂಲಕ ‘ಸೌರಭ್ ಚಿಕನ್ ಬಿರಿಯಾನಿ’ ಹೆಸರಿನ ಅಂಗಡಿಯಿಂದ ಬಿರಿಯಾನಿ ಆರ್ಡರ್ ಮಾಡಿದ್ದನು. ಆರ್ಡರ್ ಮಾಡಿದ ನಂತರ ಯುವಕನಿಗೆ ಅನುಮಾನ ಬಂದು ವಿಚಾರಣೆ ನಡೆಸಿದನು. ಆ್ಯಪ್ನಲ್ಲಿ ‘ಸೌರಭ್ ಚಿಕನ್ ಬಿರಿಯಾನಿ’ ಹೆಸರಿನಲ್ಲಿ ಕಾಣುತ್ತಿದ್ದ ಅಂಗಡಿಯನ್ನು ವಾಸ್ತವದಲ್ಲಿ ರಶೀದ್ ಎಂಬ ವ್ಯಕ್ತಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಹಿಂದೂ ಸಂಘಟನೆಗಳ ಪ್ರಮುಖರು ಭಾಜಪ ಶಾಸಕ ಶಿವ ಅರೋರಾ ಅವರ ನೇತೃತ್ವದಲ್ಲಿ ಪೊಲೀಸರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
🚨 Halal by Deception: The Hidden Truth Behind Fake Hindu Shop Names
Rudrapur, Uttarakhand: A shop operating as ‘Saurabh Chicken Biryani’ was found to be run by a man named Rashid.
The revelation gave birth to an Outrage as Hindus were deceptively served ‘Halal’ meat.… pic.twitter.com/QmfXgRuqf4
— Sanatan Prabhat (@SanatanPrabhat) April 17, 2026
೧. ಬಿರಿಯಾನಿ ಆರ್ಡರ್ ಮಾಡಿದ ಯುವಕನು ‘ಸೌರಭ್ ಚಿಕನ್ ಬಿರಿಯಾನಿ’ ಅಂಗಡಿಯ ವಿಳಾಸವನ್ನು ಹುಡುಕಿದನು. ಆಗ ತ್ರಿಶೂಲ್ ಚೌಕ್ ಪರಿಸರದಲ್ಲಿ ಯಾವುದೇ ಹಿಂದೂಗಳ ಅಂಗಡಿ ಇಲ್ಲದಿರುವುದು ಅವನ ಗಮನಕ್ಕೆ ಬಂದಿತು.
೨. ನಂತರ ಅವನು ತನ್ನ ಸ್ನೇಹಿತರನ್ನು ಕರೆಸಿಕೊಂಡನು. ಕೆಲವು ಯುವಕರೊಂದಿಗೆ ತ್ರಿಶೂಲ್ ಚೌಕ್ಗೆ ತೆರಳಿ ಜೊಮ್ಯಾಟೊ ಡೆಲಿವರಿ ಮಾಡುವ ವ್ಯಕ್ತಿಗಾಗಿ ಕಾಯತೊಡಗಿದನು. ಡೆಲಿವರಿ ಸಿಬ್ಬಂದಿ ಬಿರಿಯಾನಿ ಪಡೆಯಲು ಅಂಗಡಿಗೆ ತಲುಪುತ್ತಿದ್ದಂತೆ ಯುವಕರು ಪ್ರತಿರೋಧ ಒಡ್ಡಿದರು.
೩. ಈ ಅಂಗಡಿಯನ್ನು ರಶೀದ್ ಎಂಬ ವ್ಯಕ್ತಿ ನಡೆಸುತ್ತಿದ್ದಾನೆ. ಅಂಗಡಿಯವನು ಜೊಮ್ಯಾಟೊದಲ್ಲಿ ‘ಸೌರಭ್’ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾನೆ ಎಂದು ಯುವಕರು ಆರೋಪಿಸಿದ್ದಾರೆ.
೪. ಆ್ಯಪ್ನಲ್ಲಿ ‘ಸೌರಭ್’ ಎಂಬ ಹೆಸರಿರುವುದರಿಂದ ಹಿಂದೂ ಸಮಾಜದ ಜನರಿಗೆ ಮೋಸವಾಗುತ್ತಿದೆ ಮತ್ತು ಅವರಿಗೆ ತಿಳಿಯದಂತೆ ಹಲಾಲ್ ಮಾಂಸವನ್ನು ತಿನ್ನಬೇಕಾಗಿ ಬರುತ್ತಿದೆ. ಹೀಗೆ ಮಾಡುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ