​ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ೮ ವರ್ಷಗಳ ಕಾರಾಗೃಹ ಶಿಕ್ಷೆ

​ಲಕ್ಷ್ಮಣಪುರಿ (ಉತ್ತರ ಪ್ರದೇಶ) - ಆಕ್ರಮವಾಗಿ ಭಾರತಕ್ಕೆ ಬರುವ ಮತ್ತು ಮಾನವ ಕಳ್ಳ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಆಕ್ರಮವಾಗಿ ಭಾರತಕ್ಕೆ ಬರುವ ಮತ್ತು ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ೫ ರೋಹಿಂಗ್ಯಾ ಮುಸ್ಲಿಮರು ಮತ್ತು ೩ ಬಾಂಗ್ಲಾದೇಶಿ ಮುಸ್ಲಿಮರು ಸೇರಿದಂತೆ ಒಟ್ಟು ೯ ಆರೋಪಿಗಳಿಗೆ ನ್ಯಾಯಾಲಯವು ಪ್ರತಿ ವ್ಯಕ್ತಿಗೆ ೮ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೆಯೇ ಪ್ರತಿಯೊಬ್ಬರಿಗೂ ತಲಾ ಎರಡೂವರೆ ಸಾವಿರ ರೂಪಾಯಿಗಳ ದಂಡವನ್ನೂ ಸಹ ವಿಧಿಸಲಾಗಿದೆ.

​೨೦೨೧ ರಲ್ಲಿ ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮೊಹಮ್ಮದ್ ನೂರ್, ರಹಮತುಲ್ಲಾ ಮತ್ತು ಶಬೀವುಲ್ಲಾ ಎಂಬುವವರನ್ನು ಬಂಧಿಸಲಾಗಿತ್ತು, ಇವರ ವಶದಿಂದ ಅಪ್ರಾಪ್ತ ಬಾಲಕಿಯರು ಸೇರಿದಂತೆ ಕೆಲವು ಸಂತ್ರಸ್ತರನ್ನು ರಕ್ಷಿಸಲಾಗಿತ್ತು. ವಿಚಾರಣೆಯ ನಂತರ ಇತರ ಆರೋಪಿಗಳನ್ನು ಬಂಧಿಸಲಾಯಿತು.