ಮೋತಿಹಾರಿ (ಬಿಹಾರ) : ಮದರಸಾದಲ್ಲಿ ಪಿಸ್ತೂಲ್ ಪತ್ತೆ; ಮದರಸಾಗೆ ಬೀಗ; ಮೂವರ ಬಂಧನ

ಮೋತಿಹಾರಿ (ಬಿಹಾರ) – ರಾಜ್ಯದ ಪೂರ್ವ ಚಂಪಾರಣ ಜಿಲ್ಲೆಯು ಜಿಹಾದಿ ಚಟುವಟಿಕೆಗಳ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಜಿಲ್ಲೆಯ ಚಕಿಯಾ ಪರಿಸರದ ಗವಂದರಾ ಗ್ರಾಮದ ಮದರಸಾದ ಮೇಲೆ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ. ಈ ವೇಳೆ ಒಂದು ಅತ್ಯಾಧುನಿಕ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಮೋತಿಹಾರಿಯ ಪೊಲೀಸ್ ಅಧೀಕ್ಷಕರಾದ ಸ್ವರ್ಣ ಪ್ರಭಾತ ಅವರು ಸ್ವತಃ ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು.

ಸದರಿ ಮದರಸಾಗೆ ತಕ್ಷಣವೇ ಬೀಗ ಜಡಿಯಲಾಗಿದೆ. ಯಾವುದೋ ದೊಡ್ಡ ದಾಳಿ ನಡೆಸುವ ಉದ್ದೇಶದಿಂದಲೇ ಈ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲಾಗುತ್ತಿತ್ತು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಇದೇ ಮದರಸಾದಿಂದ ಎರಡೂವರೆ ವರ್ಷಗಳ ಹಿಂದೆ, ನಿಷೇಧಿತ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಪ್ರಮುಖ ಸದಸ್ಯ ಸುಲ್ತಾನ್ ಉರ್ಫ್ ಉಸ್ಮಾನ್ ಉರ್ಫ್ ಯಾಕೂಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಮದರಸಾದಲ್ಲಿ ಶಸ್ತ್ರಾಸ್ತ್ರಗಳಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಸ್ವರ್ಣ ಪ್ರಭಾತ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಮದರಸಾಗಳು ಅಪರಾಧ ಮತ್ತು ಭಯೋತ್ಪಾದನೆಯ ಅಡ್ಡೆಗಳಾಗುತ್ತಿವೆ ಎಂಬ ವಾಸ್ತವವನ್ನು ಈ ಘಟನೆಯು ಮತ್ತೊಮ್ಮೆ ಸಾಬೀತು ಪಡಿಸಿದೆ!
  • ಜಿಹಾದಿ ಭಯೋತ್ಪಾದಕರ ಹಿಂಸಾತ್ಮಕ ಸಿದ್ಧಾಂತವು ಅವರಿಗೆ ನೀಡಲಾಗುವ ಧಾರ್ಮಿಕ ಬೋಧನೆಗಳಿಂದಲೇ ತಯಾರಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೂ ಇಂತಹ ಬೋಧನೆಗಳನ್ನು ನೀಡುವ ಹಾಗೂ ಭಯೋತ್ಪಾದನೆಯನ್ನು ಪೋಷಿಸುವ ಮದರಸಾಗಳಿಗೆ ಕೇವಲ ಅನುಮತಿಯಷ್ಟೇ ಅಲ್ಲದೆ, ಸರಕಾರಿ ಅನುದಾನವನ್ನೂ ಸಿಗುತ್ತಿರುವುದು ಅತ್ಯಂತ ಸಂತಾಪಜನಕ ಸಂಗತಿಯಾಗಿದೆ!