‘ಭೀಮ್ ಆರ್ಮಿ’ ಪಕ್ಷದ ಕಾರ್ಯಕರ್ತ ದಾನವೀರ್ ಜಾತವ್‌ನಿಂದ ಕಾಳಿಮಾತೆಯ ಮೂರ್ತಿಯ ಧ್ವಂಸ – Sri Kaali Temple Idol Broken

ಶಿವಪುರಿ (ಮಧ್ಯಪ್ರದೇಶ) ಯಲ್ಲಿನ ಘಟನೆ

ಶಿವಪುರಿ (ಮಧ್ಯಪ್ರದೇಶ) – ಶಿವಪುರಿ ಜಿಲ್ಲೆಯ ಕುಟ್ವಾರಾ ಗ್ರಾಮದಲ್ಲಿನ ಕಾಳಿಮಾತಾ ದೇವಾಲಯದ ಮೂರ್ತಿಯನ್ನು ಒಡೆದ ಪ್ರಕರಣದಲ್ಲಿ ಪೊಲೀಸರು ದಾನವೀರ್ ಜಾತವ್‌ನನ್ನು ಬಂಧಿಸಿದ್ದಾರೆ.

ಇದರ ನಂತರ ಪೊಲೀಸರು ದಾನವೀರ್ ಜಾತವ್‌ನನ್ನು ಗ್ರಾಮದಿಂದ ದೇವಾಲಯದವರೆಗೆ ಕಾಲ್ನಡಿಗೆಯಲ್ಲಿ ನಡೆಸುತ್ತಾ ಮೆರವಣಿಗೆ ಮಾಡಿಸಿದರು. ದೇವಾಲಯದ ಆವರಣ ತಲುಪಿದ ಬಳಿಕ ದಾನವೀರ್ ಕಿವಿ ಹಿಡಿದು ಬಸ್ಕಿ ಹೊಡೆದನು ಮತ್ತು ಶ್ರೀ ಕಾಳಿಮಾತೆಯ ಕ್ಷಮೆಯಾಚಿಸಿದನು. ದಾನವೀರ್ ಜಾತವ್ ‘ಭೀಮ್ ಆರ್ಮಿ’ ಪಕ್ಷದ ಸದಸ್ಯನೆಂದು ಹೇಳಲಾಗುತ್ತಿದೆ.

ವಿಚಾರಣೆಯಲ್ಲಿ ಆರೋಪಿ ದಾನವೀರ್, ಕಳೆದ ವರ್ಷ ಇದೇ ದಿನ ತನ್ನ ಸಹೋದರನ ಹತ್ಯೆಯಾಗಿತ್ತು, ಆದ್ದರಿಂದ ತಾನು ಮಾನಸಿಕ ಆಘಾತದಲ್ಲಿದ್ದೆ ಎಂದು ಹೇಳಿದ್ದಾನೆ. ಆ ಸಮಯದಲ್ಲಿ ದೇವಿಯ ಆಶೀರ್ವಾದ ಸಿಕ್ಕಿದ್ದರೆ, ಸಹೋದರನ ಪ್ರಾಣ ಉಳಿಯುತ್ತಿತ್ತು ಎಂದು ಅವನಿಗೆ ಅನಿಸುತ್ತಿತ್ತು. ಈ ಮಾನಸಿಕ ಸ್ಥಿತಿಯಲ್ಲಿ ಮತ್ತು ಕೋಪದ ಭರದಲ್ಲಿ ಅವನು ಈ ಕೃತ್ಯವೆಸಗಿದ್ದಾನೆ. (ಇದನ್ನು ಯಾರು ನಂಬುತ್ತಾರೆ? – ಸಂಪಾದಕರು)

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರು ಮಾತ್ರವಲ್ಲ, ಇಂತಹ ಜಾತ್ಯಂಧರು ಕೂಡ ಹಿಂದೂಗಳ ದೇವಾಲಯಗಳು ಮತ್ತು ದೇವತೆಗಳ ಮೂರ್ತಿಗಳನ್ನು ಗುರಿಯಾಗಿಸುತ್ತಿದ್ದಾರೆ ಎಂಬುದನ್ನು ಗಮನಿಸಿ!