ಶಿವಪುರಿ (ಮಧ್ಯಪ್ರದೇಶ) ಯಲ್ಲಿನ ಘಟನೆ

ಶಿವಪುರಿ (ಮಧ್ಯಪ್ರದೇಶ) – ಶಿವಪುರಿ ಜಿಲ್ಲೆಯ ಕುಟ್ವಾರಾ ಗ್ರಾಮದಲ್ಲಿನ ಕಾಳಿಮಾತಾ ದೇವಾಲಯದ ಮೂರ್ತಿಯನ್ನು ಒಡೆದ ಪ್ರಕರಣದಲ್ಲಿ ಪೊಲೀಸರು ದಾನವೀರ್ ಜಾತವ್ನನ್ನು ಬಂಧಿಸಿದ್ದಾರೆ.
ಇದರ ನಂತರ ಪೊಲೀಸರು ದಾನವೀರ್ ಜಾತವ್ನನ್ನು ಗ್ರಾಮದಿಂದ ದೇವಾಲಯದವರೆಗೆ ಕಾಲ್ನಡಿಗೆಯಲ್ಲಿ ನಡೆಸುತ್ತಾ ಮೆರವಣಿಗೆ ಮಾಡಿಸಿದರು. ದೇವಾಲಯದ ಆವರಣ ತಲುಪಿದ ಬಳಿಕ ದಾನವೀರ್ ಕಿವಿ ಹಿಡಿದು ಬಸ್ಕಿ ಹೊಡೆದನು ಮತ್ತು ಶ್ರೀ ಕಾಳಿಮಾತೆಯ ಕ್ಷಮೆಯಾಚಿಸಿದನು. ದಾನವೀರ್ ಜಾತವ್ ‘ಭೀಮ್ ಆರ್ಮಿ’ ಪಕ್ಷದ ಸದಸ್ಯನೆಂದು ಹೇಳಲಾಗುತ್ತಿದೆ.
ವಿಚಾರಣೆಯಲ್ಲಿ ಆರೋಪಿ ದಾನವೀರ್, ಕಳೆದ ವರ್ಷ ಇದೇ ದಿನ ತನ್ನ ಸಹೋದರನ ಹತ್ಯೆಯಾಗಿತ್ತು, ಆದ್ದರಿಂದ ತಾನು ಮಾನಸಿಕ ಆಘಾತದಲ್ಲಿದ್ದೆ ಎಂದು ಹೇಳಿದ್ದಾನೆ. ಆ ಸಮಯದಲ್ಲಿ ದೇವಿಯ ಆಶೀರ್ವಾದ ಸಿಕ್ಕಿದ್ದರೆ, ಸಹೋದರನ ಪ್ರಾಣ ಉಳಿಯುತ್ತಿತ್ತು ಎಂದು ಅವನಿಗೆ ಅನಿಸುತ್ತಿತ್ತು. ಈ ಮಾನಸಿಕ ಸ್ಥಿತಿಯಲ್ಲಿ ಮತ್ತು ಕೋಪದ ಭರದಲ್ಲಿ ಅವನು ಈ ಕೃತ್ಯವೆಸಗಿದ್ದಾನೆ. (ಇದನ್ನು ಯಾರು ನಂಬುತ್ತಾರೆ? – ಸಂಪಾದಕರು)
ಸಂಪಾದಕೀಯ ನಿಲುವುಮತಾಂಧ ಮುಸ್ಲಿಮರು ಮಾತ್ರವಲ್ಲ, ಇಂತಹ ಜಾತ್ಯಂಧರು ಕೂಡ ಹಿಂದೂಗಳ ದೇವಾಲಯಗಳು ಮತ್ತು ದೇವತೆಗಳ ಮೂರ್ತಿಗಳನ್ನು ಗುರಿಯಾಗಿಸುತ್ತಿದ್ದಾರೆ ಎಂಬುದನ್ನು ಗಮನಿಸಿ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ