ಗೋರಖಪುರ (ಉತ್ತರಪ್ರದೇಶ): ಅನಧಿಕೃತ ದರ್ಗಾದ ಮೇಲೆ ಬುಲ್ಡೋಜರ್ ಮೂಲಕ ಕಾರ್ಯಾಚರಣೆ !

  • ಕಾಲುವೆ ಅಗಲೀಕರಣಕ್ಕಾಗಿ ದರ್ಗಾ ತೆರವು

  • ಆಡಳಿತ ಮಂಡಳಿಯ ಕಠಿಣ ನಿಲುವಿನಿಂದ ಮುಸಲ್ಮಾನರ ಪ್ರತಿಭಟನೆಯ ಪ್ರಯತ್ನ ವಿಫಲ

ಗೋರಖಪುರ (ಉತ್ತರಪ್ರದೇಶ) – ಇಲ್ಲಿನ ಆವಾಸ್ ವಿಕಾಸ್ ಕಾಲೋನಿ ಸಮೀಪವಿರುವ ಗೋಡಧೋಯಿಯಾ ಸೇತುವೆಯ ಪಕ್ಕದಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ದರ್ಗಾವನ್ನು ಮಾರ್ಚ್ 26 ರಂದು ತೆರವುಗೊಳಿಸಲಾಯಿತು. ಪ್ರದೇಶದ ಕಾಲುವೆ ಅಗಲೀಕರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ದರ್ಗಾವನ್ನು ಹಜರತ್ ಬಾಬಾ ಜಾಫರ್ ಅಲಿ ಶಾ ‘ಮಾಸೂಮ್’ ಎಂದು ಕರೆಯಲಾಗುತ್ತಿತ್ತು. ಸಾರ್ವಜನಿಕ ಲೋಕೋಪಯೋಗಿ ಇಲಾಖೆ ನಡೆಸಿದ ಈ ಕಾರ್ಯಾಚರಣೆಯ ಸಮಯದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಮುಸಲ್ಮಾನರು ಕಾರ್ಯಾಚರಣೆಗೆ ಸ್ವಲ್ಪ ಮಟ್ಟಿಗೆ ವಿರೋಧ ವ್ಯಕ್ತಪಡಿಸಿದರಾದರೂ, ಆಡಳಿತ ಮಂಡಳಿಯ ಕಠಿಣ ನಿಲುವಿನ ಮುಂದೆ ಅವರ ಆಟ ನಡೆಯಲಿಲ್ಲ. ತದನಂತರ ಮುಸಲ್ಮಾನರು ಶಾಂತಿಯುತವಾಗಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರಲ್ಲಿ ಮುಸಲ್ಮಾನ ಮಹಿಳೆಯರೂ ಸೇರಿದ್ದರು. ಅನೇಕ ವರ್ಷಗಳಿಂದ ಇಲ್ಲಿಗೆ ಬಂದು ಭಕ್ತಿಯಿಂದ ಹರಕೆಗಳನ್ನು ಸಲ್ಲಿಸುತ್ತಿದ್ದೆವು ಎಂದು ಅವರು ಹೇಳಿದರು. ದರ್ಗಾವನ್ನು ಕೆಡವುದನ್ನು ಕಂಡು ಅನೇಕರು ಭಾವುಕರಾದರು. (ಈಗ ಈ ದೃಶ್ಯಗಳನ್ನು ಬಂಡವಾಳ ಮಾಡಿಕೊಂಡು ‘ಬಿಬಿಸಿ’ ಮತ್ತು ‘ನ್ಯೂಯಾರ್ಕ್ ಟೈಮ್ಸ್’ ನಂತಹ ಹಿಂದೂ ವಿರೋಧಿ ಮಾಧ್ಯಮಗಳು ಆಡಳಿತ ಮಂಡಳಿಯನ್ನು ವಿರೋಧಿಸಲು ಆರಂಭಿಸಿದರೆ ಆಶ್ಚರ್ಯಪಡಬೇಕಿಲ್ಲ! – ಸಂಪಾದಕರು). ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸಂಪಾದಕೀಯ ನಿಲುವು

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕ್ಷೇತ್ರವಾಗಿರುವುದರಿಂದಲೇ ಇಲ್ಲಿನ ಮುಸಲ್ಮಾನರು ದಾರಿಗೆ ಬಂದಿದ್ದಾರೆ. ಇದರರ್ಥ, ರಾಜಕಾರಣಿಗಳು ಕಠಿಣ, ತತ್ವನಿಷ್ಠ ಮತ್ತು ನ್ಯಾಯಸಮ್ಮತ ಆಡಳಿತ ಶೈಲಿಯನ್ನು ಹೊಂದಿದ್ದರೆ, ಅತ್ಯಂತ ಹಿಂಸಕ ಸಮುದಾಯವೂ ಶಿಸ್ತನ್ನು ಪಾಲಿಸುತ್ತದೆ ಎಂಬುದನ್ನು ಗಮನಿಸಬೇಕು !
  • ಒಂದು ವೇಳೆ ಅಗಲೀಕರಣ ಕಾರ್ಯ ಇರದಿದ್ದರೆ, ಈ ಅನಧಿಕೃತ ದರ್ಗಾದ ಮೇಲಿನ ಕಾರ್ಯಾಚರಣೆಯನ್ನು ಬಾಕಿಯೇ ಇರಿಸಲಾಗುತ್ತಿತ್ತೇ ?
  • ಅನಧಿಕೃತ ದರ್ಗಾವನ್ನು ನಿರ್ಮಿಸಿದವರು ಮತ್ತು ಇದುವರೆಗೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಹಾಗೂ ದರ್ಗಾ ತೆರವುಗೊಳಿಸುವ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು !