ಗಢ್ವಾ (ಜಾರ್ಖಂಡ್): ಶ್ರೀರಾಮನವಮಿಯ ದಿನದಂದು ಮುಸಲ್ಮಾನರಿಂದ ಪೊಲೀಸರ ಮೇಲೆ ಕಲ್ಲುತೂರಾಟ ! – Violence on Ram Navami in Jharkhand

ಮಹಾವೀರ ಧ್ವಜ ಹಾರಿಸುವುದಕ್ಕೆ ವಿರೋಧ

ಗಢ್ವಾ (ಜಾರ್ಖಂಡ್) – ಗಢ್ವಾ ಜಿಲ್ಲೆಯ ರಮಕಂಡಾ ಪ್ರಖಂಡ ಕೇಂದ್ರ ಕಚೇರಿಯಲ್ಲಿ ಶ್ರೀರಾಮನವಮಿಗೂ ಮುನ್ನ ಆರಂಭವಾದ ವಿವಾದವು ಮಾರ್ಚ್ ೨೬ ರಂದು ಹಿಂಸಾತ್ಮಕ ಸಂಘರ್ಷಕ್ಕೆ ತಿರುಗಿದೆ. ಧಾರ್ಮಿಕ ಮೆರವಣಿಗೆಯ ಮಾರ್ಗ, ಧ್ವನಿವರ್ಧಕ ವ್ಯವಸ್ಥೆ ಮತ್ತು ಮಹಾವೀರ ಧ್ವಜವನ್ನು ಹಾರಿಸುವ ವಿಚಾರಗಳಿಗೆ ಮುಸಲ್ಮಾನರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅವರಿಂದ ಕಲ್ಲುತೂರಾಟ ನಡೆದಿದೆ. ಇದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಸಿಡಿಸಿದರು. ಪ್ರಸ್ತುತ ಇಲ್ಲಿ ಬೂದಿ ಮುಚ್ಚಿದ ಕೆಂಡದಂತಹ (ಉದ್ವಿಗ್ನ) ಶಾಂತಿ ನೆಲೆಸಿದ್ದು, ಇಡೀ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಹಾವೀರ ಧ್ವಜ ಹಾರಿಸಲು ಅಡ್ಡಿ!

ಮಾರ್ಚ್ ೨೫ ರ ಸಂಜೆ, ರಮಕಂಡಾದ ಕೌಆಖೋಹ್ ಶಿವ ಚಬೂತರದ (ವೇದಿಕೆ) ಬಳಿ ಮಹಾವೀರ ಧ್ವಜವನ್ನು ಹಾರಿಸಲು ತೆರಳುತ್ತಿದ್ದ ರಾಮಭಕ್ತರನ್ನು ತ್ರಿವೇಣಿ ಚೌಕದ ಬಳಿ ಮುಸಲ್ಮಾನರು ತಡೆದರು. ಆ ನಂತರ ಧ್ವನಿವರ್ಧಕ ಅಳವಡಿಸುವ ವಿಚಾರದಲ್ಲೂ ವಿವಾದ ಸೃಷ್ಟಿಯಾಯಿತು. ಅದೇ ವೇಳೆ ಘೋಷಣೆಗಳನ್ನು ಕೂಗಿದ್ದರಿಂದ ವಾತಾವರಣ ಉದ್ವಿಗ್ನಗೊಂಡಿತು. ಕ್ಷಣಾರ್ಧದಲ್ಲಿ ಪರಿಸ್ಥಿತಿ ಹದಗೆಟ್ಟಿತು ಮತ್ತು ಎರಡೂ ಕಡೆಯವರು ಮುಖಾಮುಖಿಯಾದರು; ಆದರೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಮಾರ್ಚ್ ೨೬ ರಂದು ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಕಲ್ಲು ತೂರಾಟ ಆರಂಭಿಸಿದರು. ಇದರಿಂದ ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಮಾರುಕಟ್ಟೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮುಸಲ್ಮಾನರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಅಂತಿಮವಾಗಿ ಪೊಲೀಸರ ಭದ್ರತೆಯಲ್ಲಿ ರಾಮಭಕ್ತರು ಕೌಆಖೋಹ್ ಶಿವ ಚಬೂತರದ ಬಳಿ ಮಹಾವೀರ ಧ್ವಜವನ್ನು ಹಾರಿಸಿದರು.

ಶಾಂತಿ ಸಭೆಯ ನಂತರವೂ ಉದ್ವಿಗ್ನತೆ!

ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಪಾಲನಾ ಸಮಿತಿ ಸಭೆಯ ಬಳಿಕವೂ ವಾತಾವರಣ ಕದಡುವ ಯತ್ನ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಶ್ರೀರಾಮನವಮಿ ಹಾಗೂ ರಂಜಾನ್ ಅನ್ನು ಶಾಂತಿಯುತವಾಗಿ ಆಚರಿಸಲು ಉಭಯ ಬಣಗಳು ಒಪ್ಪಿಗೆ ಸೂಚಿಸಿದ್ದವು. ಆದರೆ, ಶ್ರೀರಾಮನವಮಿಯ ದಿನದಂದು ಮುಸಲ್ಮಾನರು ವಿವಾದ ಸೃಷ್ಟಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. (ಇದರರ್ಥ ಮುಸಲ್ಮಾನರು ಕೇವಲ ಹೆಸರಿಗಾಗಿ ಶಾಂತಿ ಸಮಿತಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಹಿಂದೂಗಳ ಮೇಲೆ ದಾಳಿ ಮಾಡಲು ಬಯಸುತ್ತಾರೆ, ಅದನ್ನು ಅವರು ನಂತರ ಮಾಡಿಯೇ ತೀರುತ್ತಾರೆ! – ಸಂಪಾದಕರು)

ಸಂಪಾದಕೀಯ ನಿಲುವು

ಮಹಾವೀರ ಧ್ವಜವನ್ನು ಹಾರಿಸಲು ಬಿಡದಿರಲು ಇದೇನು ಪಾಕಿಸ್ತಾನವೇ? ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಿದರೂ ಅವರು ಇಲ್ಲಿಯೇ ಉಳಿದುಕೊಂಡರು ಮತ್ತು ಈಗ ಅವರು ಭಾರತದ ಮೇಲೂ ನಿಯಂತ್ರಣ ಸಾಧಿಸಲು ಬಯಸುತ್ತಿದ್ದಾರೆ. ಇದನ್ನು ನೋಡಿದರೆ, ಈಗ ಹಿಂದೂಗಳು ಅವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳುವ ಸಮಯ ಬಂದಿದೆ!