ಬಾಂಗ್ಲಾದೇಶದ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್ ಇವರ ಅಭಿಪ್ರಾಯ

ಢಾಕಾ (ಬಾಂಗ್ಲಾದೇಶ) – 1971ರಲ್ಲಿ ಪಾಕಿಸ್ತಾನಿ ಸೈನ್ಯವು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ನಡೆಸಿದ ಕ್ರಮವು ಇತಿಹಾಸದ ಅತ್ಯಂತ ಭೀಕರ ನರಮೇಧಗಳಲ್ಲಿ ಒಂದಾಗಿದೆ ಎಂದು ಬಾಂಗ್ಲಾದೇಶದ ನೂತನ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್ ಹೇಳಿದ್ದಾರೆ. ಮಾರ್ಚ್ 26 ರಂದು ಬಾಂಗ್ಲಾದೇಶವು ‘ಲಿಬರೇಶನ್ ಡೇ’ (ವಿಮೋಚನಾ ದಿನ) ಎಂದು ಆಚರಿಸುತ್ತದೆ. 1971ರ ಈ ದಿನದಂದು ಪೂರ್ವ ಪಾಕಿಸ್ತಾನವು ಸ್ವತಂತ್ರಗೊಂಡು ಬಾಂಗ್ಲಾದೇಶವು ಅಸ್ತಿತ್ವಕ್ಕೆ ಬಂದಿತ್ತು. ‘ಲಿಬರೇಶನ್ ಡೇ’ ಸಂದರ್ಭದಲ್ಲಿ ಈ ನರಮೇಧವನ್ನು ಸ್ಮರಿಸುವ ಮೂಲಕ ತಾರಿಕ್ ರೆಹಮಾನ್ ಅವರು ಪಾಕಿಸ್ತಾನದ ಆಡಳಿತಗಾರರಿಗೆ ಕಠಿಣ ಸಂದೇಶ ನೀಡಿದ್ದಾರೆ.
1. ಬಾಂಗ್ಲಾದೇಶದಿಂದ ಶೇಖ್ ಹಸೀನಾ ಅವರು ಪದಚ್ಯುತಗೊಂಡ ನಂತರ, ಅಲ್ಲಿನ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಭಾರತವನ್ನು ವಿರೋಧಿಸುತ್ತಾ ಪಾಕಿಸ್ತಾನದೊಂದಿಗೆ ಸಂಬಂಧ ಬೆಳೆಸಲು ಆರಂಭಿಸಿದ್ದರು. ಯೂನಸ್ ಸರಕಾರವು ಪಾಕಿಸ್ತಾನಿ ಸೈನ್ಯದ ನರಮೇಧದ ವಿಷಯವನ್ನು ಬದಿಗೊತ್ತಿ, ಅವರ ಹಿರಿಯ ಸೈನ್ಯಾಧಿಕಾರಿಗಳನ್ನು ಇಸ್ಲಾಮಾಬಾದ್ಗೆ ಕಳುಹಿಸಿತ್ತು.
2. ‘ಲಿಬರೇಶನ್ ಡೇ’ ನಿಮಿತ್ತ ತಾರಿಕ್ ರೆಹಮಾನ್ ಅವರು ‘ಎಕ್ಸ್’ (X) ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಪಾಕಿಸ್ತಾನಿ ಸೈನ್ಯವು ‘ಆಪರೇಷನ್ ಸರ್ಚ್ಲೈಟ್’ ನಡೆಸಿ ನಿರಪರಾಧಿ ಬಾಂಗ್ಲಾದೇಶಿ ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದ ಘಟನೆಯನ್ನು ಸ್ಮರಿಸಿದ್ದಾರೆ.
3. ಅವರ ಈ ಹೇಳಿಕೆಯಿಂದ ಅವರು ಪಾಕಿಸ್ತಾನಿ ಸೈನ್ಯದ ಆ ಕ್ರಮವನ್ನು ಮರೆಯಲು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳಲ್ಲಿ ಈ ವಿಷಯವು ದೀರ್ಘಕಾಲದಿಂದ ಉದ್ವಿಗ್ನತೆಗೆ ಪ್ರಮುಖ ಕಾರಣವಾಗಿದೆ. ಹಲವು ದಶಕಗಳಿಂದ ಬಾಂಗ್ಲಾದೇಶವು ಪಾಕಿಸ್ತಾನದಿಂದ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ; ಆದರೆ ಪಾಕಿಸ್ತಾನಿ ಸೈನ್ಯವು ಇದಕ್ಕೆ ತಯಾರಿಲ್ಲ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !