ಬಾಂಗ್ಲಾದೇಶದ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್ ಇವರ ಅಭಿಪ್ರಾಯ

ಢಾಕಾ (ಬಾಂಗ್ಲಾದೇಶ) – 1971ರಲ್ಲಿ ಪಾಕಿಸ್ತಾನಿ ಸೈನ್ಯವು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ನಡೆಸಿದ ಕ್ರಮವು ಇತಿಹಾಸದ ಅತ್ಯಂತ ಭೀಕರ ನರಮೇಧಗಳಲ್ಲಿ ಒಂದಾಗಿದೆ ಎಂದು ಬಾಂಗ್ಲಾದೇಶದ ನೂತನ ಪ್ರಧಾನ ಮಂತ್ರಿ ತಾರಿಕ್ ರೆಹಮಾನ್ ಹೇಳಿದ್ದಾರೆ. ಮಾರ್ಚ್ 26 ರಂದು ಬಾಂಗ್ಲಾದೇಶವು ‘ಲಿಬರೇಶನ್ ಡೇ’ (ವಿಮೋಚನಾ ದಿನ) ಎಂದು ಆಚರಿಸುತ್ತದೆ. 1971ರ ಈ ದಿನದಂದು ಪೂರ್ವ ಪಾಕಿಸ್ತಾನವು ಸ್ವತಂತ್ರಗೊಂಡು ಬಾಂಗ್ಲಾದೇಶವು ಅಸ್ತಿತ್ವಕ್ಕೆ ಬಂದಿತ್ತು. ‘ಲಿಬರೇಶನ್ ಡೇ’ ಸಂದರ್ಭದಲ್ಲಿ ಈ ನರಮೇಧವನ್ನು ಸ್ಮರಿಸುವ ಮೂಲಕ ತಾರಿಕ್ ರೆಹಮಾನ್ ಅವರು ಪಾಕಿಸ್ತಾನದ ಆಡಳಿತಗಾರರಿಗೆ ಕಠಿಣ ಸಂದೇಶ ನೀಡಿದ್ದಾರೆ.
1. ಬಾಂಗ್ಲಾದೇಶದಿಂದ ಶೇಖ್ ಹಸೀನಾ ಅವರು ಪದಚ್ಯುತಗೊಂಡ ನಂತರ, ಅಲ್ಲಿನ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಭಾರತವನ್ನು ವಿರೋಧಿಸುತ್ತಾ ಪಾಕಿಸ್ತಾನದೊಂದಿಗೆ ಸಂಬಂಧ ಬೆಳೆಸಲು ಆರಂಭಿಸಿದ್ದರು. ಯೂನಸ್ ಸರಕಾರವು ಪಾಕಿಸ್ತಾನಿ ಸೈನ್ಯದ ನರಮೇಧದ ವಿಷಯವನ್ನು ಬದಿಗೊತ್ತಿ, ಅವರ ಹಿರಿಯ ಸೈನ್ಯಾಧಿಕಾರಿಗಳನ್ನು ಇಸ್ಲಾಮಾಬಾದ್ಗೆ ಕಳುಹಿಸಿತ್ತು.
2. ‘ಲಿಬರೇಶನ್ ಡೇ’ ನಿಮಿತ್ತ ತಾರಿಕ್ ರೆಹಮಾನ್ ಅವರು ‘ಎಕ್ಸ್’ (X) ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಪಾಕಿಸ್ತಾನಿ ಸೈನ್ಯವು ‘ಆಪರೇಷನ್ ಸರ್ಚ್ಲೈಟ್’ ನಡೆಸಿ ನಿರಪರಾಧಿ ಬಾಂಗ್ಲಾದೇಶಿ ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದ ಘಟನೆಯನ್ನು ಸ್ಮರಿಸಿದ್ದಾರೆ.
3. ಅವರ ಈ ಹೇಳಿಕೆಯಿಂದ ಅವರು ಪಾಕಿಸ್ತಾನಿ ಸೈನ್ಯದ ಆ ಕ್ರಮವನ್ನು ಮರೆಯಲು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳಲ್ಲಿ ಈ ವಿಷಯವು ದೀರ್ಘಕಾಲದಿಂದ ಉದ್ವಿಗ್ನತೆಗೆ ಪ್ರಮುಖ ಕಾರಣವಾಗಿದೆ. ಹಲವು ದಶಕಗಳಿಂದ ಬಾಂಗ್ಲಾದೇಶವು ಪಾಕಿಸ್ತಾನದಿಂದ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ; ಆದರೆ ಪಾಕಿಸ್ತಾನಿ ಸೈನ್ಯವು ಇದಕ್ಕೆ ತಯಾರಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation