
‘ಸನಾತನದಲ್ಲಿ ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು’, ಎಂಬ ತತ್ವಕ್ಕನುಸಾರ ಪ್ರತಿಯೊಬ್ಬರಿಗೂ ಸಾಧನೆಯನ್ನು ತಿಳಿಸಲಾಗುತ್ತದೆ. ಇದೇ ಕಾರಣದಿಂದ ಇಂದು ಸನಾತನದ ಸಾಧಕರು ಅಧ್ಯಾತ್ಮಪ್ರಸಾರ, ಗ್ರಂಥನಿರ್ಮಿತಿ, ಕಲಾಸಾಧನೆ, ಸಂಶೋಧನೆ, ಧರ್ಮಪ್ರಸಾರ, ಧರ್ಮಶಿಕ್ಷಣ, ರಾಷ್ಟ್ರರಕ್ಷಣೆ ಮತ್ತು ರಾಷ್ಟ್ರಜಾಗೃತಿಯಂತಹ ವಿವಿಧ ಅಂಗಗಳ ಮೂಲಕ ಸಾಧನೆಯಲ್ಲಿ ನಿರತರಾಗಿದ್ದಾರೆ.’
ಅಧ್ಯಾತ್ಮದಲ್ಲಿ ಪುಸ್ತಕದ ಜ್ಞಾನಕ್ಕಿಂತ ತನು, ಮನ ಮತ್ತು ಧನದ ತ್ಯಾಗ ಮಾಡುವುದು ಹೆಚ್ಚು ಮಹತ್ವದ್ದು !
‘ಕೆಲವರು ಅಧ್ಯಾತ್ಮವನ್ನು ಕಲಿಯಲು ಕೇವಲ ಆಧ್ಯಾತ್ಮಿಕ ಗ್ರಂಥಗಳನ್ನು ಹೆಚ್ಚು ಓದುತ್ತಾರೆ. ಅಧ್ಯಾತ್ಮಶಾಸ್ತ್ರವು ಕೃತಿಯ ಶಾಸ್ತ್ರವಾಗಿದೆ. ಅದಕ್ಕಾಗಿ ಪ್ರತ್ಯಕ್ಷ ಸಾಧನೆ ಮಾಡುವುದು ಅವಶ್ಯಕವಾಗಿದೆ. ಆದ್ದರಿಂದ ಅಧ್ಯಾತ್ಮದ ಅಭ್ಯಾಸ ಮಾಡುವುದಕ್ಕಿಂತ ಪ್ರತ್ಯಕ್ಷವಾಗಿ ತನು, ಮನ ಮತ್ತು ಧನಗಳನ್ನು ತ್ಯಾಗ ಮಾಡುವುದಕ್ಕೆ, ಅಂದರೆ ಸಾಧನೆ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !