ಸ್ಥೂಲ ಮಾಲಿನ್ಯಕ್ಕಿಂತ ಸೂಕ್ಷ್ಮ ಮಾಲಿನ್ಯವು ಅನೇಕ ಪಟ್ಟು ಹೆಚ್ಚು ಹಾನಿಕರ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಸ್ಥೂಲ ಮಾಲಿನ್ಯ, ಅಂದರೆ ದೇಹ ಮತ್ತು ವಸ್ತುಗಳಿಂದ ಉಂಟಾಗುವ ತಾತ್ಕಾಲಿಕ ಮಾಲಿನ್ಯಕ್ಕಿಂತ ಸೂಕ್ಷ್ಮ ಮಾಲಿನ್ಯ, ಅಂದರೆ ಮನಸ್ಸು ಮತ್ತು ಬುದ್ಧಿಯಿಂದ ಉಂಟಾಗುವ ಮಾಲಿನ್ಯವು ಅನೇಕ ಪಟ್ಟು ಹೆಚ್ಚು ಕಾಲ ಹಾನಿಕರ ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ !

ಭ್ರಷ್ಟಾಚಾರದ ಬಗ್ಗೆ ಭಾರತೀಯರ ಜಡ ಮನಸ್ಥಿತಿ !

ಇತ್ತೀಚಿನ ದಿನಗಳಲ್ಲಿ ಅನೇಕ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ, ಅಧಿಕೃತ ವೆಚ್ಚದ ಜೊತೆಗೆ ’ಲಂಚ ನೀಡಲು ಎಷ್ಟು ವೆಚ್ಚವಾಗಬಹುದು ?’ ಎಂಬುದನ್ನೂ ಮೊದಲೇ ಲೆಕ್ಕ ಹಾಕಲಾಗುತ್ತದೆ !

ಮೂರನೇ ಮಹಾಯುದ್ಧದಿಂದ ಬದುಕುಳಿಯಲು ಈಗಲಾದರೂ ದೇವರ ಭಕ್ತರಾಗಿ !

ಮೂರನೇ ಮಹಾಯುದ್ಧದ ಭೀಕರ ಕಾಲದಲ್ಲಿ ಕೇವಲ ಭಗವಂತನು ಮಾತ್ರ ನಮ್ಮನ್ನು ರಕ್ಷಿಸಬಲ್ಲನು; ಆದ್ದರಿಂದ ಆಪತ್ತಿನಿಂದ ಪಾರಾಗಲು ಈಗಲಾದರೂ ದೇವರ ಭಕ್ತರಾಗಿ !