ಉತ್ತರ ಪ್ರದೇಶ: ‘ರಾಹುಲ್’ ಎಂದು ಹೇಳಿಕೊಂಡ ಅಬ್ದುಲ್ಲಾನಿಂದ ಹಿಂದೂ ಯುವತಿಗೆ ವಂಚನೆ

ವಿವಾಹದ ಆಮಿಷ ತೋರಿಸಿ ಅಪಹರಣ

ಗಾಜೀಪುರ (ಉತ್ತರ ಪ್ರದೇಶ) – ಇಲ್ಲಿ ಅಬ್ದುಲ್ಲಾ ಎಂಬ ಮತಾಂಧನು ತನ್ನ ಹೆಸರನ್ನು ‘ರಾಹುಲ್’ ಎಂದು ಸುಳ್ಳು ಹೇಳಿ, ಹಿಂದೂ ಯುವತಿಯೊಬ್ಬಳನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ವಂಚಿಸಿದ್ದಾನೆ. ಅವನು ಆಕೆಗೆ ವಿವಾಹದ ಆಮಿಷ ತೋರಿಸಿ ಕರೆದುಕೊಂಡು ಹೋಗಿದ್ದಾನೆ. ಈ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಅಬ್ದುಲ್ಲಾ ಸೇರಿದಂತೆ ಅವನ ತಂದೆ ಮತ್ತು ಮಾವನ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದಾರೆ. ‘ಯುವತಿಯನ್ನು ಧರ್ಮಾಂತರ ಮಾಡಿ ವಿವಾಹ ಮಾಡಲಾಗುವುದು’ ಎಂದು ಸಂತ್ರಸ್ತೆಯ ಕುಟುಂಬದವರು ಭೀತಿ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತೆಯ ತಾಯಿಯ ಪ್ರಕಾರ, ಮಾರ್ಚ್ 11 ರಂದು ಯುವತಿಯು ಅಂಗಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಬಂದಿದ್ದಳು; ಆದರೆ ಅಂಗಡಿಗೆ ತಲುಪದೆ ಅವಳು ಅಬ್ದುಲ್ಲಾನೊಂದಿಗೆ ಓಡಿಹೋಗಿದ್ದಾಳೆ. ಕುಟುಂಬದವರ ಆರೋಪದಂತೆ, ಮನೆಯಿಂದ ಹೋಗುವಾಗ ಅವಳು 50 ಸಾವಿರ ರೂಪಾಯಿ ಮತ್ತು ಕೆಲವು ಆಭರಣಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರಕಾರವಿದ್ದರೂ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಹಿಂದೂಗಳು ನಿರೀಕ್ಷಿಸಿದ್ದಲ್ಲ. ಇಂತಹ ಘಟನೆಗಳನ್ನು ತಡೆಯಲು ಹಿಂದೂಗಳೂ ಸರಕಾರದ ಮೇಲೆ ಒತ್ತಡ ಹೇರಬೇಕು!