ಕೊಲಕಾತಾದಲ್ಲಿ ಪ್ರಧಾನಿ ಮೋದಿ ಅವರ ಸಭೆಗೂ ಮುನ್ನ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಹಲವರಿಗೆ ಗಾಯ – Clashes

ಕೊಲಕಾತಾ (ಬಂಗಾಳ) – ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಗೂ ಮುನ್ನ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮೊದಲು ವಾಗ್ವಾದ ನಡೆದು ನಂತರ ಅದು ಮಾರಾಮಾರಿ ಮತ್ತು ಕಲ್ಲು ತೂರಾಟಕ್ಕೆ ತಿರುಗಿತು. ಇದರಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಗಾಯಗೊಂಡಿರುವ ಮಾಹಿತಿ ಹೊರಬೀಳುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

1. ಬಂಗಾಳದ ಸಚಿವೆ ಡಾ. ಶಶಿ ಪಾಂಜಾ ಅವರ ಗಿರೀಶ್ ಪಾರ್ಕ್ ಪ್ರದೇಶದಲ್ಲಿರುವ ಕಚೇರಿ ಮೇಲೆ ಭಾಜಪ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಇದರಲ್ಲಿ ಅನೇಕ ತೃಣಮೂಲ ಕಾರ್ಯಕರ್ತರು ಗಾಯಗೊಂಡಿದ್ದಾರೆ.

2. ಇನ್ನೊಂದೆಡೆ ಆರೋಪವನ್ನು ತಳ್ಳಿಹಾಕಿರುವ ಭಾಜಪ, ಪ್ರಧಾನಿ ಮೋದಿ ಅವರ ಸಭೆಗೆ ತೆರಳುತ್ತಿದ್ದ ಭಾಜಪ ವಾಹನಗಳ ಮೇಲೆ ತೃಣಮೂಲ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.