ಸೌರಶಕ್ತಿಯ ಮೂಲಕ 50 ಸಾವಿರ ಭಕ್ತರಿಗೆ ಮಹಾಪ್ರಸಾದ ಲಭ್ಯ!

  • ಶೆಗಾಂವ್‌ನ ಶ್ರೀ ಗಜಾನನ ಮಹಾರಾಜ್ ಸಂಸ್ಥಾನದ ಆತ್ಮನಿರ್ಭರತೆ!

  • ಶೇ. 70 ರಷ್ಟು ಅಡುಗೆಗೆ ಸೌರಶಕ್ತಿ, ಉಳಿದ ಶೇ. 30 ರಷ್ಟು ಅಡುಗೆಗೆ ಸಾಂಪ್ರದಾಯಿಕ ಕಟ್ಟಿಗೆಯ ಬಳಕೆ!

ಶೆಗಾಂವ್ (ಬುಲ್ಡಾಣ ಜಿಲ್ಲೆ) – ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಇಂಧನದ ಕೊರತೆ ಕಂಡುಬರುತ್ತಿದೆ; ಆದರೆ ಇಲ್ಲಿನ ಶ್ರೀ ಸಂತ ಗಜಾನನ ಮಹಾರಾಜ್ ಸಂಸ್ಥಾನವು ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಇಲ್ಲಿ ಪ್ರತಿದಿನ 50 ಸಾವಿರ ಭಕ್ತರಿಗೆ ನಿರಂತರವಾಗಿ ಮಹಾಪ್ರಸಾದವನ್ನು ವಿತರಿಸಲಾಗುತ್ತಿದೆ. ಸಂಸ್ಥಾನವು ಇಂಧನವು ಹೇರಳವಾಗಿ ಲಭ್ಯವಿದ್ದಾಗಲೇ ಪರ್ಯಾಯ ಶಕ್ತಿಯ ಬಗ್ಗೆ ಚಿಂತನೆ ನಡೆಸಿತು.

ಇಲ್ಲಿನ ಶೇ. 70 ರಷ್ಟು ಅಡುಗೆಯನ್ನು ಕೇವಲ ಸೌರಶಕ್ತಿಯ ಮೂಲಕ ಮಾಡಲಾಗುತ್ತದೆ ಮತ್ತು ಉಳಿದ ಶೇ. 30 ರಷ್ಟು ಅಡುಗೆಗೆ ಸಾಂಪ್ರದಾಯಿಕ ಕಟ್ಟಿಗೆಯನ್ನು ಬಳಸಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಶೆಗಾಂವ್ ಸಂಸ್ಥಾನವು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ‘ಆತ್ಮನಿರ್ಭರತೆ’ (ಸ್ವಾವಲಂಬನೆ) ಸಾಧಿಸಿದೆ!